ಟಿಆರ್​ಎಸ್ ಶಾಸಕರ ಖರೀದಿ ಯತ್ನ ಕೇಸ್: ಬಿ.ಎಲ್​.ಸಂತೋಷ್​ಗೆ ಸಂಕಷ್ಟ!
₹100 ಕೋಟಿ ಆಫರ್? ಬಿಜೆಪಿ ನಾಯಕನ ವಿರುದ್ಧ ಕೇಸ್!

ಟಿಆರ್​ಎಸ್ ಶಾಸಕರ ಖರೀದಿ ಯತ್ನ ಕೇಸ್: ಬಿ.ಎಲ್​.ಸಂತೋಷ್​ಗೆ ಸಂಕಷ್ಟ!₹100 ಕೋಟಿ ಆಫರ್? ಬಿಜೆಪಿ ನಾಯಕನ ವಿರುದ್ಧ ಕೇಸ್!

ಹೈದರಾಬಾದ್: ತೆಲಂಗಾಣದ ಟಿಆರ್​ಎಸ್ ಪಕ್ಷದ ಶಾಸಕರ ಕುದುರೆ ವ್ಯಾಪಾರಕ್ಕೆ ಷಡ್ಯಂತ್ರ ಮಾಡಿರುವ ಆರೋಪಕ್ಕೆ ಸಂಬಂಧಿಸಿ  ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧ ಕೇಸ್ ದಾಖಲಾಗಿದೆ. ತೆಲಂಗಾಣ ಹೈಕೋರ್ಟ್ ಆದೇಶದಂತೆ ಎಸ್​ಐಟಿ ಪ್ರಕರಣದ ತನಿಖೆ ನಡೆಸುತ್ತಿದೆ. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ತೆಲಂಗಾಣ ಎಸ್​ಐಟಿ ಬಿ.ಎಲ್​. ಸಂತೋಷ್​ಗೆ ಎರಡನೇ ಬಾರಿಗೆ ನೋಟಿಸ್ ಕೂಡ ನೀಡಿದೆ. ನವೆಂಬರ್ 26 ಅಥವಾ ನವೆಂಬರ್ 28ಕ್ಕೆ ವಿಚಾರಣೆಗೆ ಹಾಜರಾಗುವಂತೆ ಎಸ್​ಐಟಿ ಸೂಚಿಸಿದೆ. ಬಿ.ಎಲ್. ಸಂತೋಷ್ ಮಾತ್ರವಲ್ಲ ಕೇರಳ ಮೂಲಕ ಜಗ್ಗು ಸ್ವಾಮಿ, ತುಷಾರ್ ವೆಲ್ಲಪಲ್ಲಿ ಮತ್ತು ಬಿ.ಶ್ರೀನಿವಾಸ್ ಎಂಬುವವರ ವಿರುದ್ಧವೂ ಪ್ರಕರಣ ದಾಖಲಾಗಿದೆ.

 

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಟಿಆರ್​ಎಸ್ ಪಕ್ಷದಿಂದ ಹೊರಬನ್ನಿ. ಬಳಿಕ ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವದಾದರೆ 100 ಕೋಟಿ ರೂಪಾಯಿ ನೀಡುವುದಾಗಿ ನನಗೆ ಆಮಿಷ ಒಡ್ಡಿದ್ದರು ಅಂತಾ ತೆಲಂಗಾಣ ಶಾಸಕ ರೋಹಿತ್ ರೆಡ್ಡಿ ಎಂಬುವವರು ಆರೋಪಿಸಿದ್ದರು.  ಹೀಗಾಗಿ ತೆಲಂಗಾಣ ಸರ್ಕಾರ ಏಳು ಮಂದಿಯ ಎಸ್​ಐಟಿ ವಿಶೇಷ ತಂಡವನ್ನು ರಚಿಸಿ ಶಾಸಕರ ಕುದುರೆ ವ್ಯಾಪಾರ ಯತ್ನಕ್ಕೆ ಸಂಬಂಧಿಸಿ ತನಿಖೆಗೆ ಸೂಚನೆ ನೀಡಿತ್ತು. ತನಿಖೆ ವೇಳೆ ಬಿ.ಎಲ್. ಸಂತೋಷ್ ಹೆಸರು ಕೂಡ ತಳುಕುಹಾಕಿಕೊಂಡಿದ್ದು, ಇದೀಗ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್​ಗೆ ಸಂಕಷ್ಟ ಎದುರಾಗಿದೆ.

suddiyaana