ಕರ್ಣಗೆ ಕನ್ನಡತಿ ಹಿರೋಯಿನ್? – ಭವ್ಯಾ, ನಮ್ರತಾಗೆ ಗೇಟ್ಪಾಸ್!?
ಫ್ಯಾನ್ಸ್ ಸಿಟ್ಟಿಗೆ ಮಣಿದ್ರಾ ಡೈರೆಕ್ಟರ್?

ಜೀ ಕನ್ನಡ ವಾಹಿನಿಯಲ್ಲಿ ಹೊಸ ಧಾರಾವಾಹಿ ಕರ್ಣ ಶುರುವಾಗಲಿದೆ. ಕನ್ನಡತಿ ಸೀರಿಯಲ್ನಲ್ಲಿ ಮಿಂಚಿದ್ದ ಕಿರಣ್ ರಾಜ್ ಕರ್ಣನಾಗಿ ಕಾಣಿಸಿಕೊಳ್ಳಲಿದ್ದಾರೆ. ಕರ್ಣನಿಗೆ ನಾಯಕಿಯಾಗಿ ನಮ್ರತಾ ಗೌಡ ಹಾಗೂ ಭವ್ಯಾ ಗೌಡ ನಟಿಸಲಿದ್ದಾರೆ. ಈ ಸೀರಿಯಲ್ ಪ್ರೋಮೋ ಮೂಲಕವೇ ಸಂಚಲನ ಸೃಷ್ಟಿಸಿದ್ದು, ಸೀರಿಯಲ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಆದ್ರೀಗ ಸೀರಿಯಲ್ ಶುರುವಾಗೋ ಮುನ್ನವೇ ವೀಕ್ಷಕರು ಅಸಮಧಾನ ಹೊರ ಹಾಕಿದ್ದಾರೆ. ಕರ್ಣನಿಗೆ ನಮ್ರತಾ, ಭವ್ಯಾ ಗೌಡ ಸೂಟ್ ಆಗಲ್ಲ.. ಕನ್ನಡತಿಯೇ ಬೆಸ್ಟ್ ಅಂತಾ ಹೇಳ್ತಿದ್ದಾರೆ.
ಇದನ್ನೂ ಓದಿ: ವಿಮಾನದಲ್ಲಿ ತಾಂತ್ರಿಕ ದೋಷ – ಟೈಯರ್ನಿಂದ ಚಿಮ್ಮಿದ ಬೆಂಕಿ ಕಿಡಿ
ಇಂದಿನಿಂದ ಬಹು ನಿರೀಕ್ಷಿತ ಧಾರಾವಾಹಿ ಕರ್ಣ ಶುರುವಾಗ್ತಿದೆ.. ಕಸದ ಬುಟ್ಟಿಯಲ್ಲಿ ಅನಾಥವಾಗಿ ಬಿದ್ದಿದ್ದ ಮಗುವನ್ನು ಶ್ರೀಮಂತ ಕುಟುಂಬವೊಂದು ರಕ್ಷಿಸುತ್ತಾರೆ. ರಾಮಕೃಷ್ಣ ವಸಿಷ್ಠ ಅವರು ಈ ಮಗುವಿಗೆ ಕರ್ಣ ಎಂದು ಹೆಸರಿಟ್ಟಿದೆ. ತಾತನಿಗೆ ಕೊಟ್ಟ ಮಾತಿನಂತೆ ಕರ್ಣನು ದೊಡ್ಡವನಾದ ಮೇಲೆ ಪ್ರಸೂತಿ, ಸ್ತ್ರೀರೋಗ ತಜ್ಞನಾಗಿ ತಾತ ಕಟ್ಟಿಸಿದ ಆಸ್ಪತ್ರೆಯಲ್ಲಿಯೇ ಕಾರ್ಯ ನಿರ್ವಹಿಸುತ್ತಾನೆ. ಜನಪ್ರಿಯ ಸ್ತ್ರೀರೋಗ ತಜ್ಞ ಆಗಿರುವ ಈತ ಬಡವರಿಗಾಗಿ ತೋರಿಸುವ ಕಾಳಜಿ, ವೃತ್ತಿಪರ ನಿಷ್ಠೆ ಎಲ್ಲರಿಗೂ ಮಾದರಿಯಾಗಲಿದೆ. ಇದು ‘ಕರ್ಣ’ ಧಾರಾವಾಹಿ ಕಥೆಯ ಮುಖ್ಯ ಹಂದರವಾಗಿದ್ದು ಜನರ ಮನಗೆಲ್ಲೋದಂತೂ ಪಕ್ಕಾ.. ಇದೀಗ ಈ ಸೀರಿಯಲ್ ನಲ್ಲಿ ತ್ರಿಕೋನ ಪ್ರೇಮ ಕತೆ ಕೂಡ ಇರಲಿದೆ. ಕರ್ಣ ಯಾರನ್ನು ಪ್ರೀತಿ ಮಾಡ್ತಾನೆ? ಯಾರನ್ನು ಮದುವೆ ಆಗ್ತಾನೆ ಎನ್ನೋದು ಇಲ್ಲಿರುವ ದೊಡ್ಡ ಪ್ರಶ್ನೆ ಆಗಿದೆ. ನಿಧಿಗೆ ಕರ್ಣನ ಮೇಲೆ ಲವ್ ಇರುತ್ತದೆ. ನಿತ್ಯಾ ಹಾಗೂ ಕರ್ಣನ ಮಧ್ಯೆ ಪ್ರೀತಿ ಹುಟ್ಟತ್ತಾ? ನಿತ್ಯಾ ಹಾಗೂ ನಿಧಿ ನಡುವೆ ಕರ್ಣನಿಗೆ ಜೋಡಿ ಆಗೋರು ಯಾರು ಎನ್ನೋದು ಇಲ್ಲಿರುವ ಪ್ರಶ್ನೆಯಾಗಿದೆ. ಸೀರಿಯಲ್ ಕತೆ ಏನೋ ವೀಕ್ಷಕರಿಗೆ ಇಷ್ಟವಾಗಿದೆ. ಆದ್ರೆ ಸೀರಿಯಲ್ ಗೆ ಭವ್ಯ ಗೌಡ ಹಾಗೂ ನಮ್ರತಾ ಗೌಡ ನಾಯಕಿಯಾಗಿ ಬೇಡ.. ನಾಯಕಿ ಪಾತ್ರವನ್ನ ಚೇಂಜ್ ಮಾಡಿ ಅಂತಾ ವೀಕ್ಷಕರು ಹೇಳ್ತಿದ್ದಾರೆ.
ಹೌದು, ಕರ್ಣ ಸೀರಿಯಲ್ ನಲ್ಲಿ ಕರ್ಣನಿಗೆ ಜೋಡಿಯಾಗಿ ಬಿಗ್ ಬಾಸ್ ಹಾಗೂ ನಾಗಿಣಿ ಸೀರಿಯಲ್ ನಟಿ ನಮ್ರತಾ ಗೌಡ ಹಾಗೂ ಗೀತಾ ಸೀರಿಯಲ್ ನಟಿ ಭವ್ಯಾ ಗೌಡ ಸೆಲೆಕ್ಟ್ ಆಗಿದ್ದಾರೆ. ಈಗಾಗಲೇ ಸೀರಿಯಲ್ ಪ್ರೋಮೋವನ್ನ ಜೀಕನ್ನಡ ವಾಹಿನಿ ರಿಲೀಸ್ ಮಾಡಿದೆ.. ಆದ್ರೆ ಪ್ರೋಮೋದಲ್ಲಿ ನಟಿಯರ ವಿರುದ್ಧ ಸೀರಿಯಲ್ ಪ್ರೇಮಿಗಳು ಅಸಮಧಾನ ವ್ಯಕ್ತಪಡಿಸಿದ್ದಾರೆ. ಕನ್ನಡತಿ ಸೀರಿಯಲ್ ಹೀರೋಯಿನ್ ರಂಜಿನಿ ರಾಘವನ್ ಮಾತ್ರ ಕರ್ಣನಿಗೆ ಸೂಟ್ ಆಗೋದು ಅಂತಾ ಕಾಮೆಂಟ್ ಮಾಡ್ತಿದ್ದಾರೆ.
ಅಂದ್ಹಾಗೆ ಭವ್ಯಾ ಗೌಡ ಹಾಗೂ ನಮ್ರತಾ ಗೌಡರನ್ನ ಕರ್ಣ ಸೀರಿಯಲ್ ಗೆ ಬೇಡ ಅಂತಿರೋದಕ್ಕೂ ಒಂದು ಕಾರಣ ಇದೆ. ಭವ್ಯ ಹಾಗೂ ನಮ್ರತಾ ಗೌಡ ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿದ್ರು.. ದೊಡ್ಮನೆಯಲ್ಲಿ ಇಬ್ಬರೂ ನೆಗೆಟಿವ್ ಶೇಡ್ ನಲ್ಲೇ ಕಾಣಿಸಿಕೊಂಡಿದ್ರು.. ನಮೃತಾ ಸಹ ಸ್ಪರ್ಧಿಗಳ ಜೊತೆ ಪದೇ ಪದೇ ಜಗಳಕ್ಕೆ ಇಳಿತಿದ್ರು.. ಕೆಟ್ಟ ಕೆಟ್ಟ ಪದಗಳಿಂದ ನಿಂದಿಸಿದ್ರು.. ಇದ್ರಿಂದಾಗಿ ನಮ್ರತಾ ಇಮೇಜ್ ಡ್ಯಾಮೇಜ್ ಆಗಿತ್ತು.. ಇನ್ನು ಭವ್ಯಾ ಗೌಡ ಕೂಡ ಬಿಗ್ ಬಾಸ್ ಮನೆಯಲ್ಲಿ ಬರೀ ತ್ರಿವಿಕ್ರಮ್ ಜೊತೆಗೆ ಸುತ್ತಾಡ್ತಿದ್ರು.. ದೊಡ್ಮನೆಯಲ್ಲಿ ಓವರ್ ಆಕ್ಟಿಂಗ್ ಮಾಡ್ತಿದ್ದಾರೆ.. ಬಕೆಟ್ ಭವ್ಯಾ ಅಂತಾ ಟ್ರೋಲ್ ಮಾಡಿದ್ರು.. ಇವರಿಬ್ಬರ ವರ್ತನೆ ಇಷ್ಟ ಆಗಿಲ್ಲ.. ಹೀಗಾಗಿ ಸೀರಿಯಲ್ ಗೆ ಬೇಡ ಅಂತಾ ವೀಕ್ಷಕರು ಅಸಮಧಾನ ವ್ಯಕ್ತಪಡಿಸಿದ್ದಾರೆ.. ಇನ್ನು ಈ ಕಮೆಂಟ್ಸ್ ಎಲ್ಲಾ ಓದಿದ ಭವ್ಯಾ ಗೌಡ ಡಿಪ್ರೆಷನ್ ಗೆ ಹೋಗಿದ್ರಂತೆ.. ಈ ಬಗ್ಗೆ ಸಂದರ್ಶನವೊಂದ್ರಲ್ಲಿ ಹೇಳಿಕೊಂಡಿದ್ರು. ಹೀಗಾಗೇ ಕನ್ನಡತಿ ಸೀರಿಯಲ್ ಹಿರೋಯಿನ್ ರಂಜಿನಿಯನ್ನೇ ಸೆಲೆಕ್ಟ್ ಮಾಡಿ.. ಕಿರಣ್ ರಾಜ್ ಅವ್ರಿಗೆ ರಂಜಿನಿಯವ್ರನ್ನ ಬಿಟ್ರೆ ಬೇರೆ ಯಾರೂ ಸೂಟ್ ಆಗಲ್ಲ.. ಇದೇ ನಟಿಯರನ್ನೇ ಮುಂದುವರಿಸಿದ್ರೆ ಸೀರಿಯಲ್ ನೋಡೋದೇ ಇಲ್ಲ ಅಂತಾ ವೀಕ್ಷಕರು ಹೇಳ್ತಿದ್ದಾರೆ.. ಇನ್ನೂ ಕೆಲವರು ವೀಕ್ಷಕರ ಒತ್ತಾಯಕ್ಕೆ ಮಣಿದು ಸೀರಿಯಲ್ ಹೀರೋಯಿನ್ ಚೇಂಜ್ ಮಾಡಿದ್ದಾರೆ. ರಂಜಿನಿ ರಾಘವನ್ ಹೀರೋಯಿನ್ ಆಗಿ ಆಕ್ಟ್ ಮಾಡ್ತಿದ್ದಾರೆ ಅಂತಾ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡ್ತಿದ್ದಾರೆ. ಆದ್ರೆ ಇದು ಬರೀ ಗಾಸಿಪ್ ಅಷ್ಟೇ.. ಈಗಾಗಲೇ ಸೀರಿಯಲ್ ನ ಕೆಲ ಸಂಚಿಕೆ ಶೂಟಿಂಗ್ ಆಗಿದ್ದು, ಇಂದಿನಿಂದಲೇ ಸೀರಿಯಲ್ ಶುರುವಾಗ್ತಿದೆ. ಇನ್ನು ಸೀರಿಯಲ್ ಹೀರೋಯಿನ್ ನ ಚೇಂಜ್ ಮಾಡೋಕೆ ಸಾಧ್ಯ ಇಲ್ಲ.. ಈ ಇಬ್ಬರು ನಟಿಯರು ಈಗ ತಮ್ಮ ಅಭಿನಯದ ಮೂಲಕ ವೀಕ್ಷಕರ ಮನಸ್ಸನ್ನ ಗೆಲ್ಲಬೇಕಿದೆ.