ಕೆಕೆಆರ್​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರಿಗೆ ರೋಚಕ ಸೋಲು – ಪ್ಲೇ ಆಫ್‌ ಕನಸು ಬಹುತೇಕ ಭಗ್ನ

ಕೆಕೆಆರ್​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರಿಗೆ ರೋಚಕ ಸೋಲು – ಪ್ಲೇ ಆಫ್‌ ಕನಸು ಬಹುತೇಕ ಭಗ್ನ

ಆರ್‌ಸಿಬಿ ಹಾಗೂ ಕೆಕೆಆರ್ ನಡುವಿನ ಹೈವೋಲ್ಟೇಜ್ ಪಂದ್ಯದ ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿತ್ತು. ಆದ್ರೆ  ಕೊನೆ ಕ್ಷಣದಲ್ಲಿ ಆತಿಥೇಯ ಕೋಲ್ಕತಾ ನೈಟ್ ರೈಡರ್ಸ್  ತಂಡ ಒಂದು ರನ್  ಮೂಲಕ ಗೆದ್ದು ಬೀಗಿದೆ.

ಇದನ್ನೂ ಓದಿ:  ಕಲ್ಲಂಗಡಿ ಹಣ್ಣು ಫ್ರಿಡ್ಜ್ ನಲ್ಲಿ ಇಟ್ಟು ತಿನ್ನುವುದು ಡೇಂಜರ್‌!   

ಕೋಲ್ಕತ್ತಾ ಈಡನ್​ ಗಾರ್ಡೆನ್​​ ಇಂಟರ್ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹೈವೋಲ್ಟೇಜ್​ ಪಂದ್ಯದಲ್ಲಿ ಗೆಲ್ಲಲು 223 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಉತ್ತಮ ಆರಂಭ ಪಡೆಯಲು ವಿಫಲವಾಯಿತು.

ಇನ್ನು, ಕೊಹ್ಲಿ ಔಟಾದ ದೊಡ್ಡ ಹೈಡ್ರಾಮ ನಡೆದು ಹೋಗಿದೆ. ಹರ್ಷಿತ್​​ ರಾಣಾ ಎಸೆತ ಬಾಲ್​ನಲ್ಲಿ ಕೊಹ್ಲಿ ಕ್ಯಾಚ್​ ಕೊಟ್ಟರು. ಕೊಹ್ಲಿ ಹರ್ಷಿತ್​ ರಾಣಾ ಎಸೆದದ್ದು ನೋ ಬಾಲ್​ ಎಂದರು ಅಂಪೈರ್​ ಕೇಳಲಿಲ್ಲ. ಬದಲಿಗೆ ಔಟ್​ ನೀಡಿದ್ರು. ಬಳಿಕ ಕೊಹ್ಲಿ ಅಂಪೈರ್​ ಬಳಿಗೆ ಹೋಗಿ ಜಗಳ ಮಾಡಿದ್ರು. ಒಟ್ನಲ್ಲಿ ವಿವಾದಾತ್ಮಕ ತೀರ್ಪಿಗೆ ಕೊಹ್ಲಿ ಬಲಿಯಾದ್ರು.

ಕೊಹ್ಲಿ ಔಟಾದ ಬಳಿಕ ಕ್ರೀಸ್​ಗೆ ಬಂದ ವಿಲ್​ ಜಾಕ್ಸ್​​​ ಕೇವಲ 26 ಬಾಲ್​ನಲ್ಲಿ ಸಿಡಿಲಬ್ಬರದ ಅರ್ಧಶತಕ ಸಿಡಿಸಿದ್ರು. ಇನ್ನಿಂಗ್ಸ್​ ಉದ್ಧಕ್ಕೂ ಕೆಕೆಆರ್​ ಬೌಲರ್​ಗಳ ಬೆಂಡೆತ್ತಿದ್ರು. ಬರೋಬ್ಬರಿ 5 ಸಿಕ್ಸರ್​​, 4 ಫೋರ್​ ಸಮೇತ 53 ರನ್​ ಸಿಡಿಸಿದ್ರು. ಇವರ ಸ್ಟ್ರೈಕ್​ ರೇಟ್​​​ 250ಕ್ಕೂ ಹೆಚ್ಚಿತ್ತು.

ಆರ್​​ಸಿಬಿ ಸ್ಟಾರ್​ ಬ್ಯಾಟರ್​ ರಜತ್​ ಪಾಟಿದಾರ್​ ಕೂಡ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಕೇವಲ 21 ಬಾಲ್​ನಲ್ಲಿ ಅಬ್ಬರದ ಅರ್ಧಶತಕ ಸಿಡಿಸಿದ್ರು. ಬರೋಬ್ಬರಿ 5 ಸಿಕ್ಸರ್​​, 3 ಫೋರ್​ ಸಮೇತ 52 ರನ್​ ಬಾರಿಸಿದ್ರು. ಇವರ ಸ್ಟ್ರೈಕ್​ ರೇಟ್​ ಕೂಡ 250ಕ್ಕೂ ಮೇಲಿತ್ತು. ಸುಯಶ್​ ಪ್ರಭುದೇಸಾಯ್​​ 24, ದಿನೇಶ್​ ಕಾರ್ತಿಕ್​ 25, ಕರ್ಣ್​ ಶರ್ಮಾ 20 ರನ್​ ಸಿಡಿಸಿದ್ರೂ 1 ರನ್​ನಿಂದ ಆರ್​​ಸಿಬಿ ಸೋತಿದೆ.

ಗೆಲ್ಲಲು ಕೊನೆಯ ಓವರ್‌ನಲ್ಲಿ ಆರ್‌ಸಿಬಿಗೆ 21 ರನ್ ಅಗತ್ಯವಿತ್ತು. ಕರ್ಣ್ ಶರ್ಮಾ 3 ಸಿಕ್ಸರ್ ಸಿಡಿಸಿದರಾದರೂ, ತಂಡವನ್ನು ರೋಚಕ ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಒಟ್ಟಾರೆ ಟೂರ್ನಿಯಲ್ಲಿ 7ನೇ ಸೋಲು ಕಂಡ ಆರ್‌ಸಿಬಿ ತಂಡವು ಬಹುತೇಕ ಪ್ಲೇ ಆಫ್‌ ಕನಸು ಭಗ್ನವಾದಂತೆ ಆಗಿದೆ.

Shwetha M

Leave a Reply

Your email address will not be published. Required fields are marked *