ಸಂಜು ಸ್ಯಾಮ್ಸನ್‌ಗೆ ಮತ್ತೆ ಅನ್ಯಾಯ – ಮಾತಾಡದೇ ಮನದಲ್ಲಿರುವ ನೋವನ್ನು ಮೆಸೇಜ್ ಮೂಲಕ ಹೊರಹಾಕಿದ ಸಂಜು

ಸಂಜು ಸ್ಯಾಮ್ಸನ್‌ಗೆ ಮತ್ತೆ ಅನ್ಯಾಯ – ಮಾತಾಡದೇ ಮನದಲ್ಲಿರುವ ನೋವನ್ನು ಮೆಸೇಜ್ ಮೂಲಕ ಹೊರಹಾಕಿದ ಸಂಜು

ವಿಶ್ವಕಪ್​ಗೂ ಮುನ್ನ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಸರಣಿಗೆ ಈಗಾಗ್ಲೇ ಟೀಂ ಇಂಡಿಯಾ ಆಟಗಾರರ ಹೆಸರು ಅನೌನ್ಸ್ ಆಗಿದೆ. ಮೊದಲ ಎರಡು ಮ್ಯಾಚ್​ಗಳಿಗೆ ಒಂದು ಟೀಂ, 3ನೇ ಮ್ಯಾಚ್​ಗೆ ಮತ್ತೊಂದು ಟೀಂ ಮಾಡಲಾಗಿದೆ. ಆದರೆ, ಎರಡೂ ತಂಡಗಳಲ್ಲೂ ಸಂಜು ಸ್ಯಾಮ್ಸನ್​ಗೆ ಮಾತ್ರ ಅವಕಾಶ ಸಿಕ್ಕಿಲ್ಲ. ಆದ್ರೆ ತಂಡದ ಅನೌನ್ಸ್​ಮೆಂಟ್ ಆಗುತ್ತಲೇ, ತಮ್ಮ ಹೆಸರು ಲಿಸ್ಟ್​ನಲ್ಲಿ ಇಲ್ಲ ಅನ್ನೋದು ಖಚಿತವಾಗುತ್ತಲೇ ಸಂಜು ಸೋಷಿಯಲ್ ಮೀಡಿಯಾದಲ್ಲಿ ಮಾರ್ಮಿಕವಾದ ಪೋಸ್ಟ್ ಒಂದನ್ನ ಮಾಡಿದ್ದಾರೆ.

ಇದನ್ನೂ ಓದಿ: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಟೀಮ್ ಇಂಡಿಯಾ ಪ್ರಕಟ – ಮೊದಲೆರೆಡು ಪಂದ್ಯಕ್ಕೆ ಕೆ.ಎಲ್ ರಾಹುಲ್ ನಾಯಕ

ಸಂಜು ಒಂದು ಸ್ಮೈಲಿ ಇಮೋಜಿಯನ್ನ ಪೋಸ್ಟ್​ ಮಾಡಿದ್ದು, ಅದರಲ್ಲಿಯೇ ತಮ್ಮ ಮನಸ್ಸಲ್ಲಿರುವ ಮೆಸೇಜ್​​ನ್ನ ಪಾಸ್ ಮಾಡಿದ್ದಾರೆ. ನೀವು ತಂಡಕ್ಕೆ ಸೆಲೆಕ್ಟ್​ ಮಾಡಿದರೂ , ಮಾಡದಿದ್ದರೂ ನಾನು ಅದನ್ನು ಒಂದೇ ರೀತಿ ಸ್ವೀಕರಿಸುತ್ತೇನೆ. ಯಾರ ಮೇಲೂ ಸಿಟ್ಟಿಲ್ಲ.. ನಿಮ್ಮ ನಿರ್ಧಾರಕ್ಕೆ ಬೇಸರವೂ ಇಲ್ಲ.. ಹೆಚ್ಚೇನೂ ಹೇಳೋಕೆ ಹೋಗಲ್ಲ ಎಂಬಂತಿತ್ತು ಸಂಜು ಪೋಸ್ಟ್. ಆದರೆ, ಇಲ್ಲಿ ಸಂಜು ಏನೂ ಹೇಳದಿದ್ದರೂ, ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಮಾತ್ರ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಒಂದು ವೇಳೆ ನಾನು ಸಂಜು ಸ್ಯಾಮ್ಸನ್​ ಸ್ಥಾನದಲ್ಲಿರುತ್ತಿದ್ದರೆ ಆಸ್ಟ್ರೇಲಿಯಾ ವಿರುದ್ಧದ ಸೀರಿಸ್​ಗೂ ಡ್ರಾಪ್​ ಮಾಡಿದ್ದಕ್ಕೆ ತೀವ್ರ ಬೇಸರಗೊಳ್ಳುತ್ತಿದ್ದೆ ಎಂದಿದ್ದಾರೆ. ಆಶ್ಚರ್ಯ ಏನಂದರೆ, ಸಂಜುರನ್ನ ಕೈಬಿಟ್ಟು ಒಂದೇ ಒಂದು ಒನ್ ಡೇ ಮ್ಯಾಚ್ ಆಡಿರುವ ಮುಂಬೈ ಮೂಲದ ಆಟಗಾರ ತಿಲಕ್ ವರ್ಮಾರನ್ನ ಆಸ್ಟ್ರೇಲಿಯಾ ಸೀರಿಸ್​ಗೆ ಸೆಲೆಕ್ಟ್ ಮಾಡಲಾಗಿದೆ.

 

Sulekha