ಐಫೋನ್​ ಹ್ಯಾಕ್ ಯತ್ನ ಪ್ರಕರಣ – ಸಾಕ್ಷಿ ಒದಗಿಸುವಂತೆ ಆ್ಯಪಲ್​ಗೆ ಕೇಂದ್ರ ಸರ್ಕಾರದಿಂದ ನೋಟಿಸ್​

ಐಫೋನ್​ ಹ್ಯಾಕ್ ಯತ್ನ ಪ್ರಕರಣ – ಸಾಕ್ಷಿ ಒದಗಿಸುವಂತೆ ಆ್ಯಪಲ್​ಗೆ ಕೇಂದ್ರ ಸರ್ಕಾರದಿಂದ ನೋಟಿಸ್​

ದೇಶದಾದ್ಯಂತ ಐಫೋನ್‌ ಹ್ಯಾಕ್‌ ಪಯತ್ನ ಪ್ರಕರಣ ಭಾರಿ ಸದ್ದು ಮಾಡುತ್ತಿದೆ. ಭಾರತದ ಕೆಲ ಮುಖಂಡರ ಐಫೋನ್​​ಗಳ ಮೇಲೆ ಸರ್ಕಾರಿ ಪ್ರಾಯೋಜಿತ ದಾಳಿಗಳಾಗುತ್ತಿರಬಹುದು ಎಂಬ ಅಲರ್ಟ್ ಮೆಸೇಜ್‌ ಬಂದಿದೆ ಎಂದು ಕೆಲ ನಾಯಕರು ಆರೋಪ ಮಾಡಿದ್ದಾರೆ. ಇದೀಗ ಈ ಪ್ರಕರಣವನ್ನು ಗಂಭೀರವಾಗಿ ಕೇಂದ್ರ ಸರ್ಕಾರ ಪರಿಗಣಿಸಿದೆ. ಆ್ಯಪಲ್​ ಕಂಪನಿಗೆ ಕೇಂದ್ರ ಸರ್ಕಾರ ನೋಟಿಸ್​ ಕಳುಹಿಸಿದ್ದು, ಸರ್ಕಾರಿ ಪ್ರಾಯೋಜಿತ ದಾಳಿ ನಡೆದಿದೆ ಎನ್ನುವುದಕ್ಕೆ ಸಾಕ್ಷ್ಯಾಧಾರವನ್ನು ಒದಗಿಸುವಂತೆ ಕೇಳಿದೆ.

ಎಲೆಕ್ಟ್ರಾನಿಕ್ಸ್​ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಆ್ಯಪಲ್​ ಕಂಪನಿಗೆ ನೋಟಿಸ್​ ನೀಡಿದೆ. ಸರ್ಕಾರಿ ಪ್ರಾಯೋಜಿತ ದಾಳಿ ನಡೆದಿರುವುದಕ್ಕೆ ಈ ತಕ್ಷಣ ಪ್ರತಿಕ್ರಿಯೆ ನೀಡುವಂತೆ ನಿರ್ದೇಶನ ನೀಡಿದೆ. ಸರ್ಕಾರಿ ಪ್ರಾಯೋಜಿತ ದಾಳಿಯ ಬಗ್ಗೆ ಅಂತಿಮ ನಿರ್ಣಯವನ್ನು ತಿಳಿಸುವಂತೆ ಆ್ಯಪಲ್​ ಕಂಪನಿಯ ಅಧಿಕಾರಿಗಳಿಗೆ ಸಚಿವಾಲಯ ತಿಳಿಸಿದೆ.

ಅ.31ರಂದು. ಇಂಡಿಯಾ ಒಕ್ಕೂಟದ ಸದಸ್ಯರುಗಳಾದ ಕಾಂಗ್ರೆಸ್​ ಸಂಸದ ಶಶಿ ತರೂರ್​, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಪ್ರಿಯಾಂಕಾ ಚೆತುರ್ವೇದಿ (ಶಿವಸೇನಾ ಪಕ್ಷದ ರಾಜ್ಯಸಭಾ ಸದಸ್ಯ), ಅಸಾದುದ್ದೀನ್​ ಒವೈಸಿ (ಲೋಕಸಭಾ ಸದಸ್ಯ, ಎಐಎಂಐಎಂ), ರಾಘವ್​ ಚಡ್ಡಾ (ಆ್ಯಪ್​ ಪಕ್ಷದ ರಾಜ್ಯಸಭಾ ಸದಸ್ಯ) ಮತ್ತು ಐಎನ್​ಸಿ ವಕ್ತಾರರಾದ ಪವನ್​ ಖೇರಾ ಮತ್ತು ಸುಪ್ರಿಯಾ ಶ್ರೀನಾಥೆ ಅವರುಗಳಿಗೆ ಸೋಮವಾರ ರಾತ್ರಿ ಆ್ಯಪಲ್​ ಕಂಪನಿಯಿಂದ ಎಚ್ಚರಿಕೆ ಸಂದೇಹಗಳು ಹೋಗಿದ್ದು, ಇದು ಸರ್ಕಾರಿ ಪ್ರಾಯೋಜಕತ್ವದ ಹ್ಯಾಕಿಂಗ್​ ಯತ್ನ ಎಂದು ಆರೋಪಿಸಲಾಗಿದೆ. ಆದರೆ, ಈ ಆರೋಪವನ್ನು ಕೇಂದ್ರ ಸರ್ಕಾರ ನಯವಾಗಿ ತಿರಸ್ಕರಿಸಿದೆ.

ಇದನ್ನೂ ಓದಿ: ಅಪಾರ್ಟ್‌ಮೆಂಟ್‌ನಲ್ಲಿ ಪ್ರಾಣಿ ಸಾಕುವವರಿಗೆ ಹೊಸ ರೂಲ್ಸ್‌! – ಪ್ರಾಣಿಪ್ರಿಯರನ್ನು ಕೆರಳಿಸಿದ ಹೊಸ ನಿಯಮ!

ಈ ಬಗ್ಗೆ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಸಚಿವ ಅಶ್ವಿನಿ ವೈಷ್ಣವ್​ ಅವರು ಪ್ರತಿಕ್ರಿಯೆ ನೀಡಿದ್ದು, ಫೋನ್​ ಹ್ಯಾಕಿಂಗ್​ ಬಗ್ಗೆ ಯಾರೆಲ್ಲ ರಾಜಕಾರಣಿಗಳು ಧ್ವನಿ ಎತ್ತಿದ್ದಾರೋ ಅದನ್ನು ಪರಿಗಣಿಸಿ, ಪರಿಶೀಲಿಸುವುದಾಗಿ ತಿಳಿಸಿದ್ದಾರೆ.

ಎಚ್ಚರಿಕೆ ಸಂದೇಶದಲ್ಲಿ ಏನಿದೆ?

ಆ್ಯಪಲ್​ ಕಂಪನಿಯು ಸಂಸತ್ತಿನ ಉಭಯ ಸದನಗಳ ಸದಸ್ಯರಿಗೆ ಎಸ್​ಎಂಎಸ್​ ಮತ್ತು ಇಮೇಲ್ ಮೂಲಕ ಎಚ್ಚರಿಕೆಗಳನ್ನು ಕಳುಹಿಸಿದೆ ಮತ್ತು ಇತ್ತೀಚಿನ iOS 17.1 ಅಪ್‌ಡೇಟ್‌ಗೆ ಮೊಬೈಲ್​ ಅನ್ನು ಅಪ್‌ಗ್ರೇಡ್ ಮಾಡಲು ಒತ್ತಾಯಿಸಿದೆ. ಏಕೆಂದರೆ, ಅಪ್​ಗ್ರೇಡ್​ ಮಾಡದಿದ್ದರೆ, ಅದು ಭದ್ರತಾ ಲೋಪದೋಷಗಳನ್ನು ಪ್ಲಗ್ ಮಾಡುವ ಹಲವಾರು ಸೆಕ್ಯುರಿಟಿ ಪ್ಯಾಚ್‌ಗಳನ್ನು ಹೊಂದಿದ್ದು, ಐಫೋನ್‌ ಹ್ಯಾಕ್​ಗೆ ಅನುಮತಿಸಬಹುದು ಎಂಬುದು ಎಚ್ಚರಿಕೆ ಸಂದೇಶದಲ್ಲಿದೆ.

ಆ್ಯಪಲ್ಸ್ಪಷ್ಟನೆ ಏನು?

ಯಾವುದೇ ನಿರ್ದಿಷ್ಟ ಸರ್ಕಾರ ಪ್ರಾಯೋಜಿತ ಹ್ಯಾಕಿಂಗ್​ ಬೆದರಿಕೆ ನೋಟಿಫಿಕೇಶನ್​ಗಳ ಬಗ್ಗೆ ಆ್ಯಪಲ್ ಕಂಪನಿ ಆರೋಪ ಮಾಡುವುದಿಲ್ಲ. ಸರ್ಕಾರ ಪ್ರಾಯೋಜಿತ ಹ್ಯಾಕರ್​ಗಳು ಉತ್ತಮ ಹಣ ಮತ್ತು ಅತ್ಯಾಧುನಿಕರಾಗಿರುತ್ತಾರೆ. ಈ ಹ್ಯಾಕರ್​ಗಳ ದಾಳಿಗಳು ಕಾಲಾನಂತರದಲ್ಲಿ ವಿಕಸನಗೊಳ್ಳುತ್ತವೆ. ಇಂತಹ ಹ್ಯಾಕರ್​ಗಳನ್ನು ಪತ್ತೆಹಚ್ಚುವುದು ಸಾಮಾನ್ಯವಾಗಿ ಅಪೂರ್ಣ ಮತ್ತು ಅಪೂರ್ಣವಾಗಿರುವ ಬೆದರಿಕೆ ಗುಪ್ತಚರ ಸಂಕೇತಗಳ ಮೇಲೆ ಅವಲಂಬಿತವಾಗಿದೆ. ಕೆಲವು ಆ್ಯಪಲ್ ಬೆದರಿಕೆ ನೋಟಿಫಿಕೇಶನ್​ಗಳು ತಪ್ಪು ಎಚ್ಚರಿಕೆ ಸಂದೇಶಗಳಾಗಿರಬಹುದು ಅಥವಾ ಕೆಲವು ದಾಳಿಗಳು ಪತ್ತೆಯಾಗದಿರುವ ಸಾಧ್ಯತೆಯೂ ಇದೆ. ಬೆದರಿಕೆ ನೋಟಿಫಿಕೇಶನ್​ಗಳು ಬರಲು ಕಾರಣವೇನು ಎಂಬುದರ ಕುರಿತು ಮಾಹಿತಿಯನ್ನು ಒದಗಿಸಲು ನಮಗೆ ಸಾಧ್ಯವಾಗುತ್ತಿಲ್ಲ, ಏಕೆಂದರೆ ಭವಿಷ್ಯದಲ್ಲಿ ಪತ್ತೆಹಚ್ಚುವಿಕೆಯನ್ನು ತಪ್ಪಿಸುವ ಸಲುವಾಗಿ ಸರ್ಕಾರಿ ಪ್ರಾಯೋಜಿತ ಹ್ಯಾಕರ್​ಗಳು ತಮ್ಮ ನಡವಳಿಕೆಯನ್ನು ಹೊಂದಿಕೊಳ್ಳಲು ಮಾಹಿತಿ ಸಹಾಯ ಮಾಡಬಹುದು ಎಂದು ಆ್ಯಪಲ್​ ಕಂಪನಿ ಹೇಳಿದೆ.

ಆ್ಯಪಲ್ ಸುಮಾರು 150 ರಾಷ್ಟ್ರಗಳಿಗೆ ಹ್ಯಾಕ್ ಆಗುವ ಅಪಾಯದಲ್ಲಿರುವ ಜನರಿಗೆ ಇದೇ ರೀತಿಯ ಎಚ್ಚರಿಕೆ ಸಂದೇಶಗಳನ್ನು ಕಳುಹಿಸಿದೆ ಎಂಬುದನ್ನು ಇಲ್ಲಿ ಗಮನಿಸಬೇಕು. 2021ರಲ್ಲಿ ಪೆಗಾಸೆಸ್​ ಸ್ಪೈವೇರ್ ಹಗರಣದ ನಂತರ ಆ್ಯಪಲ್ ಕಂಪನಿಯು ತನ್ನ ಫೀಚರ್​ನಲ್ಲಿ ಲಾಕ್​ಡೌನ್​ ಮೋಡ್​ ಪರಿಚಯಿಸಿತ್ತು. ಈ ಫೀಚರ್​ ಹ್ಯಾಕರ್​ಗಳಿಗೆ ಫೋಟೋಗಳನ್ನು ಹೊರತುಪಡಿಸಿ ಬೇರೆ ಯಾವುದೇ ಅಟ್ಯಾಚ್​ಮೆಂಟ್​ಗಳನ್ನು ತೆಗೆಯದಂತೆ ನೋಡಿಕೊಳ್ಳುತ್ತದೆ ಎಂದು ಹೇಳಲಾಗಿದೆ.

Shwetha M