ಕಾಂಗ್ರೆಸ್ ಕಲೆಕ್ಷನ್ ರೇಟ್ ಕಾರ್ಡ್ ರಿಲೀಸ್ – ಸರ್ಕಾರಿ ಸಂಸ್ಥೆ, ನಿಗಮಗಳಿಂದ ಟಾರ್ಗೆಟ್ ಫಿಕ್ಸ್ ಮಾಡಿರೋದೆಷ್ಟು?

ಕಾಂಗ್ರೆಸ್ ಕಲೆಕ್ಷನ್ ರೇಟ್ ಕಾರ್ಡ್ ರಿಲೀಸ್ – ಸರ್ಕಾರಿ ಸಂಸ್ಥೆ, ನಿಗಮಗಳಿಂದ ಟಾರ್ಗೆಟ್ ಫಿಕ್ಸ್ ಮಾಡಿರೋದೆಷ್ಟು?

ಬೆಂಗಳೂರು: ಕಾಂಗ್ರೆಸ್‌, ಬಿಜೆಪಿ ನಡುವಿನ ಜಟಾಪಟಿ ಜೋರಾಗಿದೆ. ಪರಸ್ಪರ ಆರೋಪ ಪ್ರತ್ಯಾರೋಪ ಮಾಡುತ್ತಲೇ ಇದ್ದಾರೆ. ಇದೀಗ ಕಲೆಕ್ಷನ್‌ ವಿಚಾರವಾಗಿ ರಾಜ್ಯ ಬಿಜೆಪಿ ಟ್ವೀಟ್‌ ಮಾಡಿದೆ. ಬೆಂಗಳೂರಿನಲ್ಲಿರುವ ದೊಡ್ಡ ದೊಡ್ಡ ಸರ್ಕಾರಿ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ಫಿಕ್ಸ್ ಮಾಡಿರುವ ದರದ ಪಟ್ಟಿಯೊಂದನ್ನು ಬಿಜೆಪಿ ಬಿಡುಗಡೆ ಮಾಡಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ,  ‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) 50 ಕೋಟಿ ರೂ., ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (ಬಿಎಂಟಿಸಿ) 500 ಕೋಟಿ ರೂ., ಬಿಡಬ್ಲ್ಯೂ ಎಸ್ಎಸ್ ಬಿಗೆ 50 ಕೋಟಿ ರೂ…’ ಹೀಗೆ, ಬೆಂಗಳೂರಿನಲ್ಲಿರುವ ದೊಡ್ಡ ದೊಡ್ಡ ಸರ್ಕಾರಿ ಸಂಸ್ಥೆಗಳಿಗೆ ಹೀಗೊಂದು ದರವನ್ನು ಫಿಕ್ಸ್ ಮಾಡಿರುವ ಪಟ್ಟಿಯೊಂದನ್ನು ರಾಜ್ಯ ಬಿಜೆಪಿ ಬಿಡುಗಡೆ ಮಾಡಿದೆ.

ಇದನ್ನೂ ಓದಿ: ಕಳೆದ 6 ತಿಂಗಳಿಂದ ಪಡಿತರ ತೆಗೆದುಕೊಳ್ಳದ ರೇಷನ್‌ ಕಾರ್ಡ್‌ಗಳು ರದ್ದು!

ಯಾಕೆ ಈ ಪಟ್ಟಿ ಎಂದು ಕೇಳ್ತೀರಾ… ವಿಷಯ ಇಲ್ಲಿದೆ ನೋಡಿ. ಉದ್ಯಾನ ನಗರಿಯ ಕೆಲವು ಸಿರಿವಂತರ ಮನೆಗಳ ಮೇಲೆ ಐಟಿ ರೈಡ್ ಆದಾಗಿನಿಂದ ಕಾಂಗ್ರೆಸ್ ವಿರುದ್ಧ ಲೂಟಿಗಳ ಆರೋಪಗಳನ್ನು ಮಾಡುತ್ತಿರುವ ರಾಜ್ಯ ಬಿಜೆಪಿ, ಇತ್ತೀಚೆಗೆ ಕಾಂಗ್ರೆಸ್ ಹೈಕಮಾಂಡ್ ನಾಯಕರು ಏಕಾಏಕಿ ಬೆಂಗಳೂರಿಗೆ ಬಂದು ಸಭೆ ನಡೆಸಿದ್ದೂ ಸಹ ಇದೇ ಲೂಟಿಗೆ ಸಂಬಂಧಿಸಿದ್ದು ಎಂದು ಆರೋಪಿಸಿದೆ. ಈ ಎಲ್ಲಾ ಹಿನ್ನೆಲೆಯಲ್ಲಿ, ರೇಟ್ ಕಾರ್ಡನ್ನು ಬಿಡುಗಡೆ ಮಾಡಿದೆ ಬಿಜೆಪಿ.

ಬಿಜೆಪಿ ಮಾಡಿರುವ ಟ್ವೀಟ್ ನಲ್ಲಿ ಈ ರೀತಿ ಬರೆಯಲಾಗಿದೆ. “ರಾಜ್ಯಕ್ಕೆ ಆಗಮಿಸಿದ್ದ ಹೈಕಮಾಂಡ್‌ನ ಕಲೆಕ್ಷನ್‌ ಏಜೆಂಟರುಗಳಾದ ಸುರ್ಜೇವಾಲಾ ಮತ್ತು ಕೆ.ಸಿ. ವೇಣುಗೋಪಾಲ್‌ ಅವರು ನಿಗಮ ಮಂಡಳಿಗಳ ನೇಮಕಕ್ಕೆ ರೇಟ್‌ ಕಾರ್ಡ್‌ ಫಿಕ್ಸ್‌ ಮಾಡಿ ಹೋಗಿದ್ದಾರೆ” ಎಂದು ಬಿಜೆಪಿ ಆರೋಪಿಸಿದೆ.

ಬಿಜೆಪಿಯ ರೇಟ್ ಪಟ್ಟಿ

  • ಬಿಡಿಎ – ₹50 ಕೋಟಿ
  •  ಬಿಡಬ್ಲೂಎಸ್‌ಎಸ್‌ಬಿ – ₹45 ಕೋಟಿ
  • ಕೆಆರ್‌ಐಡಿಎಲ್ – ₹20 ಕೋಟಿ
  • ಕಿಯೋನಿಕ್ಸ್ – ₹15 ಕೋಟಿ
  • ಕರ್ನಾಟಕ ಉಗ್ರಾಣ ನಿಗಮ – ₹12 ಕೋಟಿ
  • ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ – ₹10 ಕೋಟಿ

ಇಷ್ಟು ಹೇಳಿರುವ ಬಿಜೆಪಿ, ಇನ್ನು ಹತ್ತು ಹಲವು ನಿಗಮಗಳಿಗೆ ಕಲೆಕ್ಷನ್‌ ಮಾಸ್ಟರ್ಸ್‌ಗಳಾದ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರು ನಡೆಸುವ ಹರಾಜು ಪ್ರಕ್ರಿಯೆಯಲ್ಲಿ ಇನ್ನೂ ಹೆಚ್ಚು ಮೊತ್ತದ ಕಲೆಕ್ಷನ್‌ ಆಗುವ ಸಾಧ್ಯತೆ ಇದೆಯಂತೆ!’’ ಎಂದು ಬಿಜೆಪಿ ಹೇಳಿದೆ.

ಇದರ ಬೆನ್ನಲ್ಲೇ ಮತ್ತೊಂದು ಟ್ವೀಟ್ ಮಾಡಿರುವ ಪಕ್ಷ,  ಬಡವರ ಹೆಸರು ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷದ ಕಲೆಕ್ಷನ್ ಹಾವಳಿಗೆ ಕರ್ನಾಟಕದ ಬಡ ಮತ್ತು ಮಧ್ಯಮ ವರ್ಗದ ಜನ ತತ್ತರಿಸಿದ್ದಾರೆ. ಅಗತ್ಯ ಸೌಕರ್ಯಗಳಿಗೂ ಕೈ ಬಿಸಿ ಮಾಡಬೇಕಾದ ಕಾರಣ ಮಹಿಳೆಯರಂತೂ ಬೇಸತ್ತಿದ್ದಾರೆ ಎಂದು ಟೀಕಿಸಿದೆ.

ಸ್ಟಾಲಿನ್ ಜತೆಗಿನ ಹೊಂದಾಣಿಕೆಗಾಗಿ ಬರದಲ್ಲೂ ಕಾವೇರಿ ನೀರು ಹರಿಬಿಟ್ಟ ಕಾಂಗ್ರೆಸ್ ಸರ್ಕಾರಕ್ಕೆ ಮನೆಗಳಿಗೆ ನೀರು ಬಿಡಲು ಮಾತ್ರ ಲಂಚ ಕೊಡಲೇಬೇಕು. ಮೇಲಿನಿಂದ ಕೆಳ ಹಂತದವರೆಗೂ ಸರ್ಕಾರಿ ವ್ಯವಸ್ಥೆಯೇ ಲಂಚಕ್ಕಾಗಿ ಹಾತೊರೆಯಲು, ಸರ್ಕಾರ ನಡೆಸುವ ಕಲೆಕ್ಷನ್ ಮಾಸ್ಟರ್‌ಗಳೇ ಸ್ಫೂರ್ತಿ ಎಂದು ಕರ್ನಾಟಕ ಬಿಜೆಪಿ ಹೇಳಿದೆ.

Shwetha M