ನೀವು ಹಾಯ್ ಎಂದ್ರೆ ಅವರು ಹಾಯ್ ಅಂತಾರೆ! – ಹನಿಟ್ರ್ಯಾಪ್‌ ಬಗ್ಗೆ ಡಿಸಿಎಂ ಶಾಕಿಂಗ್‌ ಸ್ಟೇಟ್‌ಮೆಂಟ್‌!

ನೀವು ಹಾಯ್ ಎಂದ್ರೆ ಅವರು ಹಾಯ್ ಅಂತಾರೆ! – ಹನಿಟ್ರ್ಯಾಪ್‌ ಬಗ್ಗೆ ಡಿಸಿಎಂ ಶಾಕಿಂಗ್‌ ಸ್ಟೇಟ್‌ಮೆಂಟ್‌!

ರಾಜ್ಯ ರಾಜಕಾರಣದಲ್ಲಿ ಈಗ ಹನಿಟ್ರ್ಯಾಪ್‌ ಪ್ರಕರಣ ಭಾರಿ ಸದ್ದು ಮಾಡುತ್ತಿದೆ. ಇದೀಗ ಈ ಪ್ರಕರಣದ ಕುರಿತು ಡಿಸಿಎಂ ಡಿಕೆ ಶಿವಕುಮಾರ್‌ ಮಾತನಾಡಿದ್ದಾರೆ. ನೀವು ಹಾಯ್ ಎಂದ್ರೆ ಅವರು ಹಾಯ್ ಅಂತಾರೆ ಅಂತಾ ಹೇಳಿದ್ದಾರೆ.

ಇದನ್ನೂ ಓದಿ: ಗಗನಾಗಾಗಿ ಬೀದಿ ಬೀದಿ ಅಲೆದ ಡ್ರೋನ್.. ಮದ್ವೆ ಬೆನ್ನಲ್ಲೇ ಪ್ರತಾಪ್‌ ವ್ಯಾಪಾರಿ

ಈ ಪ್ರಕರಣದ ಬಗ್ಗೆ ಮಾತನಾಡಿರುವ ಡಿಸಿಎಂ ಡಿಕೆಶಿ, ಹನಿ ಟ್ರ್ಯಾಪ್ ಮಾಡುವುದು ಅಲ್ಲ. ಹನಿಟ್ರ್ಯಾಪ್ ಆಗುವುದು. ಮಾಡಿದ್ದುಣ್ಣೋ ಮಹರಾಯ, ಅವರು ಮಾಡಿದ್ದು ಅವರಿಗೆ.. ಹನಿಟ್ರ್ಯಾಪ್‌ ಆಗಿದ್ದರೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಿ ಎಂದು ಹೇಳಿದ್ದಾರೆ.

ಮುನಿರತ್ನ ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಅಧಿವೇಶನದಲ್ಲಿ ಅವರು ಏನು ಮಾಡಿದ್ದಾರೆ ಎನ್ನುವುದು ದೂರಿನಲ್ಲಿ ಇದೆ. ಬಿಜೆಪಿಯವರೇ ಹೇಳ್ತಿದ್ದಾರೆ ಅಲ್ವಾ ಅಶೋಕ್‌ಗೆ ಏನೋ ಮಾಡಿದ್ದಾರೆ ಅಂತ, ಸುಮ್ಮ ಸುಮ್ಮನೆ ಯಾರಾದರೂ ನಿಮ್ಮ ಹತ್ತಿರಕ್ಕೆ ಬರುತ್ತಾರಾ? ನೀವು ಹಾಯ್ ಎಂದ್ರೆ ಅವರು ಹಾಯ್ ಅಂತಾರೆ ಎಂದು ತಿರುಗೇಟು ನೀಡಿದರು.

Shwetha M