ಇರಾನ್ ಕದನ ವಿರಾಮ ಬೆನ್ನಲ್ಲೇ ಲೆಬೆನಾನ್ ಮೇಲೆ ಮುಗಿಬಿದ್ದಇಸ್ರೇಲ್

ಇರಾನ್ ಕದನ ವಿರಾಮ ಬೆನ್ನಲ್ಲೇ ಲೆಬೆನಾನ್ ಮೇಲೆ ಮುಗಿಬಿದ್ದಇಸ್ರೇಲ್

ಇರಾನ್ ಕದನ ವಿರಾಮ ಬೆನ್ನಲ್ಲೇ ಲೆಬೆನಾನ್ ಮೇಲೆ ಮುಗಿಬಿದ್ದಿರುವ ಇಸ್ರೇಲ್ ಸೇನೆ ಹೆಜ್ಬೊಲ್ಲಾ ಉಗ್ರ ಸಂಘಟನೆಯ ಮುಖ್ಯಸ್ಥನ ಆಪ್ತ ಸಲಹೆಗಾರನ ಹೊಡೆದುರುಳಿಸಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸ್ವತಃ ಇಸ್ರೇಲ್ ಸೇನೆ ಮಾಹಿತಿ ನೀಡಿದ್ದು, ಇಸ್ರೇಲ್ ಸೇನೆಯು ಗುರುವಾರ ಬೈರುತ್‌ನಲ್ಲಿ ಹಿಜ್ಬೊಲ್ಲಾ ಮುಖ್ಯಸ್ಥ ನಯೀಮ್ ಖಾಸೆಮ್‌ನ ಆಪ್ತ ಸಲಹೆಗಾರನನ್ನು ಹೊಡೆದು ಕೊಂದಿದೆ ಎಂದು ಹೇಳಿದೆ.

“ನಿನ್ನೆ, ಐಡಿಎಫ್ ಬೈರುತ್ ಪ್ರದೇಶದಲ್ಲಿ ದಾಳಿ ಮಾಡಿ ಹೆಜ್ಬೊಲ್ಲಾ ಪ್ರಧಾನ ಕಾರ್ಯದರ್ಶಿ ನಯೀಮ್ ಖಾಸೆಮ್ ಅವರ ವೈಯಕ್ತಿಕ ಕಾರ್ಯದರ್ಶಿ ಮತ್ತು ಸೋದರಳಿಯ ಅಲಿ ಯೂಸುಫ್ ಹರ್ಷಿಯನ್ನು ಹತ್ಯೆ ಮಾಡಿದೆ” ಎಂದು ಮಿಲಿಟರಿ ಹೇಳಿಕೆ ತಿಳಿಸಿದೆ. ಹರ್ಷಿ ಹೆಜ್ಬೊಲ್ಲಾ ಪ್ರಧಾನ ಕಾರ್ಯದರ್ಶಿ ಖಾಸೆಮ್‌ಗೆ ನಿಕಟ ಸಹವರ್ತಿ ಮತ್ತು ವೈಯಕ್ತಿಕ ಸಲಹೆಗಾರರಾಗಿದ್ದ ಮತ್ತು ಅವರ ಕಚೇರಿಯನ್ನು ನಿರ್ವಹಿಸುವಲ್ಲಿ ಮತ್ತು ಭದ್ರಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಅದು ಹೇಳಿದೆ.

ಇದನ್ನೂ ಓದಿ: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ! – ರಾಜ್ಯದಲ್ಲಿ ಶೇ.86ರಷ್ಟು ವಿದ್ಯಾರ್ಥಿಗಳು ಪಾಸ್!‌

ಹಿಜ್ಬೊಲ್ಲಾ ದಹಿಯೆಹ್ ಭದ್ರಕೋಟೆಯ ಹೊರಗೆ ಬೈರುತ್‌ನ ಟ್ಯಾಲೆಟ್ ಖಯಾತ್ ನೆರೆಹೊರೆಯಲ್ಲಿ ನಡೆದ ದಾಳಿಯಲ್ಲಿ ಅಲಿ ಯೂಸುಫ್ ಹರ್ಷಿಯನ್ನು ಹೊಡೆದುರುಳಿಸಲಾಗಿದೆ ಎಂದು ಇಸ್ರೇಲ್ ಹೇಳಿದೆ. ಅಂತೆಯೇ ಈ ದಾಳಿಯಲ್ಲಿ ಬಹುಮಹಡಿ ಕಟ್ಟಡ ಭಾಗಶಃ ಕುಸಿದಿದೆ ಎಂದು ದೃಶ್ಯಗಳು ತೋರಿಸಿವೆ.

ಹರ್ಷಿ ಖಾಸೆಮ್ ಅವರ ಸೋದರಳಿಯ ಮತ್ತು ವೈಯಕ್ತಿಕ ಕಾರ್ಯದರ್ಶಿ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ. “ಹರ್ಷಿ ಹೆಜ್ಬೊಲ್ಲಾ ಪ್ರಧಾನ ಕಾರ್ಯದರ್ಶಿ ನಯೀಮ್ ಖಾಸೆಮ್ ಅವರ ನಿಕಟ ಸಹವರ್ತಿ ಮತ್ತು ವೈಯಕ್ತಿಕ ಸಲಹೆಗಾರರಾಗಿದ್ದ. ಅವರ ಕಚೇರಿ ಮತ್ತು ಅವರ ಭದ್ರತೆಯನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಎಂದು ಹೇಳಲಾಗಿದೆ.ಏತನ್ಮಧ್ಯೆ, ಹೆಜ್ಬೊಲ್ಲಾ ಸಂಘಟನೆ ತನ್ನ ಸಾವಿರಾರು ಶಸ್ತ್ರಾಸ್ತ್ರಗಳು, ರಾಕೆಟ್‌ಗಳು ಮತ್ತು ಲಾಂಚರ್‌ಗಳನ್ನು ದಕ್ಷಿಣ ಲೆಬನಾನ್‌ಗೆ ವರ್ಗಾಯಿಸಲು ಬಳಸುತ್ತಿದ್ದ ಎರಡು “ಕೇಂದ್ರ” ಲಿಟಾನಿ ನದಿ ದಾಟುವಿಕೆಗಳನ್ನು ರಾತ್ರಿಯಿಡೀ ಇಸ್ರೇಲ್ ಸೇನೆ ಹೊಡೆದಿದೆ ಎಂದು ಐಡಿಎಫ್ ಹೇಳಿದೆ.

Kishor KV