ಶತಕ ದಾಟಿದ ಕಾಂಗ್ರೆಸ್‌ – ದೆಹಲಿ ಕಚೇರಿಯಲ್ಲಿ ಸಂಭ್ರಮ

ಶತಕ ದಾಟಿದ ಕಾಂಗ್ರೆಸ್‌ – ದೆಹಲಿ ಕಚೇರಿಯಲ್ಲಿ ಸಂಭ್ರಮ

ಬೆಂಗಳೂರು: ಮೇ10 ರಂದು ಒಂದೇ ಹಂತದಲ್ಲಿ ಕರ್ನಾಟಕದ 224 ಕ್ಷೇತ್ರಗಳಿಗೆವಿಧಾನಸಭೆ ಚುನಾವಣೆಗೆ ಮತದಾನ ನಡೆದಿದ್ದು, ಮತಗಳ ಎಣಿಕೆ ಕಾರ್ಯ ನಡೆಯುತ್ತಿದೆ. 224 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ-79, ಕಾಂಗ್ರೆಸ್​-108, ಜೆಡಿಎಸ್​​-32 ಮತ್ತು ಇತರೆ 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್‌ ಮುನ್ನಡೆ ಸಾಧಿಸುತ್ತಿದ್ದಂತೆ ಕಾಂಗ್ರೆಸ್‌ ನ ದೆಹಲಿ ಕಚೇರಿಯಲ್ಲಿ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ.

ಹೈವೋಲ್ಟೇಜ್ ಕ್ಷೇತ್ರವಾಗಿ ಅಥಣಿಯಲ್ಲಿ 4ನೇ ಸುತ್ತಿನ ಮತ‌ ಎಣಿಕೆಯಲ್ಲಿ ಲಕ್ಷ್ಮಣ್ ಸವದಿ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ – 9849, ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಸವದಿ – 22765 ಮತಗಳನ್ನು ಪಡೆದಿದ್ದಾರೆ. ಇನ್ನು ಯಮಕನಮರಡಿ ವಿಧಾನಸಭಾ ಕ್ಷೇತ್ರದಲ್ಲಿ 8 ನೇ ಸುತ್ತಿನಲ್ಲೂ ಸತೀಶ ಜಾರಕಿಹೊಳಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬಿಜೆಪಿ ಬಸವರಾಜ ಹುಂದ್ರಿ – 6894 ಮತಗಳು ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ ಸತೀಶ್ ಜಾರಕಿಹೊಳಿಗೆ 36404 ಮತಗಳು ಜೆಡಿಎಸ್ ಮಾರುತಿ ಅಷ್ಟಗಿಗೆ 10515 ಮತಗಳು ಪಡೆದಿದ್ದಾರೆ.

ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜಮೀರ್​ ಅಹ್ಮದ್​ ಖಾನ್​ 20 ಸಾವಿರ ಮತಗಳ ಅಂತರದಿಂದ ಮುನ್ನಡೆ ಸಾಧಿಸಿದ್ದಾರೆ.  ಜಯನಗರ ಕಾಂಗ್ರೆಸ್ ಸೌಮ್ಯಾರೆಡ್ಡಿಗೆ ಹಿನ್ನಡೆಯಾಗಿದೆ. ಮಹದೇವಪುರ ಬಿಜೆಪಿಯ ಮಂಜುಳಾ ಮುನ್ನಡೆ ಸಾಧಿಸಿದ್ದಾರೆ. ಶಿವಾಜಿನಗರ ಕಾಂಗ್ರೆಸ್ ರಿಜ್ವಾನ್​ ಗೆ ಮುನ್ನಡೆಯಾಗಿದೆ. ಪದ್ಮನಾಭನಗರ ಬಿಜೆಪಿ ಆರ್​.ಅಶೋಕ್ ಮುನ್ನಡೆ ಸಾಧಿಸಿದ್ದಾರೆ.

suddiyaana