ಕೈಲಾಸ ಪರ್ವತ ದರ್ಶನ ಸೆಪ್ಟೆಂಬರ್‌ನಿಂದ ಆರಂಭ – ಭಾರತದಿಂದಲೇ ಈ ಬಾರಿ ಅವಕಾಶ!

ಕೈಲಾಸ ಪರ್ವತ ದರ್ಶನ ಸೆಪ್ಟೆಂಬರ್‌ನಿಂದ ಆರಂಭ – ಭಾರತದಿಂದಲೇ ಈ ಬಾರಿ ಅವಕಾಶ!

ಪಿಥೋರಗಢ್: ಕೋವಿಡ್‌ ಸಾಂಕ್ರಾಮಿಕ ಕಾರಣಗಳಿಂದ ಮುಂದೂಡಲ್ಪಟ್ಟಿದ್ದ ಕೈಲಾಶ್ – ಮಾನಸಸರೋವರ ಯಾತ್ರೆ ಮತ್ತೆ ಸೆಪ್ಟೆಂಬರ್‌ನಿಂದ ಪುನರಾರಂಭವಾಗುತ್ತಿದೆ. ಅದೂ ಕೂಡ ಭಾರತದಿಂದಲೇ ಈ ಬಾರಿ ಅವಕಾಶ ನೀಡಲಾಗುತ್ತಿದೆ.

ಶಿವನ ವಾಸಸ್ಥಾನವೆಂದು ನಂಬಲಾದ ಕೈಲಾಸ ಪರ್ವತಕ್ಕೆ ಭೇಟಿ ನೀಡಲು ಸೆಪ್ಟೆಂಬರ್‌ನಿಂದ ಅವಕಾಶ ನೀಡಲಾಗುತ್ತಿದೆ. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಮುಂದೂಡಲ್ಪಟ್ಟಿದ್ದ ಕೈಲಾಶ್ – ಮಾನಸಸರೋವರ ಯಾತ್ರೆ ಮತ್ತೆ ಪುನರಾರಂಭಗೊಂಡಿಲ್ಲ. ಕೈಲಾಶ್ – ಮಾನಸಸರೋವರ ಯಾತ್ರೆ ಲಿಪುಲೇಖ್ ಪಾಸ್ ಮೂಲಕ ಹಾದು ಹೋಗುವುದರಿಂದಾಗಿ ಇದಕ್ಕೆ ಚೀನಾದ ಅನುಮತಿ ಬೇಕಾಗಿತ್ತು ಹಲವು ಅಡಚಣೆ ಎದುರಾಗುತ್ತಿತ್ತು. ಕೈಲಾಸ ಪರ್ವತದ ದರ್ಶನವನ್ನು ಭಕ್ತರಿಗೆ ಒದಗಿಸುವ ಸಲುವಾಗಿ ಭಾರತ ಸರ್ಕಾರ ಪರ್ಯಾಯ ಮಾರ್ಗವನ್ನು ರೂಪಿಸಲು ಮುಂದಾಗಿದೆ.

ಇದನ್ನೂ ಓದಿ:ಕಾಶಿಯಾತ್ರೆ ಯೋಜನೆ ಮುಂದುವರೆಸಿದ ಕಾಂಗ್ರೆಸ್‌ ಸರ್ಕಾರ –  ಎಲ್ಲಿಂದ ಹೊರಡಲಿದೆ ನಾಲ್ಕನೇ ಟ್ರಿಪ್‌? 

ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (ಬಿಆರ್‍ಒ) ಪಿಥೋರಗಢ್ ಜಿಲ್ಲೆಯ ನಾಭಿಧಾಂಗ್‍ನಲ್ಲಿರುವ ಕೆಎಂವಿಎನ್ ಹಟ್ಸ್‍ನಿಂದ ಭಾರತ-ಚೀನಾ ಗಡಿಯಲ್ಲಿರುವ ಲಿಪುಲೇಖ್ ಪಾಸ್‍ವರೆಗಿನ ರಸ್ತೆಯನ್ನು ನಿರ್ಮಿಸುವ ಕೆಲಸವನ್ನು ಪ್ರಾರಂಭಿಸಿದೆ. ಇದು ಸೆಪ್ಟೆಂಬರ್‍ನಲ್ಲಿ ಪೂರ್ಣಗೊಳ್ಳಲಿದೆ. ರಸ್ತೆ ಕಾಮಗಾರಿ ಪೂರ್ಣಗೊಂಡ ಬೆನ್ನಲ್ಲೆ ಕೈಲಾಸ ಯಾತ್ರೆ ಪ್ರಾರಂಭಿಸಲಾಗುವುದು ಎಂದು ಬಿಆರ್ ಒ ಡೈಮಂಡ್ ಪ್ರಾಜೆಕ್ಟ್ ನ ಮುಖ್ಯ ಎಂಜಿನಿಯರ್ ವಿಮಲ್ ಗೋಸ್ವಾಮಿ ತಿಳಿಸಿದ್ದಾರೆ.

ನಾಭಿಧಾಂಗ್ ನ ಕೆಎಂವಿಎನ್ ಹಟ್ಸ್ ನಿಂದ ಲಿಪುಲೇಖ್ ಪಾಸ್ ವರೆಗೆ ಸುಮಾರು ಆರೂವರೆ ಕಿಲೋಮೀಟರ್ ಉದ್ದದ ರಸ್ತೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದೇವೆ. ಇದು ಪೂರ್ಣಗೊಂಡ ನಂತರ, ರಸ್ತೆಯ ಉದ್ದಕ್ಕೂ ಕೈಲಾಶ್ ವ್ಯೂ ಪಾಯಿಂಟ್‍ಸಿದ್ಧವಾಗಲಿದೆ. ಹಿರಾಕ್ ಯೋಜನೆಗೆ ಭಾರತ ಸರ್ಕಾರವು ಕೈಲಾಶ್ ವ್ಯೂ ಪಾಯಿಂಟ್ ಅನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ನೀಡಿದೆ. ಪರ್ವತದ ಪ್ರದೇಶದಲ್ಲಿ ರಸ್ತೆ ನಿರ್ಮಿಸುವ ಸಾಹಸಮಯ ಕಾಮಗಾರಿ ನಡೆದಿದ್ದು, ಹವಾಮಾನ ಅನುಕೂಲಕರವಾಗಿದ್ದರೆ ಸೆಪ್ಟೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಗೋಸ್ವಾಮಿ ಹೇಳಿದ್ದಾರೆ.

suddiyaana