ವರದಕ್ಷಿಣೆ ವಿರುದ್ಧ ಆಂಧ್ರದಲ್ಲಿ ಗ್ರಾಮಸ್ಥರ ಹೋರಾಟ – ಮದುವೆಯಾಗದ ಹುಡುಗರ ಬ್ಯಾನರ್‌ ವೈರಲ್

ವರದಕ್ಷಿಣೆ ವಿರುದ್ಧ ಆಂಧ್ರದಲ್ಲಿ ಗ್ರಾಮಸ್ಥರ ಹೋರಾಟ – ಮದುವೆಯಾಗದ ಹುಡುಗರ ಬ್ಯಾನರ್‌ ವೈರಲ್

ನಮ್ಮ ದೇಶದ ದೊಡ್ಡ ಸಮಸ್ಯೆಯಂದ್ರೆ ಮದುವೆ ಆಗುವುದ್ದಕ್ಕೆ ಹುಡುಗಿಯರು ಸಿಗಲ್ಲ ಅನ್ನೋದು. ಹಿಂದೆಲ್ಲಾ ಹೆಣ್ಣಿಗೆ ಹುಡುಗರು ಸಿಗಲ್ಲ ಅನ್ನೋ ಅಂತಿದ್ದರು, ಆದ್ರೆ ಈಗ ಹುಡುಗಿಯರು ಸಿಗಲ್ಲ .ರೈತರ ಪರಿಸ್ಥಿತಿಯಂತೂ ಕೇಳುವುದೇ ಬೇಡ. ಆದರೂ ಕೂಡ ವರದಕ್ಷಿಣೆ ಪಿಡುಗು ಮಾತ್ರ ಇನ್ನೂ ತೊಲಗಿಲ್ಲ. ಇದರ ವಿರುದ್ಧ ಹೋರಾಡಲು ಇದೀಗ ಆಂಧ್ರ ಪ್ರದೇಶದ   ಚಿತ್ತೂರು ಜಿಲ್ಲೆಯ ಇರಾಳ ಮಂಡಲದ ಕಲಿಕಿರಿಪಲ್ಲಿ ಗ್ರಾಮಸ್ಥರು ವಿಭಿನ್ನ ಮಾರ್ಗವನ್ನು ಆರಿಸಿಕೊಂಡಿದ್ದಾರೆ.

ಆಂಧ್ರ ಪ್ರದೇಶದಲ್ಲಿ ಚಾಲ್ತಿಯಲ್ಲಿರುವ ವರದಕ್ಷಿಣೆ ಪಿಡುಗಿನ ವಿರುದ್ಧ ಮಾತನಾಡಲು ಗ್ರಾಮಸ್ಥರು ವ್ಯವಸ್ಥೆಯನ್ನು ವಿರೋಧಿಸುವ ಸಂದೇಶವನ್ನು ಸಾರಲು ಒಂದು ಪ್ರಬಲ ಮಾರ್ಗವನ್ನು ಆರಿಸಿಕೊಂಡಿದ್ದಾರೆ. ಸಂಕ್ರಾಂತಿ ಹಬ್ಬದ ಸಮಯದಲ್ಲಿ ಈ ವಿಶೇಷ ಸಂದೇಶ ಸಾರಿದ್ದಾರೆ. ಅರ್ಹ ಯುವಕರು ಉತ್ತಮ ಆದಾಯ ಗಳಿಸುತ್ತಿದ್ದರೂ, ವರದಕ್ಷಿಣೆ ಬೇಡಿಕೆಯು ಅವರ ವಿವಾಹಗಳನ್ನು ಹೇಗೆ ವಿಳಂಬ ಮಾಡುತ್ತಿದೆ ಎಂಬುದನ್ನು ಎತ್ತಿ ತೋರಿಸಲು ಗ್ರಾಮಸ್ಥರು ಗ್ರಾಮದ ಅವಿವಾಹಿತ ಪುರುಷರ ಫೋಟೋಗಳ  ಬ್ಯಾನರ್‌ ಹಾಕಿದ್ದಾರೆ.

ಇದನ್ನೂ ಓದಿ: IPLಗೆ AI ಜೆಮಿನಿ ಪ್ರಾಯೋಜಕತ್ವ – BCCIಗೆ ಹರಿದು ಬಂತು ಹಣದ ಹೊಳೆ

ಹತ್ತಿರದ ಹಳ್ಳಿಗಳಿಂದ ಹೆಚ್ಚಿನ ಸಂಖ್ಯೆಯ ಜನರು ಭಾಗವಹಿಸುವ ಸಾಂಪ್ರದಾಯಿಕ ಕಾರ್ಯಕ್ರಮವಾದ ಜಾನುವಾರು ಉತ್ಸವದಲ್ಲಿ ಬ್ಯಾನರ್‌ಗಳನ್ನು ಪ್ರದರ್ಶಿಸಲಾಗಿದೆ. ಉತ್ಸವದಲ್ಲಿ ಹಾಜರಿದ್ದವರು ಸಂದೇಶವನ್ನು ಓದಿ, ಚರ್ಚಿಸಲು ಪ್ರಾರಂಭಿಸಿದ್ದಾರೆ. ಬ್ಯಾನರ್‌ಗಳಲ್ಲಿ ತೋರಿಸಿರುವ ಅವಿವಾಹಿತ ಪುರುಷರಲ್ಲಿ ಹೆಚ್ಚಿನವರು ವಿದ್ಯಾವಂತರು, ಉದ್ಯೋಗಗಳನ್ನು ಹೊಂದಿದ್ದಾರೆ ಮತ್ತು ಯೋಗ್ಯ ಕುಟುಂಬಗಳಿಂದ ಬಂದವರು ಎಂಬುದನ್ನು ಎತ್ತಿ ತೋರಿಸಲಾಗಿದೆ. ಆದರೂ ಅವರು ಅವಿವಾಹಿತರಾಗಿದ್ದಾರೆ ಎಂದು ಬ್ಯಾನರ್‌ನಲ್ಲಿ ಬರೆಯಲಾಗಿದೆ.

Kishor KV