ಬಿಗ್‌ ಬಾಸ್‌ ಪ್ರೋಮೋ ಫೋಟೋ ಲೀಕ್!! – ಸೆಟ್‌ ನಲ್ಲಿ ಸುದೀಪ್ ಸರ್‌ ಪ್ರೈಸ್
ದೊಡ್ಮನೆಗೆ ಎಂಟ್ರಿ ಕೊಡೋರು ಇವರೇ?

ಬಿಗ್‌ ಬಾಸ್‌ ಪ್ರೋಮೋ ಫೋಟೋ ಲೀಕ್!! – ಸೆಟ್‌ ನಲ್ಲಿ ಸುದೀಪ್ ಸರ್‌ ಪ್ರೈಸ್ದೊಡ್ಮನೆಗೆ ಎಂಟ್ರಿ ಕೊಡೋರು ಇವರೇ?

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಗೆ ಜೋರಾಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ಅಕ್ಟೋಬರ್‌ ಮೂರನೇ ವಾರದಲ್ಲಿ ಶೋ ಆರಂಭವಾಗೋ ಸಾಧ್ಯತೆ ಇದೆ. ಈಗಾಗಲೇ ವಾಹಿನಿ ಹಾಗೂ ಶೋ ತಂಡ ಸಿದ್ಧತೆ ನಡೆಸುತ್ತಿದೆ. ಈ ಬೆನ್ನಲ್ಲೇ ದೊಡ್ಮನೆಗೆ ಯಾವೆಲ್ಲಾ ಎಂಟ್ರಿ ಕೊಡಬಹುದು ಅನ್ನೋ ಚರ್ಚೆ ಜೋರಾಗೆ ನಡಿತಾ ಇದೆ. ಇದೀಗ ಬಿಗ್‌ ಬಾಸ್‌ ಸೆಟ್‌ನ ಕೆಲ ಫೋಟೋ ಕೂಡ ವೈರಲ್‌ ಆಗಿದೆ. ವೈರಲ್‌ ಆದ ಫೋಟೋದಿಂದ ಕಿಚ್ಚ ಸುದೀಪ್‌ ಕಾರ್ಯಕ್ರಮ ಹೋಸ್ಟ್‌ ಮಾಡ್ತಾರ ಇಲ್ವಾ ಅನ್ನೋ ವಿಚಾರ ಕೂಡ ರಿವೀಲ್‌ ಆಗಿದೆ. ಅಷ್ಟಕ್ಕೂ ಬಿಗ್‌ಬಾಸ್‌ ಕನ್ನಡ ಸೀಸನ್‌ 11 ರಲ್ಲಿ ಕಿಚ್ಚ ಸುದೀಪ್‌ ಇರ್ತಾರಾ? ಶೋ ಗೆ ಯಾರೆಲ್ಲಾ ಬರ್ತಾರೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  ಕೀರ್ತಿ ಅಂತ್ಯಸಂಸ್ಕಾರ ಮುಗಿದೇಹೋಯ್ತಾ? – ತನ್ವಿ ರಾವ್ ಗುಡ್ ಬೈ?

ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಬರೀ ವಿವಾದಗಳಿಂದಲೇ ಸದ್ದು ಮಾಡಿತ್ತು.. ವಿವಾದಗಳಿಂದ ಕೂಡಿದ್ರು ಕೂಡ ಅಷ್ಟೇ ಸೀಸನ್‌ 10 ಎಲ್ಲ ಸೀಸನ್‌ಗಳಿಗಿಂತಲೂ  ಜನಪ್ರಿಯವಾಗಿತ್ತು.. ಇದೀಗ ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಗೆ ಕೌಂಟ್‌ಡೌನ್‌ ಶುರುವಾಗಿದೆ. ಅಕ್ಟೋಬರ್‌ ತಿಂಗಳಿನಿಂದಲೇ ಶೋ ಶುರುವಾಗುವ ಸಾಧ್ಯತೆ ಇದೆ. ಬಿಗ್‌ ಬಾಸ್‌ ಸ್ಪರ್ಧೆ ಆರಂಭಕ್ಕೂ ಮುನ್ನವೇ ಸ್ಪರ್ಧಿಗಳು ಯಾರಾಗಲಿದ್ದಾರೆ ಅನ್ನೋದೇ ಕುತೂಹಲದ ವಿಚಾರ. ಸ್ಪರ್ಧಿಗಳನ್ನ ಆಯ್ಕೆ ಮಾಡುವ ಪ್ರಕ್ರಿಯೆ ಅಷ್ಟು ಸುಲಭದಲ್ಲ. ವಿವಿಧ ಕ್ಷೇತ್ರಗಳ ಜೊತೆಗೆ ವಿವಿಧ ಮನಸ್ಥಿತಿಯವರು ದೊಡ್ಮನೆಯೊಳಗೆ ಇದ್ರೆನೆ ಆಟ ಸಾಗುವ ರೀತಿ ನೋಡುವುದೇ ಚೆಂದ.. ಹಾಗಾಗಿ ಆಯೋಜಕರಿಗೆ ಇದೊಂದು ಸವಾಲೇ ಸರಿ..

ಇದೀಗ ಶೋ ಟೀಂ ಬಿಗ್‌ ಬಾಸ್‌ಗೆ ಯಾರನ್ನೆಲ್ಲಾ ಕರೆಸ್ಬೇಕು ಅನ್ನೋ ಲೆಕ್ಕಾಚಾರ ಹಾಕ್ತಿದೆ. ಕೆಲವರಿಗೆ ಶೋ ಟೀಮ್‌  ಬುಲಾವ್‌ ಕೂಡ ನೀಡಿದೆ ಅಂತಾ ಹೇಳಲಾಗ್ತಿದೆ..  ಹೀಗಾಗಿ  ಈ ಶೋನಲ್ಲಿ ಭಾಗವಹಿಸುವ ಒಂದಷ್ಟು ಸ್ಪರ್ಧಿಗಳ ಹೆಸರು ಕೂಡ ಕೇಳಿ ಬರುತ್ತಿದೆ.

ಆರಂಭದಿಂದಲೂ ಕೇಳಿಬರ್ತಿರೋ ಹೆಸರು ಅಂದ್ರೆ ‘ಮಜಾ ಭಾರತ’, ‘ಗಿಚ್ಚಿ ಗಿಲಿಗಿಲಿ’ ಶೋ ಖ್ಯಾತಿಯ ರಾಘವೇಂದ್ರ  ಅವರದ್ದು.. ಈಗಾಲ್ಲೇ ರಿಯಾಲಿಟಿ ಶೋ ಮೂಲಕವೇ.. ಅದು ಕೂಡ ಹೆಣ್ಣಿನ ಪಾತ್ರದ ಮೂಲಕವೇ ಕನ್ನಡಿಗರ ಮನಗೆದ್ದಿದ್ದಾರೆ.. ಇದೀಗ ರಾಘವೇಂದ್ರ ಕೂಡ ಬಿಗ್‌ ಬಾಸ್‌ ಸೀಸನ್‌ 11 ನಲ್ಲಿ ಸ್ಪರ್ಧಿಸೋದು ಪಕ್ಕಾ ಅಂತಾ ಹೇಳಲಾಗ್ತಿದೆ..

ಇನ್ನು ದೊಡ್ಮನೆಗೆ ಬರಲಿದ್ದಾರೆ ಅಂತಾ ಬರ್ತಾರೆ ಅಂತಾ ಹೇಳಲಾಗ್ತಿರೋ ಹೆಸ್ರು ಅಶ್ವಿನಿ ಗೌಡ  ಅವರದ್ದು, ಈಗಾಗ್ಲೇ ಕನ್ನಡದ ಅನೇಕ ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೇ ಅಶ್ವಿನಿ ಗೌಡ ಕರ್ನಾಟಕ ರಕ್ಷಣಾ ವೇದಿಕೆಯಲ್ಲಿಯೂ ಗುರುತಿಸಿಕೊಂಡಿದ್ದಾರೆ. ಇದೀಗ ಈಕೆಯೂ ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರೆ ಅನ್ನೋ ಮಾತು ಕೇಳಿ ಬರ್ತಾ ಇದೆ.

ಹಿರಿಯ ನಟ ಎಸ್‌ ನಾರಾಯಣ್‌ ಮಗ  ಪಂಕಜ್ ನಾರಾಯಣ್ ದೊಡ್ಮನೆಗೆ ಬರಲಿದ್ದಾರೆ ಅನ್ನೋ ಗುಸು ಗುಸು ಜೋರಾಗೇ ಕೇಳಿ ಬರ್ತಾ ಇದೆ.. ಇವರು ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡಿದ್ದಾರೆ.

‘ಪಾರು’ ಸೀರಿಯಲ್‌ ಮೂಲಕ ನಟಿ ಮೋಕ್ಷಿತಾ ಪೈ ಈಗಾಗ್ಲೇ ಮನೆಮಾತಾಗಿದ್ದಾರೆ. ಸದ್ಯಕ್ಕೆ ಯಾವುದೇ ಸೀರಿಯಲ್‌ ಸಿನಿಮಾಗಳಲ್ಲಿ ಮೋಕ್ಷಿತಾ ಪೈ ಕಾಣಿಸಿಕೊಂಡಿಲ್ಲ.. ಇದೀಗ ಬಿಗ್‌ ಬಾಸ್‌ ಸೀಸನ್‌ 11 ನಲ್ಲಿ ಕಾಣಿಸಿಕೊಳ್ಳಲಿದ್ದಾರೆ  ಎನ್ನಲಾಗ್ತಿದೆ..

ಇನ್ನು ಶರ್ಮಿತಾ ಗೌಡ ಗೀತಾ ಸೀರಿಯಲ್‌ ಮೂಲಕ ಭಾನುಮತಿ ಅಂತಾನೇ ಫೇಮಸ್‌ ಆಗಿದ್ದಾರೆ. ಸೀರಿಯಲ್‌ ನಲ್ಲಿ ವಿಲನ್‌ ಆಗಿ ಕಾಣಿಸಿಕೊಂಡು ವೀಕ್ಷಕರ ಮನಗೆದ್ದಿದ್ದಾರೆ.. ಇದೀಗ ಬಿಗ್‌ ಬಾಸ್‌ ಮನೆಗೆ ಇವರು ಕೂಡ ಎಂಟ್ರಿ ಕೊಡಲಿದ್ದಾರೆ ಅಂತಾ ಹೇಳಲಾಗ್ತಿದೆ.

‘ಬಿಗ್ ಬಾಸ್’ ಆಫರ್ ಬಂದ್ರೆ ನಾನು ಹೋಗಲು ರೆಡಿ ಎಂದು ವರ್ಷಾ ಕಾವೇರಿ ಹೇಳಿದ್ದಾರೆ. ವರ್ಷಾ ಕಾವೇರಿ ಈಗಾಗ್ಲೇ ಸೋಶಿಯಲ್‌ ಮೀಡಿಯಾದಲ್ಲಿ ತುಂಬಾ ಫೇಮಸ್..‌ ಹೀಗಾಗಿ ಕಲರ್ಸ್‌ ಕನ್ನಡ ವಾಹಿನಿ ಈಕೆಯನ್ನ ಕೂಡ ದೊಡ್ಮನೆಗೆ ಕರಿಬೋದು ಅಂತಾ ಹೇಳಲಾಗ್ತಿದೆ.

ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ‘ಸತ್ಯ’ಧಾರಾವಾಹಿ ಅಂತ್ಯ ಆಗಿದೆ. ಈ ಧಾರಾವಾಹಿ ನಟಿ ಗೌತಮಿ ಜಾಧವ್ ಯಾವುದೇ ರಿಯಾಲಿಟಿ ಶೋನಲ್ಲಿ ಭಾಗವಹಿಸಿಲ್ಲ. ಹೀಗಾಗಿ ಇವರು ‘ಬಿಗ್ ಬಾಸ್ ಗೆ ಬರ್ಬೋದು ಅಂತಾ ಹೇಳಲಾಗ್ತಿದೆ. ಆದ್ರೆ ಬಿಗ್‌ ಬಾಸ್‌ ಮನೆಯಿಂದ ಕರೆ ಬಂದ್ರೆ, ಆ ಆಫರ್ ಸ್ವೀಕಾರ ಮಾಡ್ತಾರಾ ಅಂತ ಕಾದು ನೋಡಬೇಕಿದೆ.

‘ಕಾವೇರಿ ಕನ್ನಡ ಮೀಡಿಯಂ’ ಧಾರಾವಾಹಿಯಿಂದ ಹೊರಬಂದಿರುವ ನಟಿ ಸುಕೃತಾ ನಾಗ್ ಹೆಸ್ರು ಕೂಡ ಜೋರಾಗೇ ಕೇಳಿ ಬರ್ತಾ ಇದೆ.. ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ಚರ್ಚೆಯಾಗ್ತಿದೆ. ಈ ಚೆಂದುಳ್ಳಿ ಚೆಲುವೆ ದೊಡ್ಮೆನೆಗೆ ಎಂಟ್ರಿ ಕೊಡ್ತಾರಾ ಅಂತಾ ಕಾದು ನೋಡಬೇಕಿದೆ.

ನಟ ಚೇತನ್ ಚಂದ್ರ ಅವರು ಯಾವುದೇ ಧಾರಾವಾಹಿಯಲ್ಲಿ ನಟಿಸುತ್ತಿಲ್ಲ. ಇವರು ಈ ಶೋನಲ್ಲಿ ಇರಲಿದ್ದಾರೆ ಎನ್ನಲಾಗ್ತಿದೆ. ಹಾಸ್ಯನಟ ಚಂದ್ರಪ್ರಭ ಅವರು ಈ ದೊಡ್ಮನೆಗೆ ಎಂಟ್ರಿ ಕೊಡೋ ಸಾಧ್ಯತೆ ಇದೆ ಅಂತಾ ಹೇಳಲಾಗ್ತಿದೆ.  ‘ಬೃಂದಾವನ’ ಧಾರಾವಾಹಿ ನಟ ವರುಣ್ ಆರಾಧ್ಯಗೂ ಬಿಗ್‌ಬಾಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಫರ್‌ ಸಿಕ್ಕಿದೆ ಅಂತಾ ಹೇಳಲಾಗ್ತಿದೆ. ಆದ್ರೆ ಇವರು ಇತ್ತೀಚೆಗೆ ಸಿನಿಮಾ ಒಪ್ಪಿಕೊಂಡಿದ್ದರಿಂದ ಶೋಗೆ ಹೋಗೋದು ಡೌಟ್ ಎನ್ನಲಾಗಿದೆ.

‘ಕೆಂಡಸಂಪಿಗೆ’ ಧಾರಾವಾಹಿ ಮುಕ್ತಾಯ ಆಗಲಿದ್ದು ಈ ಧಾರಾವಾಹಿ ನಾಯಕ ಆಕಾಶ್ ಅವರು ಶೋನಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗ್ತಿದೆ. ಇನ್ನು ರೀಲ್ಸ್‌ ರಾಣಿ ರೇಷ್ಮಾ ಸದ್ಯ  ‘ಗಿಚ್ಚಿ ಗಿಲಿಗಿಲಿ’ ಶೋ ಸ್ಪರ್ಧಿಸುತ್ತಿದ್ದಾರೆ.. ಸೋಶಿಯಲ್‌ ಮೀಡಿಯಾ ಬಳಿಕ ರಿಯಾಲಿಟಿ ಶೋ ಮೂಲಕ ಕೂಡ ಎಲ್ಲರ ಗಮನ ಸೆಳಿತಾ ಇದ್ದಾರೆ. ಸೋ ಇವರು ಕೂಡ ಬಿಗ್‌ ಬಾಸ್‌ಗೆ ಬರ್ಬೋದು ಅಂತಾ ಹೇಳಲಾಗ್ತಿದೆ.  ಇನ್ನು ಅಂತರಪಟ’ ಧಾರಾವಾಹಿ ಮುಕ್ತಾಯ ಆಗಲಿದ್ದು ಈ ಧಾರಾವಾಹಿ ನಾಯಕಿ ತನ್ವಿ ಬಾಲರಾಜ್ ಅವರು ಭಾಗವಹಿಸಲಿದ್ದಾರೆ ಎನ್ನಲಾಗ್ತಿದೆ.

ಸದ್ಯ ಇದು  ಬಿಗ್‌ ಬಾಸ್‌ ರಿಯಾಲಿಟಿ ಶೋಗೆ ಹೋಗಲಿರುವ ಸಂಭಾವ್ಯರ ಪಟ್ಟಿ.. ಆದ್ರೆ ಇದು ಅಧಿಕೃತವಲ್ಲ.. ಸ್ಪರ್ಧಿಗಳು ಯಾರ್ಯಾರು ಅಂತಾ ಬಿಗ್‌ ಬಾಸ್‌ ರಿಯಾಲಿಟಿ ಶೋ ಶುರುವಾದವತ್ತೇ ಗೊತ್ತಾಗೋದು… ಅಲ್ಲಿವರೆಗೂ ನಾವು ಇವ್ರು ಹೋಗ್ಬೋದು.. ಹೋಗ್ಲಿಕ್ಕೆ ಇಲ್ಲ ಅಂತಾ ಊಹೆ ಮಾಡ್ಬೋದು ಅಷ್ಟೇ..

ಅಂದಹಾಗೆ ಬಿಗ್ ಬಾಸ್ ಎಂದಾಗ ನೆನಪಾಗೋದು.. ಒಂದು ಕಿಚ್ಚ ಸುದೀಪ್.. ಇನ್ನೊಂದು ಬಿಗ್ ಬಾಸ್ ಮನೆ. ನಟ ಸುದೀಪ್ ಆಂಕರಿಂಗ್, ಸ್ಪರ್ಧಿಗಳನ್ನು ನಗಿಸುವ, ಅವರಿಗೆ ಮಾತಿನ ಮೂಲಕವೇ ಏಟು ನೀಡುವ ಪರಿ ಬಹುತೇಕ ಎಲ್ಲ ವೀಕ್ಷಕರಿಗೆ ಇಷ್ಟ. ಬಿಗ್ ಬಾಸ್ ಗೆ ಟಿ ಆರ್ ಪಿ ಬರ್ತಿರೋದೆ ಸುದೀಪ್ ಅವರಿಂದ ಅಂದ್ರೆ ತಪ್ಪೇನಿಲ್ಲ. ವಾರಪೂರ್ತಿ ಬಿಗ್ ಬಾಸ್ ನೋಡದ ಕೆಲ ವೀಕ್ಷಕರು ಕೂಡ ಶನಿವಾರ ಮತ್ತು ಭಾನುವಾರ ಟಿವಿ ಮುಂದೆ ಕುಳಿತುಕೊಳ್ತಾರೆ.  ಕಿಚ್ಚನ ಪಂಚಾಯತಿ ಎಲ್ಲರ ಅಚ್ಚುಮೆಚ್ಚು. ಆದ್ರೆ ಈ ಬಾರಿ ಶೋನಲ್ಲಿ ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡ್ತಿಲ್ಲ, ಇವರ ಬದಲಿಗೆ ರಿಷಬ್ ಶೆಟ್ಟಿ ಅಥವಾ ರಮೇಶ್ ಅರವಿಂದ್ ಅವರು ನಿರೂಪಣೆ ಮಾಡಲಿದ್ದಾರೆ ಎನ್ನಲಾಗಿತ್ತು. ಆದ್ರೆ ಮುಂದಿನ ಸೀಸನಲ್‌ನಲ್ಲೂ ಕಿಚ್ಚ ಇರಲಿದ್ದಾರೆ..

ಹೌದು, ಕಿಚ್ಚ ಸುದೀಪ್‌ ಪ್ರೋಮೋ ಶೂಟ್‌ನಲ್ಲಿ ಭಾಗಿಯಾಗಿದ್ದಾರೆ ಅಂತಾ ಹೇಳಲಾಗ್ತಿದೆ. ಹೈದರಾಬಾದ್‌ನಲ್ಲಿ ಈ ಶೋನ ಪ್ರೋಮೋ ಶೂಟ್ ಆಗಿದೆ. ಆಗಸ್ಟ್ 12ಕ್ಕೆ ಕಿಚ್ಚ ಸುದೀಪ್ ಅವರು ಹೈದರಾಬಾದ್‌ಗೆ ತೆರಳಿದ್ದರು ಎನ್ನಲಾಗ್ತಿದೆ. ಆದ್ರೆ ಈ ಬಗ್ಗೆಯೂ ಅಧಿಕೃತ ಮಾಹಿತಿಯಿಲ್ಲ. ಈ ಶೂಟಿಂಗ್‌ನ ಎರಡು ಫೋಟೋಗಳು ಲೀಕ್ ಆಗಿದ್ದು, ಆ ಫೋಟೋದಲ್ಲಿ ಇರೋರು ಸುದೀಪ್ ಎನ್ನಲಾಗಿದೆ. ಹೀಗಾಗಿ ಈ ಬಾರಿಯೂ ಸುದೀಪ್ ಅವರೇ ಈ ಶೋ ನಿರೂಪಣೆ ಮಾಡಲಿದ್ದಾರೆ ಎನ್ನಲಾಗ್ತಿದೆ.

ಇದೀಗ ಪ್ರೋಮೋ ಶೂಟ್‌ ನ ಪೋಟೋ ವೈರಲ್‌ ಆದ ಬೆನ್ನಲ್ಲೇ ಆದಷ್ಟು ಬೇಗ ಬಿಗ್‌ ಬಾಸ್‌ ಸೀಸನ್‌ 11 ಶುರುವಾಗಲಿದೆ.. ಕಿಚ್ಚನೇ ಈ ಬಾರಿ ಕೂಡ ಹೋಸ್ಟ್‌ ಮಾಡಲಿದ್ದಾರೆ ಅನ್ನೋದಂತೂ ಕನ್ಫರ್ಮ್‌ ಆಗಿದೆ.. ಒಟ್ಟಿನಲ್ಲಿ ಕಳೆದ ಬಾರಿ ಟಿಆರ್‌ಪಿಯಲ್ಲಿ ಕಮಾಲ್ ಮಾಡಿದ್ದ ಬಿಗ್‌ ಬಾಸ್‌ ರಿಯಾಲಿಟಿ ಶೋ, ಈ ಬಾರಿ ಹೇಗೆ ಮೂಡಿಬರಲಿದೆ ಎಂಬ ಕುತೂಹಲ ಶುರು ಆಗಿದೆ.

Shwetha M

Leave a Reply

Your email address will not be published. Required fields are marked *