ಹೊಸಪೇಟೆಯಲ್ಲಿ ಸ್ಪರ್ಧಿಸಿದರೆ 1 ಕೋಟಿ ರೂಪಾಯಿ..! – ಸಿದ್ದುಗೆ ಅಭಿಮಾನಿಯ ಭರ್ಜರಿ ಆಫರ್

ಹೊಸಪೇಟೆಯಲ್ಲಿ ಸ್ಪರ್ಧಿಸಿದರೆ 1 ಕೋಟಿ ರೂಪಾಯಿ..! – ಸಿದ್ದುಗೆ ಅಭಿಮಾನಿಯ ಭರ್ಜರಿ ಆಫರ್

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಅಭಿಮಾನಿಗಳಿಂದ ಭರ್ಜರಿ ಆಫರ್‌ಗಳು ಬರುತ್ತಲೇ ಇದೆ.  ಸಿದ್ದರಾಮಯ್ಯ ಹೊಸಪೇಟೆ ಕ್ಷೇತ್ರದಿಂದ ಸ್ಪರ್ಧಿಸಿದರೆ ಜಮೀನು ಮಾರಿ 1 ಕೋಟಿ ರೂಪಾಯಿ ಕೊಡುತ್ತೇನೆ ಎಂದು ಅಭಿಮಾನಿ ಮಲಿಯಪ್ಪ ಘೋಷಣೆ ಮಾಡಿದ್ದಾರೆ. ಹೊಸಪೇಟೆ ತಾಲೂಕಿನ ಗಾದಿಗನೂರು ಗ್ರಾಮದ ನಿವಾಸಿ ಕೆ.ಎಸ್.ಮಲಿಯಪ್ಪ ತನ್ನ 6 ಎಕರೆ ಹೊಲದಲ್ಲಿ 2 ಎಕರೆ ಮಾರಾಟ ಮಾಡಿ ಒಂದು ಕೋಟಿ ರೂಪಾಯಿ ಕೊಡುತ್ತೇನೆ ಎಂದಿದ್ದಾರೆ.

ಇದನ್ನೂ ಓದಿ:  ತಲೆ ಮೇಲೆ ಕೊಡಪಾನ ಹೊತ್ತ ಸಿದ್ದರಾಮಯ್ಯ – ಲಂಬಾಣಿ ಮಹಿಳೆಯರ ಜೊತೆ ಹೇಗಿತ್ತು ಗೊತ್ತಾ ಡ್ಯಾನ್ಸ್..!? 

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಫರ್​​ ಬಂದಿರುವುದು ಇದೇ ಮೊದಲ್ಲಲ್ಲ. ಈ ಹಿಂದೆ ಕೂಡ ಅಭಿಮಾನಿಗಳು ಆಫರ್​ ನೀಡಿದ್ದರು. ಈ ಹಿಂದೆ ಚಿಕ್ಕಮಗಳೂರು ನಗರದ ಬಾಲಕೃಷ್ಣ ಎಂಬ ಅಭಿಮಾನಿ, ಸಿದ್ದರಾಮಯ್ಯ ಅವರಿಗೆ ನಮ್ಮ ಕ್ಷೇತ್ರದಿಂದ ಸ್ಪರ್ಧಿಸಿದರೇ ತನ್ನ ಎರಡೂವರೆ ಎಕರೆ ತೋಟವನ್ನು ಮಾರಿ 1 ಕೋಟಿ ಕೊಡುವುದಾಗಿ ಹೇಳಿದ್ದರು. ಇವರಿಗಿಂತ ಮೊದಲು ಯಾದಗಿರಿ ಕ್ಷೇತ್ರದಿಂದ ಸ್ಪರ್ಧಿಸಿದರೆ 1 ಕೋಟಿ ರೂ, ಬಾದಾಮಿಯಲ್ಲಿ ಹೆಲಿಕಾಫ್ಟರ್ ಕೊಡುತ್ತೇನೆ ಎಂದು ಅಭಿಮಾನಿಗಳು ಹೇಳಿದ್ದರು.

suddiyaana