ಪ್ರಿಯಾಂಕಾ ಗಾಂಧಿಗೆ ಮಲ್ಲಿಗೆ ಹೂವು ಮತ್ತು ಸೀರೆ ಉಡುಗೊರೆ..! – ಕನಕಗಿರಿ ಜನತೆಯ ಪ್ರೀತಿಗೆ ಕರಗಿದ ‘ಕೈ’ ನಾಯಕಿ

ಪ್ರಿಯಾಂಕಾ ಗಾಂಧಿಗೆ ಮಲ್ಲಿಗೆ ಹೂವು ಮತ್ತು ಸೀರೆ ಉಡುಗೊರೆ..! – ಕನಕಗಿರಿ ಜನತೆಯ ಪ್ರೀತಿಗೆ ಕರಗಿದ ‘ಕೈ’ ನಾಯಕಿ

ಕನಕಗಿರಿ ಪಟ್ಟಣದಲ್ಲಿ ನಡೆದ ಕಾಂಗ್ರೆಸ್ ಸಮಾವೇಶಕ್ಕೆ ಆಗಮಿಸಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಗೆ ಮಲ್ಲಿಗೆ ಹೂವು ಮತ್ತು ಸೀರೆ ಉಡುಗೊರೆಯಾಗಿ ಸಿಕ್ಕಿದೆ. ಕಾಂಗ್ರೆಸ್ ಅಭ್ಯರ್ಥಿ ಶಿವರಾಜ ತಂಗಡಗಿ ಪರ ಪ್ರಚಾರ ನಡೆಸಲು ಪ್ರಿಯಾಂಕಾ ಗಾಂಧಿ ಕನಕಗಿರಿ ಪಟ್ಟಣಕ್ಕೆ ಆಗಮಿಸಿದರು. ಈ ವೇಳೆ ಪ್ರಚಾರಕ್ಕೆ ಆಗಮಿಸಿದ್ದ ಶಿವರಾಜ ತಂಗಡಗಿ ಕುಟುಂಬ, ಪ್ರಿಯಾಂಕಾ ಗಾಂಧಿಗೆ ಮಲ್ಲಿಗೆ ಹೂವು, ಸೀರೆ ನೀಡಿ ಸ್ವಾಗತಿಸಿದರು.

ಇದನ್ನೂ ಓದಿ: ವರುಣಾದಲ್ಲಿ ‘ಸಿದ್ದು’ ಪರ ಶಿವಣ್ಣ ಪ್ರಚಾರ – ದೇವದುರ್ಗದಲ್ಲಿ ‘ಕಿಚ್ಚ’ನ ನೋಡಲು ಬಂದವರಿಗೆ ಲಾಠಿರುಚಿ

ಕಾಂಗ್ರೆಸ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಗಾಂಧಿ, ಇದು ಸತ್ಯದ ಕ್ಷೇತ್ರ, ಇಲ್ಲಿನ ಜನ ಸತ್ಯವನ್ನೇ ನುಡಿಯುತ್ತಾರೆ. ನಮ್ಮ ಸ್ವಾತಂತ್ರ್ಯ ಹೋರಾಟ ಕೂಡಾ ಸತ್ಯದ ಹಾದಿಯಲ್ಲೇ ನಡೆದಿತ್ತು. ಮಹಾತ್ಮಾ ಗಾಂಧಿ, ನೆಹರೂ ಸತ್ಯದ ಹಾದಿಯಲ್ಲಿ ನಡೆಯುತ್ತಿದ್ದರು. ನಾವೂ ಅವರ ಆದರ್ಶದ ಹಾದಿಯಲ್ಲೇ ನಡೆಯುತ್ತಿದ್ದೇವೆ. ಇಂದಿರಾ ಗಾಂಧಿಯನ್ನ ಇವತ್ತಿಗೂ ನೀವ್ಯಾಕೆ ನೆನೆಸುತ್ತಿರಿ ಅಂದ್ರೆ ಅವರು ಬಡವರಿಗೆ ನೀಡಿದ ಉಳುವವನೇ ಭೂಮಿ ಒಡೆಯ ಅನ್ನೋ ಮಹಾನ್ ಯೋಜನೆ ಜಾರಿಗೆ ತಂದಿದ್ದರಿಂದ. ಇವತ್ತು ದಿನಬಳಕೆ ವಸ್ತುಗಳು ಗಗನಕ್ಕೇರಿವೆ. ದಿನ ಬೆಳಗಾದ್ರೆ ಊಟ ಮಾಡೋಕೂ ಯೋಚನೆ ಮಾಡಬೇಕಾಗಿದೆ. ಬೆಲೆ ಏರಿಕೆ ಸಾಮಾನ್ಯ ಜನರಿಗೆ ಸಂಕಷ್ಟ ತಂದಿದೆ. ಆದ್ರೆ ನಿಮ್ಮನಾಳೋ ಸರ್ಕಾರದ ಸಚಿವರು, ಶಾಸಕರು ಬಿಂದಾಸ್ ಆಗಿದ್ದಾರೆ. ಈ ಸರ್ಕಾರ ನಿಮ್ಮ 1.50 ಲಕ್ಷ ಕೋಟಿ ಲೂಟಿ ಮಾಡಿದೆ. ಆ ಹಣದಿಂದ 100 ಏಮ್ಸ್ ಆಸ್ಪತ್ರೆಗಳನ್ನ ಕಟ್ಟಿಸಬಹುದಿತ್ತು. 30 ಲಕ್ಷ ಬಡ ಜನರಿಗೆ ಮನೆ ನಿರ್ಮಿಸಬಹುದಿತ್ತು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಮಹಾಭಾರತದಲ್ಲಿ ಅರ್ಜನನ ಗುರಿ ಹೇಗಿತ್ತೋ ನಿಮ್ಮ ಗುರಿ ಕೂಡಾ ಇರಬೇಕು. ಅವರಿವರು ಏನ್ ಹೇಳ್ತಾರೆ ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಬಾರದು. ನಿಮ್ಮ ಗುರಿ ನಿಮ್ಮ ಭವಿಷ್ಯದ ಕಡೆ ಇರಬೇಕು. ನಿಮ್ಮ ಗುರಿ ನಿಮ್ಮ ಮಕ್ಕಳ ಭವ್ಯ ಭವಿಷ್ಯದ ಕಡೆ ಇರಬೇಕು. ನಿಮ್ಮ ಭವಿಷ್ಯ ಯಾರು ರೂಪಿಸುತ್ತಾರೋ ಅವರಿಗೆ ಮತ ನೀಡಿ. ಬಿಜೆಪಿ ಸರ್ಕಾರ ನಿಮಗೆ ಏನ್ ಮಾಡಿದೆ, ಕಾಂಗ್ರೆಸ್ ಏನ್ ಹೇಳಿದೆ ಇದನ್ನ ನೆನಪಿಸಿಕೊಳ್ಳಿ. ಕಾಂಗ್ರೆಸ್ ಪಕ್ಷವನ್ನು ಪೂರ್ಣಬಹುದೊಂದಿಗೆ ಗೆಲ್ಲಿಸಿ ಎಂದು ಮನವಿ ಮಾಡಿದರು.

suddiyaana