ಕಾಂತಾರ ಕಂಟಕ.. 3 ಸಾ*ವು! ದೈವದ ಆಜ್ಞೆ ಮೀರಿದ್ರಾ ರಿಷಬ್?
ಪಂಜುರ್ಲಿ ಎಚ್ಚರಿಕೆ.. ತಪ್ಪಾಗಿದ್ದೆಲ್ಲಿ?

ಕಾಂತಾರ ಕಂಟಕ.. 3 ಸಾ*ವು! ದೈವದ ಆಜ್ಞೆ ಮೀರಿದ್ರಾ ರಿಷಬ್?ಪಂಜುರ್ಲಿ ಎಚ್ಚರಿಕೆ.. ತಪ್ಪಾಗಿದ್ದೆಲ್ಲಿ?

ಬಾಕ್ಸ್‌ ಆಫೀಸ್ ಉಡೀಸ್ ಮಾಡಿರೋ ಕಾಂತಾರ ಸಿನಿಮಾವನ್ನ ಜನ ಮೆಚ್ಚಿಕೊಂಡಿದ್ರು.. ಈಗ ಕಾಂತಾರ ಚಾಪ್ಟರ್ 1 ಸಿನಿಮಾ ಸೆಟ್ಟಿರಿದ್ದು, ಒಂದರ ಹಿಂದೆ ಒಂದು ದುರಂತಗಳು ನಡೆಯುತ್ತಿವೆ. ಕಾಂತಾರದ ಕೈಮ್ಯಾಕ್ಸ್‌ನಲ್ಲಿ ಹೆಣಗಳು ಬಿದ್ದಂತೆ, ಕಾಂತಾರ ಚಾಪ್ಟರ್‌ 1 ನಲ್ಲಿ ಹೆಣಗಳು ಬೀಳುತ್ತಿವೆ. ಕನ್ನಡದ ಕಾಮಿಡಿ ನಟ ರಾಕೇಶ್ ಪೂಜಾರಿ ಸಾವು ಅರಗಿಸಿಕೊಳ್ಳುವ ಮುಂಚೆಯೇ ಮತ್ತೊಬ್ಬ ಕಲಾವಿದ ಮೃತಪಟ್ಟಿದ್ದಾನೆ .

ಕಾಂತಾರ-  ಚಾಪ್ಟರ್ 1 ಚಿತ್ರೀಕರಣಕ್ಕೆ ಆಗಮಿಸಿದ್ದ ಕಲಾವಿದ ಸಾ*ವು!

ಹೌದು ಕಾಂತಾರದಲ್ಲಿ ಅಭಿನಯಿಸಿದ ಕಲಾವಿದರು ಕಾಕತಾಳಿಯ ಎಂಬಂತೆ ಪ್ರಾಣ ಬಿಡುತ್ತಿದ್ದಾರೆ. ರಾಕೇಶ್ ಪೂಜಾರಿ ಕೂಡ ಕಾಂತಾರದಲ್ಲಿ ಅಭಿನಯಿಸಿದ್ದು, ಶೂಟಿಂಗ್ ಕೊನೆಯ ದಿನ ಪ್ರಾಣ ಕಳೆದುಕೊಂಡ್ರಿದ್ರು. ಈಗ  ಮಿಮಿಕ್ರಿ ಕಲಾವಿದ ಕೂಡ ಪ್ರಾಣ ಬಿಟ್ಟಿದ್ದಾನೆ. ಕೇರಳ ಮೂಲದ ಮಿಮಿಕ್ರಿ ಕಲಾವಿದ ನಿಜು ವಿ ಕೆ ಅವರು ತೀರ್ಥಹಳ್ಳಿ ತಾಲೂಕಿನ ಆಗುಂಬೆ ಹೋಮ್ ಸ್ಟೇ ಒಂದರಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಮಿಮಿಕ್ರಿ ಕಲಾವಿದ ನಿಜು ವಿ ಕೆ ಅವರು ‘ಕಾಂತಾರ: ಚಾಪ್ಟರ್ 1’ ಚಿತ್ರದ ಚಿತ್ರೀಕರಣಕ್ಕಾಗಿ ಆಗಮಿಸಿದ್ದರು. ಅವರು ಆಗುಂಬೆ ಹೋಮ್ ಸ್ಟೇ ಒಂದರಲ್ಲಿ ತಂಗಿದ್ದರು. ಆದ್ರೆ ಬುಧವಾರ ರಾತ್ರಿ ನಿಜು ವಿ ಕೆ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನ ತೀರ್ಥಹಳ್ಳಿ ಆಸ್ಪತ್ರೆಗೆ ರವಾನಿಸಲಾಗುತ್ತಿತ್ತು. ಅಷ್ಟರಲ್ಲೇ ಮಾರ್ಗ ಮಧ್ಯೆಯೇ ನಿಜು ವಿ ಕೆ ಅವರ ಪ್ರಾಣ ಪಕ್ಷಿ ಹಾರಿ ಹೋಗಿದೆ. ನಿಜು ವಿ ಕೆ ಅವರ ಮೃತ ದೇಹವನ್ನು ತೀರ್ಥಹಳ್ಳಿಯ ಜೆ ಸಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ನಿಜು ವಿ ಕೆ ಕುಟುಂಬಸ್ಥರು ಕೇರಳದಿಂದ ತೀರ್ಥಹಳ್ಳಿಗೆ ಆಗಮಿಸುತ್ತಿದ್ದಾರೆ.

 ಹೃದಯಾಘಾತದಿಂದ ರಾಕೇಶ್ ಪೂಜಾರಿ ನಿಧನ

‘ಕಾಮಿಡಿ ಕಿಲಾಡಿಗಳು ಸೀಸನ್‌ 3’ ಕಾರ್ಯಕ್ರಮದಲ್ಲಿ ವಿನ್ನರ್‌ ಆಗಿದ್ದ ರಾಕೇಶ್ ಪೂಜಾರಿ ಸಾವನ್ನಪ್ಪಿದ್ದಾರೆ.  ಮೇ 12 ರಂದು ಸ್ನೇಹಿತರ ಮದುವೆಯಲ್ಲಿ ರಾಕೇಶ್ ಪೂಜಾರಿ ಭಾಗವಹಿಸಿದ್ದರು. ಅದಾದ್ಮೇಲೆ ರಾಕೇಶ್ ಪೂಜಾರಿ ‘ಸುಸ್ತು.. ಸುಸ್ತು’ ಎಂದಿದ್ದಾರೆ. ಕೂಡಲೆ ಅವರನ್ನ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಹೃದಯಾಘಾತದಿಂದ ರಾಕೇಶ್ ಪೂಜಾರಿ ಕೊನೆಯುಸಿರೆಳೆದಿದ್ರು. ಇದಾಗಿ ಒಂದೇ ತಿಂಗಳಿಗೆ ಮತ್ತೊಬ್ಬ ಕಾಂತಾರ ಕಲಾವಿದ ಸಾವನ್ನಪ್ಪಿದ್ದಾನೆ.

ಸಾಲು ಸಾಲು ವಿಘ್ನ, 3 ಸಾ*ವು!  

ಕಾಂತಾರ’ ಸಿನಿಮಾ ಬ್ಲಾಕ್ ಬಸ್ಟರ್‌ ಆದ್ಮೇಲೆ ‘ಕಾಂತಾರ: ಚಾಪ್ಟರ್ 1’ ಸಿನಿಮಾ ತಯಾರಿಸಲು ರಿಷಬ್ ಶೆಟ್ಟಿ ಮುಂದಾದರು. ಆದರೆ, ‘ಕಾಂತಾರ: ಚಾಪ್ಟರ್‌ 1’ ಆರಂಭದಿಂದಲೂ ಒಂದಲ್ಲಾ ಒಂದು ಅಹಿತಕರ ಘಟನೆಗಳು ನಡೆಯುತ್ತಲೇ ಇದೆ. ಹಾಗಿದ್ರೆ ಏನೆಲ್ಲಾ ಘಟನೆಗಳು ನಡೆದಿವೆ ಅನ್ನೋದ್ದನ್ನ ನೋಡೋಣ ಬನ್ನಿ..

 ಘಟನೆ :1   

ಈ ಹಿಂದೆ ‘ಕಾಂತಾರ  ಸಿನಿಮಾ ತಂಡ ಸಾಗುತ್ತಿದ್ದ ಬಸ್ ಕೊಲ್ಲೂರಿನಲ್ಲಿ ಅಪಘಾತಕ್ಕೀಡಾಗಿತ್ತು. ಬಸ್‌ನಲ್ಲಿದ್ದ ಜ್ಯೂನಿಯರ್ ಆರ್ಟಿಸ್ಟ್‌ಗಳು ಗಾಯಗೊಂಡಿದ್ದರು.

ಘಟನೆ : 2

ಮೇ 6 ರಂದು ಕಾಂತಾರ ಸಿನಿಮಾದ ಜ್ಯೂನಿಯರ್ ಆರ್ಟಿಸ್ಟ್ ಕಪಿಲ್‌ ಕೊಲ್ಲೂರು ಬಳಿಯ ಸೌಪರ್ಣಿಕಾ ನದಿಯಲ್ಲಿ ಈಜಲು ಹೋಗಿ ಸಾವನ್ನಪ್ಪಿದ್ದರು.

ಘಟನೆ 3

ಮೇ. 12 ರಂದು ‘ಕಾಂತಾರ ಚಿತ್ರದಲ್ಲಿ ನಟಿಸುತ್ತಿದ್ದ ರಾಕೇಶ್ ಪೂಜಾರಿ ಹೃದಯಾಘಾತದಿಂದ ಹಠಾತ್‌ ಸಾವನ್ನಪ್ಪಿದರು.

ಘಟನೆ 4

ಜೂನ್ 11  ‘ಕಾಂತಾರ’ ಚಿತ್ರದಲ್ಲಿ ನಟಿಸಲು ಬಂದಿದ್ದ ಮಿಮಿಕ್ರಿ ಕಲಾವಿದ ನಿಜು ವಿ ಕೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾ ಶುರುವಾದ ನಂತರ ಈವರೆಗೆ ಒಟ್ಟು 3 ಸಾವುಗಳು ಸಂಭವಿಸಿದೆ. ಇದು ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ರಿಷಬ್‌ಗೆ ಎಚ್ಚರಿಕೆ ಕೊಟ್ಟಿತ್ತು ದೈವ 

ರಿಷಬ್ ಶೆಟ್ಟಿ ಕಾಂತಾರ ಚಾಪ್ಟರ್ 1 ಆರಂಭಿಸೋ ಮುನ್ನ ದೈವದ ಅಪ್ಪಣೆ ಕೇಳಿದ್ರು. ಆಗ ದೈವ ಸಿನಿಮಾ ಮಾಡೋಕೆ ಒಪ್ಪಿಗೆ ಕೊಟ್ಟಿತ್ತು. ಜೊತೆಗೆ ಕಿವಿ ಮಾತು ಕೂಡ ಹೇಳಿತ್ತು. ಮೊದಲ ಚಿತ್ರದಲ್ಲಿ ಒಳ್ಳೆಯದ್ದು ಆಗಿದೆ. ಅಪವಾದ ಕೂಡ ಬಂದಿದೆ. ಹತ್ತು ಹೆಜ್ಜೆ ಇಟ್ಟ ಮೊದಲ ಸಿನಿಮಾ ಮಾಡಿದ್ರಿ. ಈ ಬಾರಿ ನೂರು ಹೆಜ್ಜೆ ಇಟ್ಟು ಸಿನಿಮಾ ಮಾಡಿ ಮುಂದುವರಿಯುವಂತೆ ದೈವ ಹೇಳಿತ್ತು. ರಿಷಷ್ ಶೆಟ್ಟಿಗೆ ತುಂಬಾ ಜಾಗ್ರತೆಯಿಂದ ಸಿನಿಮಾ ಮಾಡುವಂತೆ ಎಚ್ಚರಿಕೆಯನ್ನೂ ನೀಡಿತ್ತು. ದೈವಕ್ಕೆ ಅಸಮಾಧಾನ ಬರುವಂತಹ ಯಾವುದೇ ಕೃತ್ಯವನ್ನೂ ಮಾಡದಂತೆ ದೈವದ ಸೂಚನೆಯ ಬೆನ್ನಲ್ಲಿಯೇ ಶೂಟಿಂಗ್ ಆರಂಭಿಸಲಾಗಿತ್ತು. ಆದ್ರೆ ಸಾಲು ಸಾಲು ಅವಘಡ ನಡೆದಿದೆ.

Kishor KV

Leave a Reply

Your email address will not be published. Required fields are marked *