ಕಿಚ್ಚನ ಬಿಗ್ ಬಾಸ್ ಫಿನಾಲೆ ಸಂದೇಶಕ್ಕೆ ಕುಣಿದು ಕುಪ್ಪಳಿಸಿದ ಕಾರ್ತಿಕ್ – ಸುದೀಪ್ ಮೆಸೇಜ್ ನೋಡಿ ಮನೆ ಮಂದಿ ಥ್ರಿಲ್

ಕಿಚ್ಚನ ಬಿಗ್ ಬಾಸ್ ಫಿನಾಲೆ ಸಂದೇಶಕ್ಕೆ ಕುಣಿದು ಕುಪ್ಪಳಿಸಿದ ಕಾರ್ತಿಕ್ – ಸುದೀಪ್ ಮೆಸೇಜ್ ನೋಡಿ ಮನೆ ಮಂದಿ ಥ್ರಿಲ್

ಕನ್ನಡ ಬಿಗ್ ಬಾಸ್ ಸೀಸನ್ 10 ಈ ವಾರ ಕಂಪ್ಲೀಟ್ ಡಿಫ್ರೆಂಟ್ ಆಗಿತ್ತು. ಆರಂಭದ ದಿನಗಳಿಂದಲೂ ಇವರೆಗೂ ಬರೀ ಜಗಳವೇ ಇರುತ್ತಿದ್ದ ಮನೆಯಲ್ಲಿ ಬಿಗ್ ಬಾಸ್ ಶಾಲೆ ಕಾನ್ಸೆಪ್ಟ್ ಇದ್ದಿದ್ದರಿಂದ ಎಲ್ಲರೂ ಸೈಲೆಂಟ್ ಆಗಿದ್ರು. ಆದರೆ ಟಾಸ್ಕ್ ಮುಗಿದ ಬಳಿಕ ಸ್ವಲ್ಪ ಹಳೇ ದಿನಗಳತ್ತ ಮರಳಿತ್ತು. ಡ್ರೋನ್ ಪ್ರತಾಪ್ ಮನೆಯಲ್ಲಿ ಮುದ್ದೆ ಮಾಡಿದ್ದ ಬಳಿಕ ಗ್ಯಾಸ್ ಆಫ್ ಆಗಿತ್ತು. ಇದ್ರಿಂದ ಕೆರಳಿ ಕೆಂಡವಾಗಿದ್ದ ವಿನಯ್ ಮುದ್ದೆ ಮಾಡಿದ್ದರಿಂದಲೇ ಗ್ಯಾಸ್ ನಿಲ್ಲಿಸಿದ್ದಾರೆ. ನನಗೆ ಊಟ ಅಷ್ಟೇ ಬೇಕು ಎಂದು ಪ್ರತಾಪ್ ಮೇಲೆ ಕೆಂಡ ಕಾರುತ್ತಿದ್ದರು. ಆದರೆ ಮಧ್ಯರಾತ್ರಿ ವೇಳೆಗೆ ಯಾರೂ ಊಹಿಸದ ರೀತಿಯಲ್ಲಿ ಕಿಚ್ಚನ ಕೈಯಿಂದ ಭರ್ಜರಿ ಊಟ ಬಂದಿತ್ತು. ಇಲ್ಲಿ ಬರೀ ಊಟ ಮಾತ್ರ ಬಂದಿರಲಿಲ್ಲ. ಕಿಚ್ಚನ ಲೆಟರ್ ಕೂಡ ಸಿಕ್ಕಿತ್ತು. ಆದರೆ ಲೆಟರ್ ನಲ್ಲಿ ಬರೆದಿದ್ದ ಮೆಸೇಜ್ ಭಾರೀ ಚರ್ಚೆಯಲ್ಲಿದೆ.

ಇದನ್ನೂ ಓದಿ : ರಾಗಿ ಮುದ್ದೆ ಮಾಡಿಕೊಟ್ಟು ಪೇಚಿಗೆ ಸಿಲುಕಿದ ಪ್ರತಾಪ್ – ಗ್ಯಾಸ್ ಬಾರದೆ ಬಿಗ್ ಬಾಸ್ ಮನೆಯಲ್ಲಿ ಮತ್ತೆ ಗಲಾಟೆ

ಶುಕ್ರವಾರದ ಎಪಿಸೋಡ್ ನಲ್ಲಿ ರಾತ್ರಿ ವೇಳೆಗೆ ಗ್ಯಾಸ್ ಆಫ್ ಇಡೀ ಮನೆ ಮಂದಿ ಹಸಿವಿನಿಂದಲೇ ಇದ್ದರು. ಆದರೆ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಮನೆಯ ಸದಸ್ಯರಿಗೆಲ್ಲ ತಮ್ಮ ಕೈಯಾರೆ ರೆಡಿ ಮಾಡಿದ ಅಡುಗೆಯನ್ನು ಕಿಚ್ಚ ಸುದೀಪ್ ಕಳುಹಿಸಿದ್ದರು. ಅಷ್ಟೇ ಅಲ್ಲದೆ ಪ್ರತಿಯೊಬ್ಬರಿಗೂ ಊಟದ ಜೊತೆಗೆ ಒಂದೊಂದು ಪತ್ರವನ್ನೂ ಕೈಯಾರೆ ಬರೆದು ಕಳಿಸಿದ್ದರು. ಆ ಪತ್ರದಲ್ಲಿ ಆಯಾ ಸ್ಪರ್ಧಿಗಳಿಗೆ ಅತ್ಯಮೂಲ್ಯವಾದ ಸಲಹೆಗಳಿದ್ದವು. ಇದು ಸರ್ಪೈಸ್‌. ಈವತ್ತಿನ ಅಡುಗೆ, ಕಿಚ್ಚನ ಕೈಯಡುಗೆ ಎಂದು ಹೇಳಿರುವ ಕಿಚ್ಚನ ಮಾತುಗಳ ಪ್ರೋಮೋವನ್ನ ಬಿಗ್ ಬಾಸ್ ಮನೆಯಲ್ಲಿ ಹಾಕಲಾಗಿತ್ತು. ಇದ್ರಿಂದ ಅಲ್ಲಿದ್ದ ಮನೆ ಮಂದಿ ಕುಣಿದು ಕುಪ್ಪಳಿಸಿದ್ದರು. ಊಟಕ್ಕೂ ಮುನ್ನವೇ ಮನೆಯ ಸದಸ್ಯರಿಗೆಲ್ಲಾ ಕಿಚ್ಚನ ಮೆಸೇಜ್ ಬಂದಿತ್ತು. ಅದರಲ್ಲೂ ಕಾರ್ತಿಕ್ ಗೆ ನೀಡಿದ್ದ ಮೆಸೇಜ್ ನಿಂದ ಕುಣಿದು ಕುಪ್ಪಳಿಸಿದ್ದರು.ಪ್ರತಿಯೊಬ್ಬರೂ ತಮ್ಮ ಪತ್ರವನ್ನು ಕೈಯಲ್ಲಿ ಹಿಡಿದುಕೊಂಡು ಅದನ್ನು ಓದಿದ್ದಾರೆ. ಎಲ್ಲರಿಗಿಂತ ಕಾರ್ತಿಕ್ ಹೆಚ್ಚು ಸಂತೋಷವಾಗಿದ್ದರು. ಯಾಕಂದ್ರೆ ಪತ್ರದಲ್ಲಿ  ‘ಹೆಡ್​ ಶೇವ್​ ಮಾಡಿ ಆಟದ ಮೇಲಿರೋ ನಿಮ್ಮ ಡೆಡಿಕೇಶನ್​ ತೋರಿಸಿದ್ರಿ, ಫೋಕಸ್ ಸರಿ ಮಾಡಿ. ಫೈನಲಿಸ್ಟ್​ನಲ್ಲಿ ನಿಮ್ಮ ಹೆಸರು ಸೇವ್​ ಮಾಡ್ಕೊಳಿ’ ಅಂತ ಬರೆಯಲಾಗಿತ್ತು. ಇದನ್ನು ಓದಿದ ಕಾರ್ತಿಕ್ ಖುಷಿಗೆ ಪಾರವೇ ಇರಲಿಲ್ಲ. ಮನೆಯವರಿಗೆಲ್ಲಾ ಪತ್ರ ತೋರಿಸಿ ಮನೆ ತುಂಬಾ ಓಡಾಡಿದ್ದರು.

‘ಗೊತ್ತಿರುವ ದಾರಿಯಲ್ವಾ ಅಂತ ಅಂದುಕೊಂಡು ಹೋಗೋರೇ ಎಡವೋದು ಜಾಸ್ತಿ. ಆದರೆ, ದಾರಿ ಸರಿಯಿದ್ದು ಇಡುವ ಹೆಜ್ಜೆನಾ ಸ್ವಲ್ಪ ಅಲರ್ಟ್ ಆಗಿ ಇಟ್ಟರೆ ಏನಾಗಬೇಕೋ, ಅದೇ ಆಗುತ್ತೆ’ ಎಂದು ಮೈಕಲ್‌ಗೆ ಸಂದೇಶ ಸಿಕ್ಕಿತ್ತು. ಸಂದೇಶ ಪವಿ ಪೂವಪ್ಪಗೆ ‘ಗೇಮ್ ಚೇಂಜರ್ ಆಗಿ ಎಂಟ್ರಿಕೊಟ್ರಿ. ಆದರೆ ನೀವೇ ಚೇಂಜ್ ಆಗ್ಬಿಟ್ರಲ್ಲಾ. ಚೇಂಜ್ ಮಾಡೋಕೆ ಇನ್ನೂ ಟೈಮ್ ಇದೆ. ಟಿಕ್ ಟಿಕ್ ಟಿಕ್’ ಎಂಬ ಬರಹವಿತ್ತು.  ‘ಹಾನೆಸ್ಟಿ + ಸ್ಟ್ರಾಟೆಜಿ = ಗೆಲುವು. ಹಾನೆಸ್ಟಿ – ಸ್ಟ್ರಾಟೆಜಿ = ಸೋಲು. ಈ ಸಿಂಪಲ್ ಫಾರ್ಮುಲಾಗಳನ್ನ ಜಸ್ಟ್ ಅಪ್ಲೈ ಮಾಡಿ ನೋಡಿ. ಇದು ಗೆಲುವಿನ ದಾರಿ ತೋರಿಸಬಹುದು’ ಎಂಬ ಸಂದೇಶ ಡ್ರೋನ್ ಪ್ರತಾಪ್‌ಗೆ ಲಭಿಸಿತು. ಇನ್ನು ಸಿರಿ ಅವರಿಗೆ ‘ಸಿಹಿಯಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ. ಬರೀ ಸಿಹಿ ಅಷ್ಟೇ ಇದ್ದರೆ, ಸ್ವಲ್ಪ ಕಷ್ಟನೇ. ಉಪ್ಪು, ಖಾರ ಸೇರಿಸಿ ನೋಡಿ ಆಟ ಬದಲಾಗುತ್ತೆ’ ಎಂದು ಬರೆಯಲಾಗಿತ್ತು. ‘ಅರ್ಧ ಕಪ್ ಖಾಲಿಯಾಗಿದೆ. ಅರ್ಧ ಕಪ್ ತುಂಬಿದೆ ಅನ್ನೋದು ದೃಷ್ಟಿಕೋನ. ಕಪ್‌ನಲ್ಲಿ ನೀರಿದೆ ಅನ್ನೋದು ವಾಸ್ತವ’ ಎಂಬ ಸಂದೇಶ ಸಂಗೀತಾಗೆ ಸಿಕ್ಕಿದೆ.  ಇನ್ನು ವಿನಯ್ ಗೆ ‘ಜರ್ನಿಯಲ್ಲಿ ಇಳಿಜಾರು ಬಂದಾಗ ಚೇಂಜ್ ಮಾಡಬೇಕಾಗಿರೋದು ಗೇರ್‌ ಅಷ್ಟೇ. ಗಾಡಿಯನ್ನಲ್ಲ ಥಿಂಕ್ ಎಂಬ ಸಂದೇಶವಿತ್ತು. ‘ಒಂದೇ ಬಾಣದಿಂದ ಯುದ್ಧ ಗೆಲ್ಲೋಕೆ ಆಗುತ್ತಾ? ಬತ್ತಳಿಕೆ ಕಡೆ ಕಣ್ಣಾಡಿಸಿ. ಬೇರೆ ಬಾಣಗಳು ಸಿಕ್ಕರೂ ಸಿಗಬಹುದು. ಆಲ್ ದಿ ಬೆಸ್ಟ್’ ಎಂಬ ಸಂದೇಶ ನಮ್ರತಾಗೆ ಲಭಿಸಿತು. ಇನ್ನು ತನಿಷಾ ಕುಪ್ಪಂಡಗೆ  ‘ಸ್ಪೀಕರ್‌ ಸೂಪರ್ ಆಗೋದಕ್ಕೆ ಕ್ವಾಲಿಟಿ ಎಷ್ಟೋ, ಸೌಂಡ್‌ ಕೂಡ ಅಷ್ಟೇ ಮುಖ್ಯ. ಸೌಂಡ್ ಮುಖ್ಯ’ ಎಂಬ ಮೆಸೇಜ್ ನೀಡಲಾಗಿತ್ತು. ಇನ್ನು ‘ಬಿಗ್ ಬಾಸ್‌ ಒಂದು ಮೈಂಡ್‌ ಗೇಮ್. ಏನ್ ಹೇಳಿ.. ಮೈಂಡ್‌ ಗೇಮ್‌’ ಎಂಬ ಸಂದೇಶ ಅವಿನಾಶ್‌ ಶೆಟ್ಟಿಗೆ ಸಿಕ್ತು. ಇನ್ನು ತುಕಾಲಿ ಸಂತೋಷ್​ಗೆ ‘ಈ ನಿಮ್ಮ ಜರ್ನಿಯಲ್ಲಿ ಕಾಮಿಡಿ ಜೊತೆಗೆ ಇತ್ತೀಚೆಗೆ ಸೇರಿಕೊಂಡಿರುವ ಕಲರ್ಸ್ ನೋಡಿದ್ರೆ ನಿಮ್ಮ ರೇನ್‌ಬೋ ರೆಬೆಲ್ ಆಗಿದೆ. ಕೀಪ್ ಇಟ್ ಅಪ್’ ಎಂಬ ಸಂದೇಶವಿತ್ತು.  ವರ್ತೂರ್ ಸಂತೋಷ್​ಗೆ ‘ಕಾಲ ಕಾಲಕ್ಕೆ ಮಾತಾಡೋದಕ್ಕೂ, ಕಾಲ ಬಂದಾಗ ಮಾತಾಡೋದಕ್ಕೂ ಇರೋ ವ್ಯತ್ಯಾಸವನ್ನ ಕಂಡು ಹಿಡಿದಿದ್ದೀರಾ ಅನ್ಸುತ್ತೆ. ಇದನ್ನ ಕಾಪಾಡಿಕೊಳ್ಳಿ’ ಎಂದು ಬರೆಯಲಾಗಿತ್ತು.  ಹೀಗೆ ಬಂದ ಕಿಚ್ಚನ ಮೆಸೇಜ್ ಹಾಗೂ ಅವರ ಕೈಯ್ಯಾರೆ ಮಾಡಿದ ಅಡುಗೆ ತಿಂದ ಸ್ಪರ್ಧಿಗಳು ಫುಲ್ ಖುಷಿಯಲ್ಲಿ ತೇಲಾಡಿದ್ರು.

Shantha Kumari