ಹಿಟ್ & ರನ್ ಕೇಸ್ ಪ್ರಕರಣಕ್ಕೆ ಸಿಕ್ತು ಟ್ವಿಸ್ಟ್ – ತಪ್ಪು ಮಾಡಿದ್ದು ನಾನೇ ಎಂದ ಗಿಚ್ಚಿ ಗಿಲಿಗಿಲಿ ನಟ ಚಂದ್ರಪ್ರಭ

ಹಿಟ್ & ರನ್ ಕೇಸ್ ಪ್ರಕರಣಕ್ಕೆ ಸಿಕ್ತು ಟ್ವಿಸ್ಟ್ – ತಪ್ಪು ಮಾಡಿದ್ದು ನಾನೇ ಎಂದ ಗಿಚ್ಚಿ ಗಿಲಿಗಿಲಿ ನಟ ಚಂದ್ರಪ್ರಭ

ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋನಲ್ಲಿ ತನ್ನ ಹಾಸ್ಯದ ಮೂಲಕ ಫೇಮಸ್ ಆದವರು ನಟ ಚಂದ್ರಫ್ರಭ. ಕಷ್ಟದ ಜೀವನದಿಂದ ತನ್ನಿಷ್ಟದ ಗುರಿಯವರೆಗೂ ಚಂದ್ರಪ್ರಭಾ ಬದುಕಿನ ಪಯಣ ಅನೇಕರಿಗೆ ಗೊತ್ತಿದೆ. ತೆರೆ ಮೇಲೆ ಹಾಸ್ಯದಿಂದ ಪ್ರೇಕ್ಷಕರಿಗೆ ನಗೆಯ ಕಚಗುಳಿ ನೀಡುವ ಚಂದ್ರಪ್ರಭ ರಿಯಾಲಿಟಿ ಶೋ ವೇದಿಕೆ ಹತ್ತಲು ಸವೆಸಿದ ಹಾದಿಯೂ ಕಠಿಣವಾಗಿತ್ತು. ಇದೆಲ್ಲದರ ನಡುವೆ ಚಂದ್ರಪ್ರಭ ರಿಯಾಲಿಟಿ ಶೋ ಗೆದ್ದು ತಾನೊಬ್ಬ ಪ್ರತಿಭಾವಂತ ಕಲಾವಿದ ಎಂದು ಸಾಬೀತು ಪಡಿಸಿದ್ದರು. ಆದರೆ, ಯಾಕೋ ಕಳೆದೆರಡು ದಿನಗಳಿಂದ ಹಾಸ್ಯ ನಟ ಚಂದ್ರಪ್ರಭ ನಡೆದುಕೊಂಡಿರುವ ರೀತಿ ನಿಜಕ್ಕೂ ಬೇಸರ ಮೂಡಿಸುವ ರೀತಿಯಿದೆ ಎಂಬ ಮಾತುಗಳು ಕೇಳಿಬಂದಿದೆ. ಬಡಜೀವವೊಂದು ಆಸ್ಪತ್ರೆ ಪಾಲಾಗಾಲು ಕಾರಣವಾಗಿರುವ ಚಂದ್ರಪ್ರಭ ಈಗ ಕ್ಷಮೆ ಕೋರುತ್ತಿದ್ದಾರೆ.

ಇದನ್ನೂ ಓದಿ: ಡಬ್ಬಿಂಗ್ ಮಾಡುವಾಗಲೇ ಕುಸಿದು ಬಿದ್ದ ನಟ – ಹೃದಯಾಘಾತದಿಂದ ‘ಜೈಲರ್’ ನಟ ಮಾರಿಮುತ್ತು ನಿಧನ

ಸೆ.4ರಂದು ಬೈಕ್ ಸವಾರಿ ಮಾಡಿಕೊಂಡು ಬರುತ್ತಿದ್ದ ಯುವಕ ಮಾಲ್ತೇಶ್‌ಗೆ ಡಿಕ್ಕಿ ಹೊಡೆದು ಅಪಘಾತ ಮಾಡಿ ಚಂದ್ರಪ್ರಭಾ ಎಸ್ಕೇಪ್ ಆಗಿದ್ದರು. ಸದ್ಯ ಅಪಘಾತಕ್ಕೀಡಾದ ಯುವಕನಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಂದ್ರಪ್ರಭಾ ಹಿಟ್ & ರನ್ ಕೇಸ್ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದಂತೆ ಆಕ್ಸಿಡೆಂಟ್ ಆಗಿರುವ ಯುವಕನನ್ನು ಆಸ್ಪತ್ರೆಗೆ ಸೇರಿಸಿದ್ದೇನೆ. ಆತ ಕುಡಿದಿದ್ದ.  ಎಂದು ಸುಳ್ಳು ಹೇಳಿಕೆ ನೀಡಿದ್ದರು. ಆದರೆ, ಯುವಕ ಮಾಲ್ತೇಶ್ ಕಡೆಯವರು ಚಂದ್ರಪ್ರಭ ಸುಳ್ಳು ಹೇಳುತ್ತಿದ್ದಾರೆ ಎಂದು ಹಿಡಿಶಾಪ ಹಾಕಿದ್ದರು. ಕೊನೆಗೂ ಚಂದ್ರಪ್ರಭಾ ಯೂಟರ್ನ್ ಹೊಡೆದಿದ್ದಾರೆ. ಹಿಟ್ & ರನ್ ಕೇಸ್ ವಿಚಾರವಾಗಿ ಚಂದ್ರಪ್ರಭಾ ಚಿಕ್ಕಮಗಳೂರು ನಗರದ ಸಂಚಾರಿ ಠಾಣೆಗೆ ಹಾಜರಾಗಿದ್ದಾರೆ. ಅಪಘಾತದ ಬಗ್ಗೆ ಇದೀಗ ಚಿಕ್ಕಮಗಳೂರು ಠಾಣೆಯ ಎದುರು ಕಣ್ಣೀರು ಹಾಕಿದ್ದಾರೆ. ನಾನು ಮಾಡಿದ ಕೆಲಸ ತಪ್ಪಾಯ್ತು ಎಲ್ಲರಿಗೂ ಕ್ಷಮೆ ಕೇಳುತ್ತೇನೆ. ಆತ ಕುಡಿದಿದ್ದ ಎಂದು ಹೇಳಿದ್ದೆ, ಮಾಲ್ತೇಶ್ ಕುಡಿದಿರಲಿಲ್ಲ. ಅಂದು ಅಪಘಾತದ ಬಳಿಕ ಯುವಕನ ಯೋಗಕ್ಷೇಮ ವಿಚಾರಿಸಬೇಕಿತ್ತು. ಈ ವಿಚಾರವಾಗಿ ಕ್ಷಮೆ ಕೇಳುತ್ತೇನೆ. ನಾನು ಬಡವ, ತಂದೆ ಸತ್ತು 11 ವರ್ಷವಾಗಿದೆ. ಆಸ್ಪತ್ರೆಗೆ ಹೋಗಿ ಯುವಕನ ಯೋಗಕ್ಷೇಮ ವಿಚಾರಿಸುತ್ತೇನೆ. ಮಾಲ್ತೇಶ್ ಆಸ್ಪತ್ರೆಯ ಖರ್ಚಿಗೆ ನನ್ನ ಕೈಲಾದ ಸಹಾಯ ಮಾಡುತ್ತೇನೆ ಎಂದು ಚಂದ್ರಪ್ರಭಾ ಮಾಧ್ಯಮಕ್ಕೆ ಮಾತನಾಡಿದ್ದಾರೆ.

suddiyaana