ಗಂಡನ ಪಾದಪೂಜೆ ಮಾಡಿ ದೀರ್ಘಾಯಸ್ಸು ಕೋರಿದಳು – ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಅಲ್ಲಿಯೇ ಗಂಡನ ಬಲಿಕೊಟ್ಟಳು..!
ಭೀಮನ ಅಮಾವಾಸ್ಯೆಯ ದಿನ ‘ಗಂಡನ ಬಲಿ’ ಪೂಜೆ..!

ಗಂಡನ ಪಾದಪೂಜೆ ಮಾಡಿ ದೀರ್ಘಾಯಸ್ಸು ಕೋರಿದಳು – ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಅಲ್ಲಿಯೇ ಗಂಡನ ಬಲಿಕೊಟ್ಟಳು..!ಭೀಮನ ಅಮಾವಾಸ್ಯೆಯ ದಿನ ‘ಗಂಡನ ಬಲಿ’ ಪೂಜೆ..!

ಮದುವೆಯಾಗಿ ಬರೀ ಐದು ತಿಂಗಳು. ಸಂಸಾರದ ನೊಗ ಆಗಷ್ಟೇ ಹೊತ್ತಿರುವ ಗಂಡ.. ಪತಿಯ ಪ್ರೀತಿಯಲ್ಲಿ ಕರಗಿಹೋದ ಪತ್ನಿ. ಹೀಗಿರುವಾಗಲೇ ಬಂದಿರುವ ಭೀಮನ ಅಮಾವಾಸ್ಯೆ. ಬೆಳಗ್ಗೆ ಎದ್ದು ಗಂಡನ ಪಾದಪೂಜೆ ಮಾಡಿದ ಹೆಂಡತಿ ದೇವಸ್ಥಾನಕ್ಕೆ ಹೋಗುವ ಎಂದು ಗಂಡನನ್ನು ಓಲೈಸಿದ್ದಳು. ಹೆಂಡತಿಯ ಪ್ರೀತಿಯ ಮಾತಿಗೆ ಕರಗಿಹೋದ ಗಂಡ ದೇವಸ್ಥಾನಕ್ಕೆ ಹೋಗುವ ಎಂದಿದ್ದ. ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿದರೆ ನಿನಗೆ ದೀರ್ಘಾಯಸ್ಸು ಎಂದು ಹೆಂಡತಿ ಹೇಳಿದ ಮಾತು ಕೇಳಿ ಇವಳಿಗೆ ನಾನೆಂದರೆ ಎಷ್ಟು ಇಷ್ಟ ಎಂದು ಗಂಡ ಒಳಗೊಳಗೆ ಖುಷಿಪಟ್ಟಿದ್ದ. ಆದರೆ, ಅವನಿಗೇನು ಗೊತ್ತು ನನ್ನ ಪಾದಪೂಜೆ ಮಾಡಿದ್ದೇ ನನ್ನ ಬಲಿ ನೀಡಲು ಎಂದು. ಅದು ಕೂಡಾ ತನ್ನ ಮುದ್ದಿನ ಮಡದಿಯೇ ತನ್ನನ್ನು ಬಲಿ ಕೊಡಲು ಕರೆದುಕೊಂಡು ಹೋಗುತ್ತಿದ್ದಾಳೆ ಅನ್ನೋದು ಗಂಡನ ಅರಿವಿಗೆ ಬರಲೇ ಇಲ್ಲ.

ಇದನ್ನೂ ಓದಿ: ಭೀಮನ ಅಮಾವಾಸ್ಯೆಗೆ ಗಂಡನಿಗೆ ದೀರ್ಘಾಯಸ್ಸು ಕೋರಲು ದೇವಸ್ಥಾನಕ್ಕೆ ಬಂದ ಪತ್ನಿ – ಹೆಂಡತಿ ಕಣ್ಣೆದುರೇ ಗಂಡನ ಭೀಕರ ಹತ್ಯೆ..!

ಭೀಮನ ಅಮಾವಾಸ್ಯೆ ದಿನವೇ ಪತ್ನಿಯೆದುರೇ ಗಂಡನ ಕೊಲೆ ನಡೆದ ಸುದ್ದಿ ಕೇಳಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ವಡೇರಹಟ್ಟಿ ಗ್ರಾಮ ಬೆಚ್ಚಿಬಿದ್ದಿತ್ತು. ಬನಸಿದ್ದೇಶ್ವರ ದೇವಸ್ಥಾನದಲ್ಲಿ ನಡೆದಿದ್ದ ಭೀಕರ ಕೊಲೆಗೆ ಇಡೀ ಗ್ರಾಮವೇ ಭಯಗೊಂಡಿತ್ತು. ಅಷ್ಟೇ ಅಲ್ಲ, ಮದುವೆಯಾಗಿ ಕೇವಲ 5 ತಿಂಗಳಲ್ಲೇ ದಾರುಣ ಅಂತ್ಯ ಕಂಡ ಶಂಕರ್ ಬಗ್ಗೆ ಇಡೀ ಗ್ರಾಮವೇ ಕಂಬನಿ ಮಿಡಿದಿತ್ತು. ಅಷ್ಟೇ ಅಲ್ಲ, ಗಂಡನ ಪಾದಪೂಜೆ ಮಾಡಿದ ಪತ್ನಿಗೆ ಆ ದೇವರು ಈ ರೀತಿ ಅನ್ಯಾಯ ಮಾಡಬಾರದಿತ್ತು ಎಂದು ಪ್ರತಿಯೊಬ್ಬರು ಪತ್ನಿಯ ನೋವಿಗೆ ಮರುಗಿದ್ದರು. ಆದರೆ, ಕೆಲವೇ ಗಂಟೆಗಳಷ್ಟೇ… ಅಲ್ಲಿನ ದೃಶ್ಯವೇ ಬದಲಾಗಿ ಹೋಗಿತ್ತು.

25 ವರ್ಷದ ಶಂಕರ್ ಜಗಮುತ್ತಿಯ ಹತ್ಯೆಯ ಹಿಂದಿರುವ ರೂವಾರಿಯೇ ಪ್ರಿಯಾಂಕ ಅನ್ನೋದು ಗೊತ್ತಾಗಿ ಹೋಗಿತ್ತು. ದೇಗುಲಕ್ಕೆ ಕರೆದೊಯ್ದು ಪತಿಯನ್ನೇ ಕೊಲ್ಲಿಸಿದ್ದ ಪತ್ನಿ ಪ್ರಿಯಾಂಕಳ ಆಟ ತುಂಬಾ ಸಮಯ ನಡೆಯಲೇ ಇಲ್ಲ. ಸೋಮವಾರ ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಗಂಡನ ಪಾದ ಪೂಜೆ ಮಾಡಿದ ಪ್ರಿಯಾಂಕ, ಬಳಿಕ ಬನಸಿದ್ದೇಶ್ವರ ದೇವಸ್ಥಾನಕ್ಕೆ ಶಂಕರ್‌ನನ್ನು ಕರೆದೊಯ್ದಿದ್ದಳು. ಮನೆ ಬಿಡುವಾಗಲೇ ಪ್ರಿಯಕರ ಶ್ರೀಧರ್‌ಗೆ ಇಂಚಿಂಚೂ ಮಾಹಿತಿ ನೀಡಿದ್ದಳು. ಅದರಂತೆ ಶಂಕರ್‌ನನ್ನು ಹತ್ಯೆ ಮಾಡಲು ಹೊಂಚು ಹಾಕಿಕೊಂಡಿದ್ದ ಪ್ರಿಯಾಂಕಾಳ ಪ್ರಿಯಕರ ಶ್ರೀಧರ್, ಶಂಕರ್ ದೇವಸ್ಥಾನದ ಆವರಣದಲ್ಲಿ ಕಾಲಿಡುತ್ತಿದ್ದಂತೆಯೇ ಹಿಂದಿನಿಂದ ಚಾಕುವಿನಿಂದ ಇರಿದು ಕೊಲೆ ಮಾಡಿ ಪರಾರಿಯಾಗಿದ್ದ. ಕೊಲೆ ಬಳಿಕ ಪ್ರಿಯಾಂಕಾ ಮಾಡಿರುವ ಡ್ರಾಮಾ ನೋಡಿ ಗ್ರಾಮಸ್ಥರು ಕೂಡಾ ಕಣ್ಣೀರು ಹಾಕಿದ್ದರು. ಇಷ್ಟು ಚಿಕ್ಕವಯಸ್ಸಲ್ಲಿ ಹೀಗೆಲ್ಲಾ ಆಗಬಾರದು. ದೇವಸ್ಥಾನಕ್ಕೆ ಬಂದವರಿಗೆ ದೇವರೇ ಅನ್ಯಾಯ ಮಾಡಿದನಲ್ಲಾ ಅಂತಾ ಮರುಗುತ್ತಿದ್ದರು. ಸ್ಥಳಕ್ಕೆ ಆಗಮಿಸಿದ ಮೂಡಲಗಿ ಪೊಲೀಸರಿಗೆ ಮೊದಲು ಡೌಟ್ ಬಂದಿದ್ದೇ ಪತ್ನಿ ಮೇಲೆ. ನಂತರ ತನಿಖೆ ನಡೆಸಿದಾಗ ಪ್ರಿಯಾಂಕಳ ನೌಟಂಕಿ ಆಟ ಬಟಾಬಯಲಾಗಿದೆ. ಗಂಡನ ಬಳಿ ಬೈಕ್ ತನ್ನಿ ಎಂದು ದೂರದಲ್ಲಿಯೇ ನಿಂತಿದ್ದಳು. ಕಕೊಲೆ ಮಾಡಲು ಎಲ್ಲಾ ರೀತಿಯ ಸಹಕಾರ ಕೊಟ್ಟಿದ್ದ ಪ್ರಿಯಾಂಕ ಏನೂ ಗೊತ್ತಿಲ್ಲದವಳಂತೆ ಬೊಬ್ಬೆ ಹಾಕುತ್ತಿದ್ದಳು. ಪ್ರಾಥಮಿಕ ತನಿಖೆಯಲ್ಲಿಯೇ ಪೊಲೀಸರಿಗೆ ಶ್ರೀಧರ್ ಮತ್ತು ಪ್ರಿಯಾಂಕಾ ನಡುವೆ ಸಂಬಂಧ ಇರುವುದು ಬೆಳಕಿಗೆ ಬಂದಿದೆ. ಕಾಲ್ ರೆಕಾರ್ಡ್, ಕಾಲ್ ಡಿಟೈಲ್ಸ್, ಟೆಕ್ನಿಕಲ್ ಎವಿಡೆನ್ಸ್ ಆಧರಿಸಿ ಪ್ರಿಯಾಂಕಾ ಹಾಗೂ ಆಕೆಯ ಪ್ರಿಯಕರ ಶ್ರೀಧರ್‌ನನ್ನು ಬಂಧಿಸಿದ್ದಾರೆ.

suddiyaana