ಆಪರೇಷನ್‌ ವೇಳೆ ವೈದ್ಯರ ಎಡವಟ್ಟು – 18 ರೋಗಿಗಳ ದೃಷ್ಟಿಯೇ ಹೋಯ್ತು!

ಆಪರೇಷನ್‌ ವೇಳೆ ವೈದ್ಯರ ಎಡವಟ್ಟು – 18 ರೋಗಿಗಳ ದೃಷ್ಟಿಯೇ ಹೋಯ್ತು!

ಜೈಪುರ್: ಆಪರೇಷನ್ ಮಾಡುವಾಗ ವೈದ್ಯರ ಮೈಯಲ್ಲಾ ಕಣ್ಣಾಗಿರಬೇಕು. ಏಕೆಂದರೆ ಕೊಂಚ ಹೆಚ್ಚು-ಕಡಿಮೆಯಾದರೂ ರೋಗಿಯ ಜೀವಕ್ಕೆ ಕುತ್ತು ಬರುವ ಸಾಧ್ಯತೆ ಇರುತ್ತದೆ. ಎಷ್ಟೋ ಮಂದಿ ವೈದ್ಯರನ್ನು ಪ್ರಾಣ ಉಳಿಸುವ ದೇವರೆಂದು ಕರೆಯುತ್ತಾರೆ. ಆದರೆ ಅಂತಹ ವೈದ್ಯರೇ ಒಮ್ಮೆ ಮೈ ಮೇಲೆ ಪ್ರಜ್ಞೆಯಿಲ್ಲದಂತೆ ವರ್ತಿಸಿದರೆ, ರೋಗಿಗಳು ಜೀವವನ್ನೆ ಕಳೆದುಕೊಳ್ಳಬೇಕಾಗಿರುತ್ತದೆ. ಇಲ್ಲ ಜೀವನ ಪೂರ್ತಿ ನರಳಾಡ ಬೇಕಾಗುತ್ತದೆ. ಇಲ್ಲೊಂದು ಆಸ್ಪತ್ರೆಯಲ್ಲಿ ವೈದ್ಯರ ಬೇಜಾವಬ್ದಾರಿಯಿಂದ ಸುಮಾರು 18 ಮಂದಿ ದೃಷ್ಟಿ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: ಅಮರನಾಥ ಯಾತ್ರೆ ವೇಳೆ ಐವರು ಹೃದಯಾಘಾತದಿಂದ ಸಾವು – ಮೃತಪಟ್ಟವರ ಸಂಖ್ಯೆ 19ಕ್ಕೆ ಏರಿಕೆ

ರಾಜಸ್ಥಾನದ ಅತಿದೊಡ್ಡ ಸರ್ಕಾರಿ ಆಸ್ಪತ್ರೆ ಸವಾಯಿ ಮಾನ್ ಸಿಂಗ್​ನಲ್ಲಿ ಈ ದುರ್ಘಟನೆ ನಡೆದಿದೆ. ಈ ಆಸ್ಪತ್ರೆಯಲ್ಲಿ ಸುಮಾರು 18 ಜನರ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಆದರೆ ಆಪರೇಷನ್‌ ಬಳಿಕ 18 ಮಂದಿಯೂ ದೃಷ್ಟಿ ಕಳೆದುಕೊಂಡಿದ್ದಾರೆ  ಎಂಬ ಆರೋಪ ಕೇಳಿಬಂದಿದೆ.

ಶಾಸ್ತ್ರಚಿಕಿತ್ಸೆಗೆ ಒಳಗಾದ 18 ಜನರಲ್ಲಿ ಹೆಚ್ಚಿನವರಿಗೆ ರಾಜಸ್ಥಾನ ಸರ್ಕಾರದ ಚಿರಂಜೀವಿ ಆರೋಗ್ಯ ಯೋಜನೆಯಡಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಜೂನ್ 23ರಂದು ಆಪರೇಷನ್ ಮಾಡಲಾಗಿದ್ದು, ಜುಲೈ 5ರ ವರೆಗೆ ಎಲ್ಲವೂ ಸರಿಯಾಗಿ ಕಾಣಿಸುತ್ತಿತ್ತು. ಆದರೆ ಮರುದಿನ ಅಂದರೆ ಜುಲೈ 6, 7ರಿಂದ ಯಾವುದೇ ವಸ್ತುಗಳನ್ನು ಸರಿಯಾಗಿ ಗುರುತಿಸಲಾಗುತ್ತಿರಲಿಲ್ಲ. ಈ ಬಗ್ಗೆ ಅಲ್ಲಿನ ವೈದ್ಯರಿಗೆ ಹೇಳಿದಾಗ ಮತ್ತೆ ಆಪರೇಷನ್ ಮಾಡಿದ್ದಾರೆ. ಅದರೂ ದೃಷ್ಟಿ ಬರಲಿಲ್ಲ ಎಂದು ರೋಗಿಗಳು ಆರೋಪಿಸಿದ್ದಾರೆ.

ಇನ್ನು ಶಸ್ತ್ರಚಿಕಿತ್ಸೆಗೆ ಒಳಗಾದವರು ದೃಷ್ಟಿ ಕಳೆದುಕೊಳ್ಳಲು ಕಾರಣವೇನೆಂದು ಆ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ರೋಗಿಗಳು ದೃಷ್ಟಿ ಕಳೆದುಕೊಳ್ಳಲು ಸೋಂಕು ಕಾರಣ. ಸೋಂಕನ್ನು ಗುಣಪಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದ್ದಾರೆ.

ಆಪರೇಷನ್ ಮಾಡಿದ ನಂತರ ಕಣ್ಣು ನೋವು ಬಂದಿದೆ. ಈ ಬಗ್ಗೆ ರೋಗಿಗಳು ವೈದ್ಯರಿಗೆ ದೂರು ನೀಡಿದಾಗ, ವೈದ್ಯರು ಮತ್ತೆ ಆಸ್ಪತ್ರೆಗೆ ದಾಖಲಾಗುವಂತೆ ಕೇಳಿಕೊಂಡಿದ್ದಾರೆ. ಈ ರೋಗಿಗಳು ಮತ್ತೆ ಎರಡು ಬಾರಿ ಶಸ್ತ್ರಚಿಕಿತ್ಸೆಗೆ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದ್ದಾರೆ. ಆದರೆ ಆಸ್ಪತ್ರೆಯ ನೇತ್ರಶಾಸ್ತ್ರ ವಿಭಾಗದ ಅಧಿಕಾರಿಗಳು ನಮ್ಮ ಕಡೆಯಿಂದ ಯಾವುದೇ ಲೋಪವಾಗಿಲ್ಲ ಎಂದು ಹೇಳಿಕೊಂಡಿದ್ದಾರೆ ಮತ್ತು ರೋಗಿಗಳಿಂದ ದೂರುಗಳನ್ನು ಸ್ವೀಕರಿಸಿದ ನಂತರ ತನಿಖೆ ನಡೆಸಲಾಗುತ್ತಿಲ್ಲ ಎಂದು ಹೇಳಿದ್ದಾರೆ.

suddiyaana