ಬಿಗ್‌ಬಾಸ್ ಮನೆಯಲ್ಲಿ ಮತ್ತೆ ಹೊತ್ತಿದ ದ್ವೇಷದ ಬೆಂಕಿ – ಜಗಳ, ಸೇಡು ನೋಡಿ ನೋಡಿ ವೀಕ್ಷಕರಿಗೂ ಕಿರಿಕಿರಿ

ಬಿಗ್‌ಬಾಸ್ ಮನೆಯಲ್ಲಿ ಮತ್ತೆ ಹೊತ್ತಿದ ದ್ವೇಷದ ಬೆಂಕಿ – ಜಗಳ, ಸೇಡು ನೋಡಿ ನೋಡಿ ವೀಕ್ಷಕರಿಗೂ ಕಿರಿಕಿರಿ

ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಗಲಾಟೆ, ಜಗಳ, ಕಿರಿಕಿರಿ ಬಿಟ್ಟರೆ ಏನೂ ಇಲ್ಲ ಎಂಬುದು ಈ ವಾರದ ಟಾಸ್ಕ್ ಕೂಡಾ ಸಾಕ್ಷಿಯಾಗಿದೆ. ಕಾರ್ತಿಕ್ ಟೀಮ್ ಮುಗಿಬಿದ್ದರೆ, ವಿನಯ್ ಟೀಮ್ ಸೇಡು ತೀರಿಸಿಕೊಳ್ಳಲು ಕಾಯುತ್ತಿರುವುದು. ಜಗಳ ಅಂತೂ ಬಿಡಿ.. ಅಬ್ಬಬ್ಬಾ.. ಇವರದ್ದೆಲ್ಲಾ ಅದೆಂಥಾ ಬಾಯಿಯೋ ಮನೆಯಲ್ಲಿ ಮಕ್ಕಳ ಮುಂದೆ ಬಿಗ್‌ಬಾಸ್ ಹಾಕಿದರೆ ಮುಗಿದೇ ಹೋಯ್ತು. ಚಿಕ್ಕಮಕ್ಕಳು ಕೂಡಾ ಬಿಗ್‌ಬಾಸ್ ಸ್ಪರ್ಧಿಗಳನ್ನು ನೋಡಿ ಇವರೆಂಥಾ ಜಗಳ ಮಾಡ್ತಾರೆ ಅಂತಾ ಗೇಲಿ ಮಾಡುತ್ತಿದ್ದಾರೆ. ಈ ಬಾರಿ ಯಾಕೋ ಬಿಗ್‌ಬಾಸ್ ಮನೆ ಜಗಳದ ಗೂಡಾಗಿ ಬಿಟ್ಟಿದೆ. ಅದರಲ್ಲೂ ರಾಕ್ಷಸರು ಮತ್ತು ಗಂಧರ್ವರು ಅದಲು ಬದಲಾಗಿದ್ದೇ ತಡ, ಸೇಡು ಒಂದೇ ಟಾಸ್ಕ್‌ನ ಭಾಗವಾಗಿದೆ.

ಇದನ್ನೂ ಓದಿ: ವಿನಯ್, ನಮ್ರತಾ ಹಾಕಿದ ಗೆರೆ ದಾಟುವುದಿಲ್ಲ ಸ್ನೇಹಿತ್..!- ಕ್ಯಾಪ್ಟನ್ ಆಗಿ ಸ್ನೇಹಿತ್‌ಗೌಡ ತಾರತಮ್ಯ

ವಿನಯ್ ಹಾಗೂ ಗ್ಯಾಂಗ್, ಕಾರ್ತಿಕ್, ಸಂಗೀತಾ ಹಾಗೂ ತನಿಷಾ ಮೇಲೆ ದ್ವೇಷ ತೀರಿಸಿಕೊಳ್ಳುತ್ತಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಸೇಡು, ಜಗಳ ಬಿಟ್ಟರೆ ಮನರಂಜನೆಯಂತೂ ದೂರಾದ ಮಾತಾಗಿದೆ. ನೋಡುಗರಿಗೆ ಇವರ ಜಗಳ ನೋಡಿ ಕಿರಿಕಿರಿಯಾಗುತ್ತದೆ ಬಿಟ್ಟರೆ ಇನ್ನೇನು ಪ್ರಯೋಜನವಂತೂ ಆಗುತ್ತಿಲ್ಲ. ಅದರಲ್ಲೂ, ಕಾರ್ತಿಕ್ ಮತ್ತು ಸಂಗೀತಾ ಮೇಲೆ ದ್ವೇಷ ಕಾರಲು ಕಾಯುತ್ತಿದ್ದ ವಿನಯ್ ಮತ್ತು ನಮ್ರತಾ, ಸ್ನೇಹಿತ್ ಸಿಕ್ಕ ಅವಕಾಶವನ್ನು ಚೆನ್ನಾಗಿಯೇ ಬಳಸಿಕೊಂಡರು.

ಮಂಗಳವಾರದ ಎಪಿಸೋಡ್‌ನಲ್ಲಿ ಸಂಗೀತಾ, ಕಾರ್ತಿಕ್, ತನಿಷಾ, ಡ್ರೋನ್ ಪ್ರತಾಪ್, ಅವಿನಾಶ್, ಸಿರಿ ಅವರುಗಳು ರಾಕ್ಷಸರಾಗಿದ್ದರು. ಗಂಧರ್ವರ ಮೇಲೆ ಅಟ್ಟಹಾಸ ಮೆರೆದರು. ಬುಧವಾರದ ಎಪಿಸೋಡ್‌ನ ಅಂತ್ಯದ ವೇಳೆಗೆ ವಿನಯ್, ತುಕಾಲಿ, ನಮ್ರತಾ, ವರ್ತೂರು ಸಂತೋಷ್, ಪವಿ, ಮೈಖಲ್ ಅವರುಗಳು ರಾಕ್ಷಸರಾದರು. ಸಂಗೀತಾ ಗ್ಯಾಂಗ್ ರಾಕ್ಷಸರಾಗಿದ್ದಾಗ ಗಂಧರ್ವರಾಗಿದ್ದ ವಿನಯ್ ಆಂಡ್ ಗ್ಯಾಂಗ್ ಅನ್ನು ಸಖತ್ ಆಗಿ ಆಡಿಕೊಂಡಿದ್ದರು. ರಾಕ್ಷಸರ ಅಟ್ಟಹಾಸದಿಂದ ಬೇಸತ್ತಿದ್ದ ವಿನಯ್ ಆಂಡ್ ಗ್ಯಾಂಗ್, ರಾಕ್ಷಸರಾಗುವ ಅವಕಾಶಕ್ಕಾಗಿ ಕಾಯುತ್ತಿದ್ದರು. ಅಂತೆಯೇ ಅವಕಾಶ ಸಿಕ್ಕೊಡನೆ ಹಳೆಯ ದ್ವೇಷವನ್ನೆಲ್ಲ ತೀರಿಸಿಕೊಂಡರು. ಕಾರ್ತಿಕ್ ಅನ್ನು ವಿಶೇಷವಾಗಿ ಟಾರ್ಗೆಟ್ ಮಾಡಿದ ವಿನಯ್, ಕಾರ್ತಿಕ್ ಕಸದ ಬುಟ್ಟಿಗೆ ಎಸೆದಿದ್ದ ಆನೆಯ ಚಿಕ್ಕ ಮೂರ್ತಿಯನ್ನು ಕಾರ್ತಿಕ್ ಕೈಯಿಂದಲೇ ಎತ್ತಿಸಿಕೊಂಡು, ಅದನ್ನು ಟೇಬಲ್ ಮೇಲಿರಿಸಿ, ‘ಅಭಿಮಾನಿಗಳು ಕೊಟ್ಟ ಉಡುಗೊರೆಯನ್ನು ಕಸದ ಬುಟ್ಟಿಗೆ ಹಾಕಿದ ನಾನು ದಡ್ಡ’ ಎಂದು ಹೇಳುವಂತೆ ವಿನಯ್ ಆದೇಶಿಸಿದರು. ಅಂತೆಯೇ ಕಾರ್ತಿಕ್ ಸಹ ಅದನ್ನು ಹೇಳಿದರು. ನಂತರ ಸಂಗೀತಾರನ್ನು ಕರೆಸಿದ ಗ್ಯಾಂಗ್, ‘ನಾನು ಗಯ್ಯಾಳಿ, ನಾನು ಮಾತುಗಳನ್ನು ತಿರುಚುವವಳು ಇತ್ಯಾದಿಗಳನ್ನು ಹೇಳುವಂತೆ ಹೇಳಿದರು. ಗಂಧರ್ವರ ವೇಷದಲ್ಲಿದ್ದ ಸಂಗೀತಾ ಸಹ ವಿನಯ್ ಆಂಗ್ ಗ್ಯಾಂಗ್ ಹೇಳಿದಂತೆ ಹೇಳಿದರು. ಆ ಬಳಿಕ ತನಿಷಾರನ್ನು ಕರೆಸಿ, ‘ನಾನು, ಸಂಗೀತಾ ಹಾಗೂ ಕಾರ್ತಿಕ್ ಮರವಾಗಿ ಮಾತನಾಡುತ್ತೇನೆ, ಅವರ ಪರವಾಗಿ ಮಾತುಗಳನ್ನು ತಿರುಚುತ್ತೀನಿ, ನಾನು ಗಯ್ಯಾಳಿ, ಬಾಯಿಬಡಕಿ ಎಂದು ಹೇಳುವಂತೆ ಹೇಳಿದರು. ಅಂತೆಯೇ ತನಿಷಾ ಸಹ ಅದನ್ನು ಹೇಳಿದರು. ಬಳಿಕ ಅವಿನಾಶ್ ಅನ್ನು ಕರೆಸಿ ‘ನಾನು ಮಾವುತ ಅಲ್ಲ ಕುದುರೆ’ ಎಂದು ಹೇಳುತ್ತಾ ಕುದುರೆಯಂತೆ ಓಡಾಡು ಎಂದರು. ಅಂತೆಯೇ ಅವಿನಾಶ್ ಸಹ ಹುಚ್ಚು ಕುದುರೆಯಂತೆ ಓಡಾಡಿದರು. ಇನ್ನು ನಮ್ರತಾ ಆಟ ನೋಡಿದರೆ ಈಕೆಯನ್ನು ಒಮ್ಮೆ ಮೆಚ್ಚಿಕೊಂಡರೆ ಮತ್ತೊಮ್ಮೆ ಈಕೆ ನಿಜವಾಗಿಯೂ ಕಲಾವಿದೆಯಾಗಿದ್ದು ಹೌದಾ ಅನಿಸುವಷ್ಟು ಕೆಟ್ಟದಾಗಿ ವರ್ತಿಸುತ್ತಿದ್ದಾರೆ. ಸಂಗೀತಾ ಕೂಡಾ ಮಾತಿನಲ್ಲಿ ಕಡಿಮೆಯಿಲ್ಲ. ಆದರೆ, ನಮ್ರತಾ ಬಾಯಿಬಿಟ್ಟರೆ ವಿನಯ್ ಅಷ್ಟೇ ದುರಂಹಕಾರದ ಮಾತೇ ಹೊರಬರುತ್ತಿದೆ. ಸಂಗೀತಾ ಮತ್ತು ನಮ್ರತಾ ಸೇರಿಗೆ ಸವ್ವಾಸೇರು ಎಂಬಂತೆ ದುರಂಹಕಾರದಿಂದ ಮಾತಾಡುತ್ತಿರುವುದು ನೋಡಿದರೆ ವೀಕ್ಷಕರು ಅಬ್ಬಬ್ಬಾ.. ಬಿಗ್‌ಬಾಸ್ ಮನೆಯಾ ಇದು ಎಂದು ಕೇಳುವಂತಾಗಿದೆ.

Sulekha