ಆದಷ್ಟು ಬೇಗ ಬನ್ನಿ ವೋಟ್ ಮಾಡಿ – ಮತದಾನ ಮಾಡಿದ ಅಭ್ಯರ್ಥಿಗಳಿಂದ ಮನವಿ

ಆದಷ್ಟು ಬೇಗ ಬನ್ನಿ ವೋಟ್ ಮಾಡಿ – ಮತದಾನ ಮಾಡಿದ  ಅಭ್ಯರ್ಥಿಗಳಿಂದ ಮನವಿ

ಕಂದಾಯ ಸಚಿವ ಆರ್. ಅಶೋಕ್ ಮತದಾನ ಮಾಡಿದರು. ಪತ್ನಿ ಪ್ರಮೀಳಾ ಅವರೊಂದಿಗೆ ಸೈಂಟ್ ಕ್ಲಾರೆಟ್ ಸ್ಕೂಲ್ ನಲ್ಲಿ ಆರ್ ಅಶೋಕ ಮತದಾನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಆರ್. ಅಶೋಕ್, ಮಳೆ ಬರುವ ಸಾಧ್ಯತೆ ಇದೆ. ಈ ಕಾರಣಕ್ಕಾಗಿ ಆದಷ್ಟು ಬೇಗ ಬಂದು ಓಟ್ ಮಾಡಿ ಎಂದು ಮನವಿ ಮಾಡಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳ್ಕರ್ ಮತದಾನ ಮಾಡಿದರು.

ವಿಜಯನಗರದ ಮರಾಠಿ ಶಾಲೆಯೊಂದರಲ್ಲಿ ತಮ್ಮ ಮತ ಚಲಾಯಿಸಿದರು. ಕುಟುಂಬದ ಸದಸ್ಯರೊಂದಿಗೆ ಆಗಮಿಸಿದ ಲಕ್ಷ್ಮಿ ಹೆಬ್ಬಾಳ್ಕರ್ ಮತ ಚಲಾಯಿಸಿದರು. ಮತ ಚಲಾಯಿಸಲು ಬಂದಾಗ ಲಕ್ಷ್ಮಿ ಹೆಬ್ಬಾಳ್ಕರ್ ಕೈಯಲ್ಲಿ ಅವರ ಆರಾಧ್ಯ ದೈವ ನೊಣವಿನಕೆರೆ ಅಜ್ಜಯ್ಯನ ಫೋಟೋ ಇತ್ತು. ಲಕ್ಷ್ಮಿ ಹೆಬ್ಬಾಳ್ಕರ್ ಜೊತೆ ಸಹೋದರ ಮತ್ತು ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಕೂಡಾ ಮತ ಚಲಾಯಿಸದರು.

ಹು-ಧಾ ಸೆಂಟ್ರಲ್ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್​  ಶೆಟ್ಟರ್ ಮತದಾನ ಮಾಡಿದ್ದಾರೆ. ಕೇಶ್ವಾಪುರ ಎಸ್‌ಬಿ‌ಐ ಶಾಲೆಯ ಬೂತ್​​​ ಸಂಖ್ಯೆ 125 ಮತಗಟ್ಟೆಗೆ ಕುಟುಂಬ ಸಮೇತ ಆಗಮಿಸಿ ಮತದಾನ ಮಾಡಿದ್ದಾರೆ.

suddiyaana