ತಿಮ್ಮಪ್ಪನ ಭಕ್ತರಿಗೆ ಬಂಪರ್ ಆಫರ್! – 990 ರೂ. ಪಾವತಿಸಿದರೆ ಒಂದೇ ದಿನದಲ್ಲಿ ಬಾಲಾಜಿ ದರ್ಶನ!

ತಿಮ್ಮಪ್ಪನ ಭಕ್ತರಿಗೆ ಬಂಪರ್ ಆಫರ್! – 990 ರೂ. ಪಾವತಿಸಿದರೆ ಒಂದೇ ದಿನದಲ್ಲಿ ಬಾಲಾಜಿ ದರ್ಶನ!

ನವದೆಹಲಿ: ಜೀವನದಲ್ಲಿ ಒಮ್ಮೆಯಾದರೂ ತಿರುಪತಿ ತಿಮ್ಮಪ್ಪನ ದರ್ಶನ ಮಾಡಬೇಕು ಅಂತಾ ಅನೇಕರು ಅಂದುಕೊಳ್ಳುತ್ತಾರೆ. ಆದರೆ ಅಧಿಕ ಭಕ್ತರು ಆಗಮಿಸುವುದರಿಂದ ಒಂದೇ ದಿನಕ್ಕೆ ದರ್ಶನಕ್ಕೆ ಸಾಧ್ಯವಾಗೋದಿಲ್ಲ ಅಂತಾ ಅನೇಕರು ತಿಮ್ಮಪ್ಪನ ದರ್ಶನ ಮಾಡುವ ಪ್ಲಾನ್ ಅನ್ನು ಮುಂದೂಡುತ್ತಾ ಬರುತ್ತಾರೆ. ಅಂತವರಿಗಾಗಿಯೇ ಇಲ್ಲೊಂದು ಖುಷಿ ಸುದ್ದಿಯಿದೆ. ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (ಐಆರ್ ಸಿಟಿಸಿ) ಬಂಪರ್ ಅಫರ್ ಒಂದನ್ನು ನೀಡಿದೆ.

ಇದನ್ನೂ ಓದಿ: ತಿರುಪತಿ ದೇಗುಲಕ್ಕೆ ಕೇಂದ್ರದಿಂದ ಬಿಗ್ ಶಾಕ್! – ಹುಂಡಿಯ ವಿದೇಶಿ ಕರೆನ್ಸಿಗೆ ನಿರ್ಬಂಧ ಹೇರಿದ್ದೇಕೆ?

ಸಮಯದ ಅಭಾವದಿಂದ ತಿರುಪತಿ ತಿಮ್ಮಪ್ಪನ ದರ್ಶನ ಮಾಡದ ಅದೆಷ್ಟೋ ಮಂದಿ ಇದ್ದಾರೆ. ಅಂತವರಿಗಾಗಿ ಐಆರ್ ಸಿಟಿಸಿ ಬಂಪರ್ ಆಫರ್ ನೀಡಿದೆ. ಒಂದೇ ದಿನದಲ್ಲಿ ಕೇವಲ 990 ರೂಪಾಯಿಗೆ ತಿರುಪತಿ ದರ್ಶನ ಮಾಡಲು ಅವಕಾಶ ನೀಡಿದೆ. ಸದ್ಯ ಏ.15ಕ್ಕೆ ಈ ಅವಕಾಶ ಪ್ರಯಾಣಿಕರಿಗಿದೆ.

ತಿಮ್ಮಪ್ಪನ ದರ್ಶನಕ್ಕೆಂದು ತಿರುಪತಿಗೆ ಹೋಗುತ್ತಿರುವವರು ಐಆರ್ ಸಿಟಿಸಿ ಮೂಲಕ ಬಾಲಾಜಿ ದರ್ಶನ್ ಟಿಕೆಟ್ ಬುಕ್ ಮಾಡಿಕೊಳ್ಳಬಹುದು. ಟಿಕೆಟ್ ಬುಕ್ ಮಾಡಿಕೊಂಡವರನ್ನು ತಿರುಪತಿ ರೈಲ್ವೆ ನಿಲ್ದಾಣದಿಂದ ಐಆರ್ ಸಿಟಿಸಿ ರಸ್ತೆಸಾರಿಗೆ ಕರೆದೊಯ್ಯಲಿದೆ. ಪ್ಯಾಕೇಜ್ ನ ನಿಯಮದಂತೆ ಎಸಿ ಬಸ್ ನಲ್ಲಿ ಪ್ರಯಾಣಿಕರನ್ನು ಕರೆದೊಯ್ದು ತಿರುಪತಿ ತಿಮ್ಮಪ್ಪನ ದರ್ಶನ ಮಾಡಿಸಲಾಗುತ್ತದೆ. ಅಷ್ಟೇ ಅಲ್ಲದೇ, ಬಾಲಾಜಿ ದರ್ಶನದ ಜತೆಗೆ ತಿರುಚಾನೂರು ಪದ್ಮಾವತಿ ದರ್ಶನವನ್ನೂ ಮಾಡಿಸಲಾಗುತ್ತದೆ. ದರ್ಶನದ ಬಳಿಕ ಪ್ರಯಾಣಿಕರನ್ನು ಮತ್ತೆ ರೈಲ್ವೆ ನಿಲ್ದಾಣಕ್ಕೆ ಕರೆತರಲಾಗುತ್ತದೆ.

suddiyaana