IPL ಆಯ್ತು.. ಈಗ ವಿದರ್ಭ ಟ್ರೋಫಿ – ಚಾನ್ಸ್ಗಾಗಿ ಜಿದ್ದಿಗೆ ಬಿದ್ರಾ ಜಿತೇಶ್ ?
RCB ಹುಡುಗನ ಕಡೆ BCCI ಕಣ್ಣು?

ಈ ಬಾರಿಯ ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿ ಗೆಲ್ಲುವಲ್ಲಿ ಜಿತೇಶ್ ಶರ್ಮಾ ಪ್ರಮುಖ ಪಾತ್ರವಹಿಸಿದ್ದರು. ಅದರಲ್ಲೂ ಫೈನಲ್ ಪಂದ್ಯದಲ್ಲಿ 10 ಎಸೆತಗಳಲ್ಲಿ 24 ರನ್ ಬಾರಿಸುವ ಮೂಲಕ ಜಿತೇಶ್ ಪಂದ್ಯದ ಚಿತ್ರಣ ಬದಲಿಸಿದ್ದರು. ಈ ಮೂಲಕ ಪಂಜಾಬ್ ಕಿಂಗ್ಸ್ ವಿರುದ್ಧ ಆರ್ಸಿಬಿ 6 ರನ್ಗಳ ರೋಚಕ ಗೆಲುವು ದಾಖಲಿಸುವಲ್ಲಿ ಕಾರಣಕರ್ತರಾಗಿದ್ದರು. ಆರ್ಸಿಬಿಯಲ್ಲಿ ಮೋಡಿ ಮಾಡೋ ಮೂಲಕ ಜಿತೇಶ್ ರಾತ್ರೋರಾತ್ರಿ ಹೀರೋ ಆದ್ರೂ. ಇದೀಗ ಮತ್ತೊಂದು ಕಪ್ಗೆ ಮುತ್ತಿಟ್ಟಿದ್ದಾರೆ.
: ವಿದರ್ಭ ಟಿ20 ಲೀಗ್ನಲ್ಲೂ ಜಿತೇಶ್ ಶರ್ಮಾ ಕಮಾಲ್
ಜಿತೇಶ್ ಶರ್ಮಾ ವಿದರ್ಭ ಟಿ20 ಲೀಗ್ನಲ್ಲೂ ಜಿತೇಶ್ ಶರ್ಮಾ ಕಮಾಲ್ ಮಾಡಿದ್ದಾರೆ. ಈ ಬಾರಿ ನಾಯಕನಾಗಿ ಟ್ರೋಫಿ ಎತ್ತಿ ಹಿಡಿದಿದ್ದಾರೆ. ನಾಗಪುರದಲ್ಲಿ ನಡೆದ ವಿದರ್ಭ ಪ್ರೊ ಟಿ20 ಲೀಗ್ನ ಫೈನಲ್ ಪಂದ್ಯದಲ್ಲಿ ಮಾಸ್ಟರ್ ಬ್ಲಾಸ್ಟರ್ ಹಾಗೂ ಪಗರಿಯಾ ಸ್ಟ್ರೈಕರ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಗರಿಯಾ ಸ್ಟ್ರೈಕರ್ಸ್ 20 ಓವರ್ಗಳಲ್ಲಿ 178 ರನ್ ಕಲೆಹಾಕಿತು. ಈ ಕಠಿಣ ಗುರಿಯನ್ನು ಬೆನ್ನತ್ತಿದ ಮಾಸ್ಟರ್ ಬ್ಲಾಸ್ಟರ್ ತಂಡಕ್ಕೆ ವೇದಾಂತ್ ದಿಘಾಡೆ 80 ರನ್ಗಳ ಭರ್ಜರಿ ಆರಂಭ ಒದಗಿಸಿದ್ದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದ ಜಿತೇಶ್ ಶರ್ಮಾ ಬಿರುಸಿನ ಬ್ಯಾಟಿಂಗ್ನೊಂದಿಗೆ ಅಬ್ಬರಿಸಿದರು. ಪರಿಣಾಮ 11 ಎಸೆತಗಳಲ್ಲಿ 3 ಭರ್ಜರಿ ಸಿಕ್ಸ್ ಹಾಗೂ 1 ಫೋರ್ನೊಂದಿಗೆ 30 ರನ್ಗಳು ಮೂಡಿಬಂತು. ಜಿತೇಶ್ ಶರ್ಮಾ ಅವರ ಈ ಸ್ಫೋಟಕ ಬ್ಯಾಟಿಂಗ್ ನೆರವಿನೊಂದಿಗೆ ಮಾಸ್ಟರ್ ಬ್ಲಾಸ್ಟರ್ ತಂಡವು 17.3 ಓವರ್ಗಳಲ್ಲಿ 179 ರನ್ಗಳಿಸಿ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಈ ಮೂಲಕ ತಿಂಗಳುಗಳ ಅಂತರದಲ್ಲಿ ಜಿತೇಶ್ ಶರ್ಮಾ ಬ್ಯಾಕ್ ಟು ಬ್ಯಾಕ್ ಎರಡು ಟ್ರೋಫಿಗಳನ್ನು ಎತ್ತಿ ಹಿಡಿದಿದ್ದಾರೆ.
ಈ ವರ್ಷ ಜಿತೇಶ್ ಶರ್ಮಾ ಮುಟ್ಟಿದೆಲ್ಲಾ ಚಿನ್ನ ಎನ್ನುವಂತಾಗಿದೆ. ಯಾಕಂದ್ರೆ ಇವರ ನಾಯಕತ್ವದ ಪಂದ್ಯದಲ್ಲಿ ಬರೋಬ್ಬರಿ 227 ರನ್ಗಳ ಗುರಿಯನ್ನು ಬೆನ್ನತ್ತುವ ಮೂಲಕ ಆರ್ಸಿಬಿ ಈ ಸಲ ಇತಿಹಾಸ ನಿರ್ಮಿಸಿತ್ತು.. ಆರ್ಸಿಬಿ ತಂಡಕ್ಕೆ ಕಳೆದ 17 ವರ್ಷಗಳಲ್ಲಿ 210 ಕ್ಕಿಂತ ಹೆಚ್ಚಿನ ರನ್ ಚೇಸ್ ಮಾಡಿ ಗೆದ್ದ ಇತಿಹಾಸವಿರಲಿಲ್ಲ. ಆದರೆ ಈ ಬಾರಿ ಹೊಸ ಇತಿಹಾಸ ಬರೆಯುವಲ್ಲಿ ಜಿತೇಶ್ ಶರ್ಮಾ ಯಶಸ್ವಿಯಾಗಿದ್ದಾರೆ
ಜಿತೇಶ್ ಶರ್ಮಾ ಅವರು ಮಹಾರಾಷ್ಟ್ರದ ಅಮರಾವತಿಯವರು. ಆರ್ಸಿಬಿಗೆ ಬರೋ ಮುಂಚೆ ಇವರು ಪಂಜಾಬ್ ಕಿಂಗ್ಸ್ನಲ್ಲಿದ್ರು. ಈ ಸಲ ಆರ್ಸಿಬಿ ಕಪ್ ಗೆಲ್ಲುವಲ್ಲಿ ಜಿತೇಶ್ ಪ್ರಮುಖ ಪಾತ್ರವಹಿಸಿದ್ರು. ಜಿತೇಶ್ ಶರ್ಮಾ ಅವರು ಮಹಾರಾಷ್ಟ್ರದ ಅಮರಾವತಿಯವರು. ಆರ್ಸಿಬಿಗೆ ಬರೋ ಮುಂಚೆ ಇವರು ಪಂಜಾಬ್ ಕಿಂಗ್ಸ್ನಲ್ಲಿದ್ರು. ಇನ್ನೂ ಜಿತೇಶ್ ಸಿಚುವೇಷನ್ ಹೇಗ್ ಬೇಕಾದ್ರೂ ಇರಲಿ. ಎಂತಹ ಟೈಂನಲ್ಲಿ ಬೇಕಾದ್ರೂ ಸಿಕ್ಸ್ ಸಿಡಿಸುವ ಕಲೆ ಇವರಿಗಿದೆ. ಈಗ ವಿದರ್ಭ ಟಿ20 ಲೀಗ್ನಲ್ಲೂ ಜಿತೇಶ್ ಶರ್ಮಾ ಫೈನಲ್ ಗೆದ್ದಿದ್ದು, ಟೀಂ ಇಂಡಿಯಾ ತನ್ನ ಕಡೆ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ.