“ಕನ್ನಡತಿ” ಸೀರಿಯಲ್ ಮುಕ್ತಾಯ! – ಕೊನೆಯದಾಗಿ ಭುವಿ ಹೇಳಿದ್ದೇನು?  

“ಕನ್ನಡತಿ” ಸೀರಿಯಲ್ ಮುಕ್ತಾಯ! – ಕೊನೆಯದಾಗಿ ಭುವಿ ಹೇಳಿದ್ದೇನು?  

ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ಧಾರಾವಾಹಿ “ಕನ್ನಡತಿ” ಯ ಕೊನೆಯ ಸಂಚಿಕೆ ಇಂದು ಪ್ರಸಾರವಾಗಿ ಧಾರಾವಾಹಿ ಮುಕ್ತಾಯಗೊಳ್ಳಲಿದೆ. ಸಂಜೆ 7. 30 ಪ್ರಸಾರವಾಗುತ್ತಿದ್ದ ಈ ಧಾರಾವಾಹಿಗೆ ಅಪಾರ ಅಭಿಮಾನಿಗಳಿದ್ದಾರೆ. ಎಲ್ಲ ವರ್ಗದ ಜನರಿಗೂ ಮೆಚ್ಚುಗೆಯಾಗಿತ್ತು. ಸಿಟಿಯ ಹುಡುಗ ಹಾಗೂ ಹಳ್ಳಿಯಿಂದ ಬಂದ ಕನ್ನಡ ಟೀಚರ್​ನ ಸುಂದರವಾದ ಪ್ರೇಮ ಕಥೆಯನ್ನು ಸೀರಿಯಲ್ ಅಭಿಮಾನಿಗಳು ಮೆಚ್ಚಿಕೊಂಡಿದ್ದರು.

ಇದನ್ನೂ ಓದಿ: ಅನಾರೋಗ್ಯದ ಬಳಿಕ ಮಾಸ್ ಲುಕ್ ನಲ್ಲಿ ಸಮಂತಾ ಎಂಟ್ರಿ – ಹೇಗಿದೆ ಗೊತ್ತಾ ಸೌತ್ ಸ್ಟಾರ್ ಲುಕ್..!?

ಅಗತ್ಯವಿದ್ದಷ್ಟೇ ಲವ್, ರೊಮ್ಯಾನ್ಸ್, ಡ್ರಾಮಾವನ್ನು ಈ ಧಾರಾವಾಹಿಯಲ್ಲಿ ಪ್ರಸಾರ ಮಾಡಲಾಗುತ್ತಿತ್ತು. ಈ ಸೀರಿಯಲ್ ಅನ್ನು ಕೇವಲ ಮಹಿಳೆಯರು ಮಾತ್ರ ಅಲ್ಲ ಗಂಡು ಮಕ್ಕಳೂ ಕೂಡ ಆಸಕ್ತಿಯಿಂದ ವೀಕ್ಷಿಸುತ್ತಿದ್ದರು ಎನ್ನುವುದು ವಿಶೇಷ. ಇದೀಗ ಈ ಸೀರಿಯಲ್ ಮುಕ್ತಾಯ ಹಂತಕ್ಕೆ ತಲುಪಿದೆ. ಕೊನೆಯ ಎಪಿಸೋಡ್​ ಪ್ರಸಾರವಾಗುವ ಮೊದಲು ಸೀರಿಯಲ್ ಹೀರೋಯಿನ್ ರಂಜನಿ ರಾಘವನ್ ಭಾವುಕವಾದ ಒಂದು ಪೋಸ್ಟ್ ಶೇರ್ ಮಾಡಿದ್ದಾರೆ.

ನಮ್ಮೆಲ್ಲರ ಹೆಮ್ಮಯ ಧಾರಾವಾಹಿ ‘ಕನ್ನಡತಿ’ಯ ಕಡೆಯ ಸಂಚಿಕೆ ಇಂದು ಪ್ರಸಾರವಾಗುತ್ತಿದೆ. ಇನ್ನಷ್ಟು ಸಂಚಿಕೆ ಬರಬಹುದಿತ್ತು, ನಿಮ್ಮನ್ನು ಮಿಸ್ ಮಾಡಿಕೊಳ್ತೀವಿ ಅಂತ ಹೇಳುವಾಗಲೇ ಗೌರವದಿಂದ ಮುಕ್ತಾಯ ಕಾಣುತ್ತಿರೋದು ನಮಗೆಲ್ಲಾ ಹೆಮ್ಮೆಯ ವಿಚಾರ. ಮುಂದೆ ಅರ್ಥಪೂರ್ಣವಾದ ಪಾತ್ರಗಳ ಮೂಲಕ, ಒಳ್ಳೆಯ ಬರವಣಿಗೆ ಹೊಂದಿರೋ ಪ್ರಾಜೆಕ್ಟ್ ಗಳ ಮೂಲಕ ನಿಮ್ಮ ಮುಂದೆ ಬರುವ ನಿರೀಕ್ಷೆಯಲ್ಲಿದ್ದೇನೆ. ನಿಮ್ಮ ನಿರಂತರ ಪ್ರೀತಿ ಪ್ರೋತ್ಸಾಹಕ್ಕೆ ಧನ್ಯವಾದಗಳು. ಪ್ರೀತಿಯಿಂದ, ರಂಜನಿ ರಾಘವನ್ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

suddiyaana