ಜೂ. 26 ರವರೆಗೆ ಕರ್ನಾಟಕದ ಹಲವೆಡೆ ಭಾರಿ ಮಳೆ – ಹವಾಮಾನ ಇಲಾಖೆ ಮುನ್ಸೂಚನೆ

ಜೂ. 26 ರವರೆಗೆ ಕರ್ನಾಟಕದ ಹಲವೆಡೆ ಭಾರಿ ಮಳೆ – ಹವಾಮಾನ ಇಲಾಖೆ ಮುನ್ಸೂಚನೆ

ಕಳೆದ ಕೆಲ ತಿಂಗಳುಗಳಿಂದ ಉತ್ತರ ಭಾರತವನ್ನ ಕಾಡುತ್ತಿದ್ದ ಹೀಟ್​ವೇವ್​ ಅಂತ್ಯಗೊಂಡಿದ್ದು, ಬಿಸಿಲಿನ ಪ್ರಮಾಣ ಇಳಿಕೆಯಾಗಿದೆ. ಇನ್ನೇನಿದ್ರೂ ಮಳೆಯ ಆರ್ಭಟ ಶುರುವಾಗಲಿದೆ ಅಂತಾ ಹವಾಮಾನ ಇಲಾಖೆ ಎಚ್ಚರಿಸಿದೆ.

ಇದನ್ನೂ ಓದಿ: ವರುಣ ದೇವನ ಕೃಪೆಗಾಗಿ ನಡೆಯಿತು ಮಕ್ಕಳ ಮದುವೆ! – ವಿಶಿಷ್ಟ ಕಲ್ಯಾಣಕ್ಕೆ ಸಾಕ್ಷಿಯಾಯ್ತು ಸಕ್ಕರೆ ನಾಡು

ಜೂನ್​ 26ರವರೆಗೆ ಕರ್ನಾಟಕದ ವಿವಿಧ ಭಾಗಗಳಲ್ಲಿ ವಿಪರೀತ ಮಳೆಯಾಗಲಿದೆ. ಜೂನ್ 25 ರಿಂದ ಜೂನ್ 27ರವರೆಗೆ ದೆಹಲಿಯಲ್ಲಿ ಭಾರಿ ಮಳೆಯಾಗಲಿದೆ. ಜೂನ್​ 26ರ ಬಳಿಕ ರಾಜಸ್ಥಾನದಲ್ಲಿ ವಿಪರೀತ ಮಳೆಯಾಗಬಹುದು. ಹಾಗೆಯೇ ಹರಿಯಾಣ, ಪಂಜಾಬ್, ಛತ್ತೀಸ್​ಗಢ, ಮಧ್ಯಪ್ರದೇಶದಲ್ಲಿ ತೀವ್ರ ಮಳೆಯಾಗುವ ಸಾಧ್ಯತೆ ಇದೆ ಅಂತಾ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಹೀಗಾಗಿ ಭಾರತದ ಜನತೆ ಇನ್ನು ವರುಣ ಅಬ್ಬರ ಎದುರಿಸೋಕೆ ಸಿದ್ಧವಾಗಬೇಕಿದೆ.

suddiyaana