ಬುಮ್ರಾ ಸಿಟ್ಟಿಗೆ ಫ್ಯಾನ್ಸ್ ಫೋನ್ ಪುಡಿ – ಏರ್ಪೋರ್ಟ್ನಲ್ಲಿ ಆಗಿದ್ದೇನು ಗೊತ್ತಾ?

ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ವಿಮಾನ ನಿಲ್ದಾಣದಲ್ಲಿ ಚೆಕ್-ಇನ್ ಕ್ಯೂನಲ್ಲಿ ನಿಂತಿದ್ದಾಗ ಸೆಲ್ಫಿ ಕೇಳಿದ ಅಭಿಮಾನಿಯೊಂದಿಗೆ ತಾಳ್ಮೆ ಕಳೆದುಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ, ಸೆಲ್ಫಿ ವಿಡಿಯೋ ರೆಕಾರ್ಡ್ ಮಾಡುತ್ತಿದ್ದ ಅಭಿಮಾನಿಯೊಬ್ಬರಿಗೆ ಬುಮ್ರಾ ನಿಮ್ಮ ಫೋನ್ ಕೆಳಗೆ ಬಿದ್ದು ಒಡೆಯುತ್ತದೆ ಎಂದು ಎಚ್ಚರಿಸುತ್ತಿರುವುದು ಕಂಡುಬಂದಿದೆ. ಆದಾಗ್ಯೂ, ಅಭಿಮಾನಿ ರೆಕಾರ್ಡ್ ಮಾಡುವುದನ್ನು ಮುಂದುವರೆಸಿದ್ದಾರೆ ಮತ್ತು ಅದಾದ ಸ್ವಲ್ಪ ಸಮಯದ ನಂತರ, ವೇಗಿ ಫೋನ್ ತೆಗೆದುಕೊಂಡು ಹೋಗಲು ನಿರ್ಧರಿಸಿದರು.
ಇದನ್ನೂ ಓದಿ: ತಿರುಪತಿ ತಿಮ್ಮಪ್ಪನಿಗೆ ಕೋಟ್ಯಂತರ ಮೌಲ್ಯದ ಬ್ಲೇಡ್ ದಾನ ಮಾಡಿದ ಉದ್ಯಮಿ!
ವಾಸ್ತವವಾಗಿ ಬುಮ್ರಾ ನಿಂತಿದ್ದ ಸಾಲಿನಲ್ಲೇ ಅಭಿಮಾನಿ ಕೂಡ ನಿಂತಿದ್ದ. ಬುಮ್ರಾ ತನ್ನ ಪಕ್ಕದ ಸಾಲಿನಲ್ಲಿ ನಿಂತಿರುವುದನ್ನು ಗಮನಿಸಿದ ಅಭಿಮಾನಿ, ಬುಮ್ರಾ ಅನುಮತಿಯಿಲ್ಲದೆ ಸೆಲ್ಫಿ ವಿಡಿಯೋ ತೆಗೆದುಕೊಳ್ಳಲು ಪ್ರಾರಂಭಿಸಿದ್ದಾನೆ. ಇದನ್ನು ಗಮನಿಸಿದ ಬುಮ್ರಾ ಸೆಲ್ಫಿ ವಿಡಿಯೋ ಮಾಡದಂತೆ ಅಭಿಮಾನಿ ಬಳಿ ಮನವಿ ಮಾಡಿದ್ದಾರೆ. ಆದಾಗ್ಯೂ, ಅಭಿಮಾನಿ ಬುಮ್ರಾ ಮನವಿಯನ್ನು ನಿರ್ಲಕ್ಷಿಸಿ ವಿಡಿಯೋ ಮಾಡುವುದನ್ನು ಮುಂದುವರೆಸಿದ್ದಾನೆ, ಇದರಿಂದ ಕೋಪಗೊಂಡ ಬುಮ್ರಾ, ಆ ಅಭಿಮಾನಿಯ ಫೋನ್ ಕಸಿದುಕೊಂಡು ಎಸೆದಿದ್ದಾರೆ.
ಅಭಿಮಾನಿ: ನಾನು ನಿಮ್ಮೊಂದಿಗೆ ಹೋಗುತ್ತೇನೆಯೇ ಸರ್?
ಬುಮ್ರಾ: ನಿಮ್ಮ ಫೋನ್ ಬಿದ್ದರೆ, ನನ್ನನ್ನು ಕೇಳಬಾರದು.
ಅಭಿಮಾನಿ: ಪರವಾಗಿಲ್ಲ ಸರ್.
ಬುಮ್ರಾ: ಪರವಾಗಿಲ್ಲ?
ಇದಾದ ನಂತರ, ಬುಮ್ರಾ ಅಭಿಮಾನಿಯ ಫೋನ್ ಅನ್ನು ಕಸಿದುಕೊಂಡು ಎಸೆದಿದ್ದಾರೆ.
ಇದಕ್ಕೂ ಮೊದಲು, ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬುಧವಾರ ನಡೆಯಬೇಕಿದ್ದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ನಾಲ್ಕನೇ ಟಿ20ಐ ಪಂದ್ಯವು ಅತಿಯಾದ ಮಂಜು ಕವಿದಿದ್ದರಿಂದಾಗಿ ರದ್ದಾಗಿತ್ತು. ಅಂಪೈರ್ಗಳಾದ ರೋಹನ್ ಪಂಡಿತ್ ಮತ್ತು ಕೆ.ಎನ್. ಅನಂತಪದ್ಮನಾಭನ್ ಟಾಸ್ ಅನ್ನು ವಿಳಂಬಗೊಳಿಸಿದರು ಮತ್ತು ಬ್ಯಾಟರ್ನ ಕ್ರೀಸ್ನಿಂದ ಫ್ಲಡ್ಲೈಟ್ಗಳನ್ನು ನೋಡುವ ಮೂಲಕ ರಾತ್ರಿ 9.25ರವರೆಗೂ ಹಲವಾರು ಬಾರಿ ತಪಾಸಣೆಗಳನ್ನು ನಡೆಸಿದರು. ನಂತರ ರಾತ್ರಿ 9.30ಕ್ಕೆ ಪಂದ್ಯವನ್ನು ರದ್ದುಗೊಳಿಸಿದರು. ಲಖನೌನಲ್ಲಿ ಪಂದ್ಯ ನಡೆಯದ ಕಾರಣ, ಕ್ರೀಡಾಂಗಣದಲ್ಲಿದ್ದ ಉತ್ಸಾಹಭರಿತ ಅಭಿಮಾನಿಗಳು ನಿರಾಶೆಗೊಂಡಿದ್ದಾರೆ. ಭಾರತವು ಐದು ಪಂದ್ಯಗಳ ಸರಣಿಯಲ್ಲಿ 2-1 ಮುನ್ನಡೆಯಲ್ಲಿದೆ. ಉಭಯ ತಂಡಗಳು ಈಗ ಶುಕ್ರವಾರ ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐದನೇ ಮತ್ತು ಅಂತಿಮ ಪಂದ್ಯದತ್ತ ಗಮನ ಹರಿಸಲಿವೆ.

ನೋಡಿರಿ

