ಮಂಜುಮ್ಮೆಲ್ ಬಾಯ್ಸ್’ಗೆ  ಸಂಕಷ್ಟ! – ಸಿನಿಮಾದಿಂದ ಕಣ್ಮಣಿ ಹಾಡು ತೆಗೀತಾರಾ?
ಸಿನಿಮಾ ಟೀಂ ಎಡವಿದ್ದು ಇಲ್ಲೇನಾ?

ಮಂಜುಮ್ಮೆಲ್ ಬಾಯ್ಸ್’ಗೆ  ಸಂಕಷ್ಟ! – ಸಿನಿಮಾದಿಂದ ಕಣ್ಮಣಿ ಹಾಡು ತೆಗೀತಾರಾ?ಸಿನಿಮಾ ಟೀಂ ಎಡವಿದ್ದು ಇಲ್ಲೇನಾ?

ಸೋಶಿಯಲ್ ಮೀಡಿಯಾ ಓಪನ್ ಮಾಡಿದರೆ ಸಾಕು.. ಬರೀ ರೀಲ್ಸ್ ಗಳದ್ದೇ ಹಾವಳಿ.. ಯಾವಾಗ ಯಾವ ಹಾಡು ಟ್ರೆಂಡ್ ಆಗುತ್ತೆ? ಯಾವುದು ವೈರಲ್ ಆಗುತ್ತೆ ಅಂತಾ ಹೇಳೋದಿಕ್ಕೆ ಸಾಧ್ಯ ಇಲ್ಲ.. ಇತ್ತೀಚೆಗಷ್ಟೇ ಕರಿಮಣಿ ಮಾಲೀಕ ನೀನಲ್ಲ ಸಾಂಗ್ ಸಿಕ್ಕಾಪಟ್ಟೆ ಟ್ರೆಂಡ್ ಆಗಿತ್ತು. ಸ್ಕೂಲ್ ಗೆ ಹೋಗೋ ಮಕ್ಕಳಿಂದ ಹಿಡಿದು ಕಟ್ಟೆ ಮೇಲೆ ಕೂರುವ ವೃದ್ಧರವರೆಗೂ ಎಲ್ರೂ ಇದೇ ಹಾಡಿಗೆ ಮೈ ಬಳುಕಿಸುತ್ತಿದ್ರು… ಅಷ್ಟೇ ಯಾಕೆ ಸೆಲೆಬ್ರಿಟಿಗಳೂ ಕೂಡ ಉಪ್ಪಿ ಹಾಡಿಗೆ ಫಿದಾ ಆಗಿದ್ರು.. ಈಗ ಕರಿಮಣಿ ಮಾಲೀಕ ಹೋಯ್ತು.. ಈಗೇನಿದ್ರೂ ಕಣ್ಮಣಿ ಹಾಡಿನ ಸರದಿ. ಜನ ಈ ಹಾಡಿನ ಗುಂಗಲ್ಲೇ ಮುಳುಗೇಳ್ತಿದ್ದಾರೆ.. ಈ ಕಣ್ಮಣಿ ಅನ್ಬೋಡ್‌  ಕಾದಲನ್‌  ಹಾಡು ಇಷ್ಟೊಂದು ಟ್ರೆಂಡ್ ಆಗಲು ಕಾರಣ ಮಲಯಾಳಂನ ‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾ. ಈ ಸಾಂಗ್ ನಿಂದಲೇ  ಆ ಸಿನಿಮಾ ಹಿಟ್ ಆಗಿತ್ತು.. ಆದ್ರೀಗ ಈ ಸಿನಿಮಾ ತಂಡಕ್ಕೆ ಸಂಕಷ್ಟ ಶುರುವಾಗಿದೆ.. ಇನ್ಮುಂದೆ ಕಣ್ಮನಿ ಸಾಂಗ್ ಈ ಚಿತ್ರದಲ್ಲಿ ಇರಲ್ವಾ ಅನ್ನುವ ಪ್ರಶ್ನೆ ಮೂಡಿದೆ..

ಇದನ್ನೂ ಓದಿ: ಮತಗಟ್ಟೆಯೊಳಗೆ ಬಿಜೆಪಿಯಿಂದ ಕರಪತ್ರ ಹಂಚಿಕೆ! – ಗಂಭೀರ ಆರೋಪ ಮಾಡಿದ ಆಪ್‌ ನಾಯಕ

ಫೇಸ್ ಬುಕ್.. ಇನ್ಸ್ಟಾಗ್ರಾಂ.. ವಾಟ್ಸಾಪ್ ಯಾವ್ದೂ ಓಪನ್ ಮಾಡಿದ್ರೂ ‘ಕಣ್ಮಣಿ ಅನ್ಬೋಡ್‌  ಕಾದಲನ್‌ ಈ ಸಾಂಗೇ ಬರುತ್ತೆ.. ಸ್ಕೂಲ್ ಗೆ ಹೋಗೋ ಮಕ್ಕಳಿಂದ ಹಿಡಿದು ವಯಸ್ಸಾದವರ ಬಾಯಲ್ಲೂ ಇದೇ ಸಾಂಗ್ ಗುನುಗುತ್ತಿದೆ… ಕಣ್ಮಣಿ ಸಾಂಗ್ ಈಗ  ಸಖತ್ ಟ್ರೆಂಡ್ ನಲ್ಲಿದೆ.. ಸೋಶಿಯಲ್ ಮೀಡಿಯಾದಲ್ಲಿ  ಓಪನ್ ಮಾಡಿದ್ರೆ.. ಇದೇ ಹಾಡು ಬರ್ತಿದೆ.. ಇದಕ್ಕೆ ಜನ ರೀಲ್ಸ್ ಮಾಡ್ತಾ ಇದ್ದಾರೆ. ಈ ಸಾಂಗ್ ಇಷ್ಟೊಂದು ಟ್ರೆಂಡ್ ನಲ್ಲಿ ಇರೋದಿಕ್ಕೆ ಕಾರಣ ಇತ್ತಿಚೆಗೆ ರಿಲೀಸ್  ಮಲಯಾಳಂನ ‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾ.

ಕಣ್ಮಣಿ ಸಾಂಗ್  1991 ರಲ್ಲಿ ಬಿಡುಗಡೆಯಾದ ಗುಣ ಸಿನಿಮಾದ್ದು.. ಕಮಲ್ ಹಾಸನ್, ರೇಖಾ ನಟಿಸಿದ್ದ ಆ ಚಿತ್ರ 1991 ರ ನವೆಂಬರ್ 5 ರಂದು ರಿಲೀಸ್ ಆಗಿತ್ತು.. ಆಗ ಈ ಚಿತ್ರಕ್ಕೆ ಇಳಯರಾಜ ಅವರು ಸಂಗೀತ ಸಂಯೋಜನೆ ಮಾಡಿದ್ದರು. ಆ ಸಿನಿಮಾದಲ್ಲಿ ಅದ್ರ ಹಾಡುಗಳೇ ಭಾರಿ ಗಮನ ಸೆಳೆದಿದ್ದವು.  ‘ಕಣ್ಮಣಿ ಅನ್ಬೋಡ್‌  ಕಾದಲನ್‌..’ ಆ ಕಾಲದಲ್ಲೂ ಸಖತ್ ಸೌಂಡ್ ಮಾಡಿತ್ತು.. ಎಲ್ಲರ ಬಾಯಲ್ಲೂ ಇದೇ ಹಾಡು ಗುನುಗುತ್ತಿತ್ತು..

ಅಂದ್ಹಾಗೆ ಈ ‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾಗೂ ‘ಗುಣ’ ಚಿತ್ರಕ್ಕೂ ಒಂದು ಲಿಂಕ್ ಇದೆ.  ತಮಿಳು ಭಾಷೆಯ ಈ ಸಿನಿಮಾ ಶೂಟ್ ಆಗಿದ್ದು ಕೊಡೈಕೆನಲ್ ನ ‘ಗುಣ’ ಗುಹೆಯಲ್ಲಿ. ಈ ಚಿತ್ರ ಶೂಟ್ ಆದ ಕಾರಣದಿಂದಲೇ ಇದಕ್ಕೆ ಗುಣ ಕೇವ್ ಎನ್ನುವ ಹೆಸರು ಬಂತು. ಇದಕ್ಕಿಂತ ಮೊದ್ಲು ಈ ಗುಹೆಯನ್ನು  ಡೆವಿಲ್ಸ್ ಕಿಚನ್ ಅಂತಾ ಕರಿತಾ ಇದ್ರೂ.. ಗುಣ ಸಿನಿಮಾದ ಬಳಿಕ ಗುಣ ಕೇವ್ಸ್ ಅಂತಾ ಹೆಸ್ರು ಬಂತು.. ಈ ಚಿತ್ರದ ‘ಕಣ್ಮಣಿ ಅನ್ಬೋಡ್‌  ಕಾದಲನ್‌..’ ಹಾಡು ಸಾಕಷ್ಟು ಗಮನ ಸೆಳೆದಿದ್ದು ಮಂಜುಮ್ಮೇಲ್ ಬಾಯ್ಸ್ ಸಿನಿಮಾದಿಂದ..

‘ಗುಣ’ ಸಿನಿಮಾದ ಶೂಟ್ ನಡೆದ ಜಾಗಕ್ಕೆ ಕೇರಳದಿಂದ ಒಂದಷ್ಟು ಹುಡುಗರು ಹೋಗುತ್ತಾರೆ. ಅಲ್ಲಿ ಇರುವ ಕಂದಕದಂತಹ ಜಾಗದಲ್ಲಿ ಸುಭಾಷ್ ಎಂಬ ಯುವಕ ಬೀಳುತ್ತಾನೆ. ಆತನನ್ನು ಹೊರ ತೆಗೆಯುವ ಸಾಹಸದ ಕಥೆಯೇ ‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾ. ನೈಜ ಘಟನೆ ಆಧರಿಸಿ ಈ ಸಿನಿಮಾ ಮಾಡಲಾಗಿದೆ.

ಈ ಗ್ಯಾಂಗ್ ಗೆ ‘ಗುಣ’ ಗುಹೆ ಪ್ರದೇಶಕ್ಕೆ ಹೋಗಬೇಕು ಎಂದು ಅನಿಸುವುದೇ ‘ಗುಣ’ ಚಿತ್ರದಿಂದ. ಈ ಸಿನಿಮಾದಲ್ಲಿ ಬರುವ ‘ಕಣ್ಮಣಿ..’ ಹಾಡು ‘ಮಂಜುಮ್ಮೇಲ್ ಬಾಯ್ಸ್’ ಚಿತ್ರದುದ್ದಕ್ಕೂ ಆಗಾಗ ಬಂದಿದ್ದು, ಸಿನಿಮಾದಲ್ಲಿ ಈ ಹಾಡು ಪ್ರಮುಖ ಪಾತ್ರವಹಿಸಿದೆ. ಈ ಕಾರಣದಿಂದಲೇ ಇನ್ಸ್ಟಾಗ್ರಾಂ ನಲ್ಲಿ ಈ ಹಾಡು ಮತ್ತೆ ಟ್ರೆಂಡ್ ಆಗಿದೆ.. ಈ ಸಿನಿಮಾ ಸೌಂಡ್ ಮಾಡ್ತಿದ್ದಂತೆ ಈಗ ಇದಕ್ಕೆ ಸಂಕಷ್ಟ ಎದುರಾಗಿದೆ.  ಇಳಯರಾಜ ಈಗ ತಮ್ಮ ಅನುಮತಿ ಇಲ್ಲದೇ ಈ ಹಾಡನ್ನು ಬಳಸಿಕೊಂಡಿದ್ದಾರೆಂದು ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ‘ಗುಣ’ ಸಿನಿಮಾಗಾಗಿ ಕಂಪೋಸ್ ಮಾಡಿದ್ದ “ಕಣ್ಮಣಿ..” ಹಾಡನ್ನು ‘ಮಂಜುಮ್ಮೆಲ್ ಬಾಯ್ಸ್’ ಸಿನಿಮಾ ನಿರ್ಮಾಪಕರು ಅನುಮತಿ ಪಡೆಯದೆ ಬಳಸಿಕೊಂಡಿದ್ದಾರೆಂದು ಆರೋಪ ಮಾಡಲಾಗಿದೆ. ನಿರ್ಮಾಪಕರು ತನ್ನೊಂದಿಗೆ ಸರಿಯಾದ ರೀತಿಯಲ್ಲಿ ಅನುಮತಿಯನ್ನು ಪಡೆಯಬೇಕು. ಇಲ್ಲದೇ ಹೋದಲ್ಲಿ ಸಿನಿಮಾದಿಂದ ಆ ಹಾಡನ್ನು ತೆಗೆದು ಹಾಕಬೇಕು ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.

ಈಗ ಇಳಯರಾಜ ಅವರ ಲೀಗಲ್ ಟೀಮ್..  ‘ಮಂಜುಮ್ಮೆಲ್ ಬಾಯ್ಸ್’ನಲ್ಲಿ ತಮ್ಮ ಹಾಡನ್ನು ತೆಗೆದು ಹಾಕಬೇಕು. ಇಲ್ಲವೇ ಸರಿಯಾದ ರೀತಿಯಲ್ಲಿ ಅನುಮತಿ ಪಡೆದು ಹಾಡನ್ನು ಬಳಸಿಕೊಳ್ಳಬೇಕು ಎಂದು ಚಿತ್ರದ ನಿರ್ಮಾಪಕರಿಗೆ ನೋಟಿಸ್ ಅನ್ನು ಕಳುಹಿಸಿದೆ. ‘ಮಂಜುಮ್ಮೆಲ್ ಬಾಯ್ಸ್’ ಸಿನಿಮಾದ ನಿರ್ಮಾಪಕರಾದ ಸೌಬಿನ್ ಶಾಹಿರ್, ಬಾಬು ಶಾಹಿರ್ ಹಾಗೂ ಶಾನ್ ಆಂಟೋನಿಗೆ ನೋಟಿಸ್ ಕಳುಹಿಸಲಾಗಿದೆ.

ಇನ್ನು ‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾವನ್ನ ತುಂಬಾ ಕಡಿಮೆ ಬಜೆಟ್ ನಲ್ಲಿ ನಿರ್ಮಾಣ ಮಾಡಲಾಗಿದೆ.. ಇದ್ರ ಬಜೆಟ್  22 ಕೋಟಿ ರೂಪಾಯಿ ಕೂಡ ಮೀರಿಲ್ಲ ಎನ್ನಲಾಗಿದೆ. ಆದರೆ, ಚಿತ್ರದ ಗಳಿಕೆ ವಿಶ್ವಾದ್ಯಂತ 250 ಕೋಟಿ ರೂಪಾಯಿ ದಾಟಿದೆ.. ಈಗ ಒಟಿಟಿಲೂ ಈ ಸಿನಿಮಾದ ಬೇಡಿಕೆ ಹೆಚ್ಚಿದೆ.. ಇದರಿಂದ ನಿರ್ಮಾಪಕರ ಮೊಗದಲ್ಲಿ ನಗು ಮೂಡಿತ್ತು. ಆದ್ರೆ ಈಗ ಸಂಗೀತ ಮಾಂತ್ರಿಕ ಇಳಯರಾಜ ಲೀಗಲ್ ನೋಟಿಸ್ ನೀಡಿದ್ದು, ಕಾನೂನು ಸಂಕಷ್ಟ ಎದುರಿಸುವಂತೆ ಆಗಿದೆ.  

Shwetha M