‘ಪ್ರೀತಿಯ ಕ್ರಿಕೆಟ್.. ನನಗೆ ಇನ್ನೊಂದು ಅವಕಾಶ ಕೊಡು’ – ಕರುಣ್ ನಾಯರ್ ಟ್ವೀಟ್ ವೈರಲ್

‘ಪ್ರೀತಿಯ ಕ್ರಿಕೆಟ್.. ನನಗೆ ಇನ್ನೊಂದು ಅವಕಾಶ ಕೊಡು’ – ಕರುಣ್ ನಾಯರ್ ಟ್ವೀಟ್ ವೈರಲ್

ಕರ್ನಾಟಕ ತಂಡದ ಆಟಗಾರ ಕರುಣ್ ನಾಯರ್ ಅವರ ಭಾವನಾತ್ಮಕ ಟ್ವೀಟ್ ಈಗ ಫುಲ್ ವೈರಲ್ ಆಗಿದೆ. ರಣಜಿ ತಂಡದಲ್ಲಿ ತನ್ನ ಹೆಸರು ಕೈಬಿಟ್ಟಿದ್ದಕ್ಕೆ ಬೇಸರಗೊಂಡು, ಈ ರೀತಿ ಭಾವನಾತ್ಮಕ ಪೋಸ್ಟ್ ಹಾಕಿದ್ದಾರೆ ಎನ್ನಲಾಗ್ತಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಸಿಡಿಸಿದ ಎರಡನೇ ಭಾರತೀಯ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದ್ದ ಕರ್ನಾಟಕ ತಂಡದ ಆಟಗಾರ ಕರುಣ್ ನಾಯರ್ ಹೆಸರು, ಶನಿವಾರ ಪ್ರಕಟಿಸಲಾದ ರಣಜಿ ಕ್ರಿಕೆಟ್ ತಂಡದಲ್ಲಿ ಇರಲಿಲ್ಲ. ಇತ್ತೀಚಿನ ದಿನಗಳಲ್ಲಂತೂ ಫಾರ್ಮ್ ಕಳೆದುಕೊಂಡಿರುವ ಕರುಣ್ ನಾಯರ್ , ಇತ್ತೀಚೆಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಮತ್ತು ವಿಜಯ್ ಹಜಾರೆ ಟ್ರೋಫಿ ಟೂರ್ನಿಗಳಿಗೂ ತಂಡದಲ್ಲಿ ಪರಿಗಣಿಸಿರಲಿಲ್ಲ.

ಇದನ್ನೂ ಓದಿ :  ಭಾರತ-ಬಾಂಗ್ಲಾ 3ನೇ ಏಕದಿನ ಪಂದ್ಯ: ಟೀಂ ಇಂಡಿಯಾಗೆ ಭರ್ಜರಿ ಗೆಲುವು-ಸರಣಿ ಬಾಂಗ್ಲಾ ವಶ

ರಾಷ್ಟ್ರೀಯ ತಂಡದಲ್ಲಿ ಅಷ್ಟೇನು ಅವಕಾಶ ಸಿಗದಿದ್ದರೂ, ಕರ್ನಾಟಕ ತಂಡದ ಪ್ರಮುಖ ಆಟಗಾರರಾಗಿ ಕರುಣ್ ನಾಯರ್ ಟೀಮ್‌ಗೆ ಬಲ ತುಂಬಿದ್ದರು. ಆದರೆ, ಈಗ ರಣಜಿ ಟೂರ್ನಿಯಲ್ಲೂ ಅವಕಾಶ ಇಲ್ಲದಾಗಿದೆ. ಈ ಮೊದಲು ರಣಜಿ ಟೂರ್ನಿಯಲ್ಲಿ ಕರ್ನಾಟಕದ ಸಂಭವನೀಯರ ತಂಡದಲ್ಲಿ ಕರುಣ್ ನಾಯರ್ ಗೆ ಅವಕಾಶ ಕಲ್ಪಿಸಲಾಗಿತ್ತು. ಶನಿವಾರ ಪ್ರಕಟಿಸಲಾದ ಕರ್ನಾಟಕ ಕ್ರಿಕೆಟ್ ತಂಡದಲ್ಲಿ ಹೆಸರು ಕೈಬಿಡಲಾಗಿದೆ. ಉದಯೋನ್ಮುಖ ಆಟಗಾರರಿಗೆ ಅವಕಾಶ ನೀಡಲಾಗಿದೆ. ಇದರ ಬೆನ್ನಲ್ಲೇ ಕರುಣ್ ನಾಯರ್ ಮಾಡಿರುವ ಟ್ವೀಟ್ ಈಗ ಫುಲ್ ವೈರ್ ಆಗಿದೆ. ‘ಪ್ರೀತಿಯ ಕ್ರಿಕೆಟ್.. ನನಗೆ ಇನ್ನೂ ಒಂದು ಅವಕಾಶ ನೀಡಿ’ ಎಂದು ಕರುಣ್ ನಾಯರ್ ಟ್ವೀಟ್ ಮಾಡಿದ್ದಾರೆ.

suddiyaana