ಕನ್ನಡತಿ ಕಿರಣ್‌ ರಾಜ್‌ ಸಿನಿಮಾಗೆ ವಿಘ್ನ.. ರಾನಿ ಹೀರೋಗೆ ಅಪಘಾತ -ಆ ರಾತ್ರಿ ನಡೆದಿದ್ದೇನು?

ಕನ್ನಡತಿ ಕಿರಣ್‌ ರಾಜ್‌ ಸಿನಿಮಾಗೆ ವಿಘ್ನ.. ರಾನಿ ಹೀರೋಗೆ ಅಪಘಾತ -ಆ ರಾತ್ರಿ ನಡೆದಿದ್ದೇನು?

ಕನ್ನಡದ ಮೋಸ್ಟ್ ಹ್ಯಾಂಡ್ಸಮ್ ನಟರಲ್ಲಿ ಕಿರಣ್ ರಾಜ್ ಕೂಡ ಒಬ್ರು.. ಕನ್ನಡತಿ ಸೀರಿಯಲ್‌ ಮೂಲಕ ಇಡೀ ಕನ್ನಡಿಗರ ಮನೆ ಹಾಗೂ ಮನವನ್ನು ತಲುಪಿದ್ರು. ಹರ್ಷ ಅಂತಾ ನೇ ಫೇಮಸ್‌ ಮನೆಮಾತಾಗಿದ್ದಾರೆ. ನಾಳೆ ನಟ ಕಿರಣ್​​​ ರಾಜ್ ಸಿನಿಮಾ ರಾನಿ ರಾಜ್ಯದಾದ್ಯಂತ ರಿಲೀಸ್​ ಆಗುತ್ತಿದೆ. ಈ ಖುಷಿಯಲ್ಲೇ ಓಡಾಡ್ತಿದ್ದ ರಾನಿ ಹೀರೋಗೆ ಆಕ್ಸಿಡೆಂಟ್‌ ಆಗಿದೆ. ಹೌದು ನಟ ಕಿರಣ್‌ ರಾಜ್‌ ಗೆ ಅಪಘಾತ ಆಗಿದ್ದು ಗಂಭೀರ ಗಾಯಗೊಂಡಿದ್ದಾರೆ. ಅಷ್ಟಕ್ಕೂ ಅಪಘಾತ ಆಗಿದ್ದು ಹೇಗೆ? ಸದ್ಯ ಕಿರಣ್‌ ರಾಜ್‌ ಆರೋಗ್ಯ ಹೇಗಿದೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಕನ್ನಡದಲ್ಲೇ ಔಷಧ ಚೀಟಿ ಬರೆಯಲು ಆರಂಭಿಸಿದ ವೈದ್ಯರು!

ಕಿರಣ್‌ ರಾಜ್‌ ನಟನೆಯ ರಾನಿ ಸಿನಿಮಾ ನಾಳೆ ರಿಲೀಸ್‌ ಆಗಲಿದೆ.. ಹೀಗಾಗಿ ಕಿರಣ್‌ ರಾಜ್‌ ಸಿನಿಮಾ ಪ್ರಚಾರದ ಓಡಾಟದಲ್ಲೇ ಬ್ಯೂಸಿಯಾಗಿದ್ರು. ಸಿನಿಮಾ ಪ್ರಚಾರಕ್ಕಾಗಿ ಭಾರಿ ಸಾಹಸಗಳನ್ನ ಕೂಡ ಮಾಡಿದ್ದಾರೆ.. ಸಿನಿಮಾದ ಟೈಟಲ್‌ ಅನ್ನ ಆಕಾಶದಲ್ಲೇ ರಿವೀಲ್‌ ಮಾಡಿ ಇತಿಹಾಸ ಸೃಷ್ಠಿಸಿದ್ರು.. ಈ ಸಲ ಸಿನಿಮಾ ಗೆದ್ದೇ ಗೆಲ್ಲಬೇಕು.. ಸಿನಿಮಾ ಸೋತರೆ ಮತ್ತೆ ಜೀರೋದಿಂದಲೇ ಶುರು ಮಾಡ್ಬೇಕು ಅನ್ನೋದು ಕಿರಣ್ ರಾಜ್ ಚಿಂತೆ. ಹೀಗಾಗಿ ಕಿರಣ್‌ ರಾಜ್‌ ಸಿನಿಮಾ ಪ್ರಚಾರಕ್ಕೆ ಹೆಚ್ಚು ಟೈಮ್‌ ಕೊಡ್ತಾ ಬಂದಿದ್ರು. ಆದ್ರೆ ಅದ್ಯಾಕೋ ಟೈಮೇ ಸರಿಯಿಲ್ಲ.. ನಾಳೆ ತನ್ನ ಸಿನಿಮಾ ರಿಲೀಸ್‌ ಅಂತಾ ಖುಷಿಯಿಂದ ಓಡಾಡ್ತಿದ್ದ ಕಿರಣ್‌ ಆಸ್ಪತ್ರೆ ಪಾಲಾಗಿದ್ದಾರೆ.. ಆಕ್ಸಿಡೆಂಟ್‌ ನಲ್ಲಿ ಗಂಭೀರ ಗಾಯಗೊಂಡಿದ್ದರು. ಇದೀಗ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಿರಣ್‌ ರಾಜ್‌ ಕಾರು ಅಪಘಾತ ಆಗಿದ್ದು ಹೇಗೆ?  

ಸೆಪ್ಟೆಂಬರ್ 10ರಂದು ಮಧ್ಯಾಹ್ನ ಕಿರಣ್ ರಾಜ್ ಅವರ ‘ರಾನಿ’ ಸಿನಿಮಾದ ಪ್ರದರ್ಶನ ಇತ್ತು. ಅದರಲ್ಲಿ ಭಾಗಿಯಾಗಿದ್ದ ಕಿರಣ್ ರಾಜ್  ರಾತ್ರಿ ಶ್ರೀ ಸಿದ್ದೇಶ್ವರ ನಿರಾಶ್ರಿತರ ಸೇವಾಶ್ರಮಕ್ಕೆ ನಿನ್ನೆ ಭೇಟಿ ಕೊಟ್ಟಿದ್ದರು. ಅಲ್ಲಿಂದ ವಾಪಾಸ್‌ ಬರ್ತಿರುವಾಗ ಮುದ್ದೇನಾಪಾಳ್ಯದಲ್ಲಿ ಅಪಘಾತ ಸಂಭವಿಸಿದೆ. ದಾರಿ ಮಧ್ಯೆ ಮುಂಗುಸಿ ಕಾರಿಗೆ ಅಡ್ಡ ಬಂದಿದೆ. ಹೀಗಾಗಿ ಕಾರು ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಕಿರಣ್‌ ರಾಜ್‌ ಹಿಂದಿನ ಸೀಟ್ ನಲ್ಲಿ ಕೂತು ವಿಡಿಯೋ ಎಡಿಟಿಂಗ್‌ ಮಾಡ್ತಿದ್ರು.. ಡಿಕ್ಕಿಯ ರಭಸಕ್ಕೆ ಅವರಿಗೆ ಜೋರಾಗಿ ಪೆಟ್ಟು ಬಿದ್ದಿದೆ. ಈ ವೇಳೆ ಕಿರಣ್‌ ರಾಜ್‌ ಪ್ರಜ್ಞೆ ಕಳೆದುಕೊಂಡಿದ್ದಾರೆ. ಕಿರಣ್​ ರಾಜ್​ ಜೊತೆಯಲ್ಲಿದ್ದ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಸೀಟ್ ಬೆಲ್ಟ್ ಇಂದ ಸೇಫ್ ಆಗಿದ್ದಾರೆ.

ಸೇವಾಶ್ರಮಕ್ಕೆ ಭೇಟಿ ನೀಡಿ ಬರುವಾಗ ಅಪಘಾತ

ಇನ್ನು ಕಿರಣ್‌ ರಾಜ್‌ ಸದಾ ಸಮಾಜ ಸೇವೆಯಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ಹಬ್ಬ ಬಂದಾಗ, ಸಮಯ ಸಿಕ್ಕಾಗ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಭೇಟಿ ನೀಡಿ ಅವರು ಆಹಾರ ವಿತರಣೆ ಮಾಡುತ್ತಾರೆ. ಅಲ್ಲೇ ಕೆಲ ಹೊತ್ತು ಸಮಯ ಕಳೆಯುತ್ತಾರೆ.  ನಿನ್ನೆ ಕೂಡ ಕಿರಣ್‌ ನಿರಾಶ್ರಿತರಿಗೆ ಅನ್ನ ಹಾಕಿದ್ರು.. ಶ್ರೀ ಸಿದ್ದೇಶ್ವರ ನಿರಾಶ್ರಿತರ ಸೇವಾಶ್ರಮಕ್ಕೆ ಭೇಟಿ ಕೊಟ್ಟಿದ್ದರು. ಎಲ್ಲರಿಗೂ ಊಟ ಬಡಿಸಿದ್ದಾರೆ. ಆಮೇಲೆ ಚೇರ್ ವ್ಯವಸ್ಥೆ ಮಾಡಿಸುತ್ತೇನೆ ಅಂತ ಭರವಸೆ ನೀಡಿದ್ದರು. ಜೊತೆಗೆ ನಿರಾಶ್ರಿತರ ಸೇವಾಶ್ರಮದಲ್ಲಿ ಇದ್ದವರ ಯೋಗ ಕ್ಷೇಮ ವಿಚಾರಿಸಿದ್ದರಂತೆ. ನಾಳೆ ರಿಲೀಸ್ ಆಗುತ್ತಿದ್ದ ಸಿನಿಮಾದ ಬಗ್ಗೆಯೂ ಮಾತಾಡಿದ್ದರು. ನನ್ನ ರಾನಿ ಸಿನಿಮಾ ರಿಲೀಸ್ ಆಗ್ತಿದೆ, ನೀವೆಲ್ಲರೂ ಅಶೀರ್ವಾದ ಮಾಡಬೇಕು ಎಂದು ಹೇಳಿದ್ದರು. ಕಿರಣ್ ಮಾತು ಕೇಳಿ ಅಲ್ಲಿದ್ದವರೆಲ್ಲರೂ ಖುಷಿ ಪಟ್ಟಿದ್ರಂತೆ.

ರಾನಿ ನಟನ ಆರೋಗ್ಯ ಹೇಗಿದೆ?

ಕಿರಣ್‌ ರಾಜ್‌ ಗೆ ಅಪಘಾತ ಆಗ್ತಿದ್ದಂತೆ ಫ್ಯಾನ್ಸ್‌ ಆತಂಕಕ್ಕೆ ಒಳಗಾಗಿದ್ರು.. ನಟ ಆರೋಗ್ಯ ಹೇಗಿದೆ ಅಂತಾ ತಲೆಕೆಡಿಸಿಕೊಂಡಿದ್ರು.. ಇದೀಗ ಸ್ವತಃ ಕಿರಣ್‌ ರಾಜ್‌ ತಮ್ಮ ಆರೋಗ್ಯದ ಬಗ್ಗೆ ಅಪ್‌ಡೇಟ್‌ ನೀಡಿದ್ದಾರೆ. ನಾನು ಈಗ ಆರೋಗ್ಯವಾಗಿದ್ದೇನೆ.. ಏನಾಗಿದೆ ಅನ್ನೋದು ನಿಮಗೆಲ್ಲಾ ಮಾಹಿತಿ ಸಿಕ್ಕಿರುತ್ತದೆ. ಯಾರೆಲ್ಲಾ ಪ್ಯಾನಿಕ್ ಆಗಿ ಮೆಸೇಜ್ ಮಾಡುತ್ತಿರೋ ಚಿಂತಿಸಬೇಡಿ. ನಾನು ಈಗ ಆರೋಗ್ಯವಾಗಿದ್ದೇನೆ. ಸ್ವಲ್ಪ ಏಟಾಗಿತ್ತು ವೈದ್ಯರು ಚಿಕಿತ್ಸೆ ನೀಡಿದ್ದಾರೆ. ದಯವಿಟ್ಟು ಯಾರು ಆತಂಕಕ್ಕೆ ಒಳಗಾಗಬೇಡಿ. ಎಲ್ಲರಿಗೂ ಧನ್ಯವಾದಗಳು ಅಂತಾ ಎಂದು ಹೇಳಿದ್ದಾರೆ.

ಇನ್ನು ಕಿರಣ್‌ ರಾಜ್‌ ಹಿಂದಿ ಕಿರುತೆರೆ ಮೂಲಕ ನಟನೆಗೆ ಎಂಟ್ರಿ ಕೊಟ್ಟರು. ಹೀರೋಸ್‌, ಲವ್‌ ಬೈ ಚಾನ್ಸ್‌, ತು ಆಶಿಕಿ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ ಕಿರಣ್‌ ರಾಜ್‌ ನಂತರ ಬೆಂಗಳೂರಿಗೆ ಬಂದು ಲೈಫ್‌ ಸೂಪರ್‌ ಗುರು ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. ದೇವತೆ, ಗುಂಡ್ಯಾನ ಹೆಂಡತಿ ಧಾರಾವಾಹಿಗಳಲ್ಲಿ ನಟಿಸಿದ ನಂತರ ಕಿನ್ನರಿ ಧಾರಾವಾಹಿಗೆ ನಾಯಕನಾಗಿ ಆಯ್ಕೆ ಆದರು. ನಕುಲ್‌ ಪಾತ್ರ ಅವರಿಗೆ ಒಳ್ಳೆ ಹೆಸರು ತಂದು ಕೊಟ್ಟಿತು. ಇದಾದ ನಂತರ ಸಿನಿಮಾಗಳಲ್ಲಿ ನಟಿಸಿದ್ದ ಕಿರಣ್‌ ರಾಜ್‌ ಕನ್ನಡತಿ ಧಾರಾವಾಹಿಯಲ್ಲಿ ಹರ್ಷ ಎಂಬ ಪಾತ್ರದಲ್ಲಿ ಮಿಂಚಿದ್ದರು. ಇದೀಗ ರಾನಿ ಸಿನಿಮಾ ಮೂಲಕ ತೆರೆಮೇಲೆ ಅಬ್ಬರಿಸಲು ಸಜ್ಜಾಗಿದ್ರು. ಸಿನಿಮಾ ರಿಲೀಸ್‌ ಗೆ ಒಂದು ದಿನ ಬಾಕಿ ಇರುವಾಗಲೇ ಅಪಘಾತ ಸಂಭವಿಸಿದ್ದು ನಿಜಕ್ಕೂ ಬೇಸರದ ಸಂಗತಿ.. ಆದಷ್ಟು ಬೇಗ ಕಿರಣ್‌ ರಾಜ್‌ ಹುಷಾರಾಗ್ಲಿ ಅನ್ನೋದೇ ಎಲ್ಲರ ಆಶಯ.

Shwetha M

Leave a Reply

Your email address will not be published. Required fields are marked *