ಮಗನನ್ನ ಗುಂಡಿಟ್ಟು ಕೊಲ್ಲಿ.. ಇಲ್ಲದಿದ್ದರೆ ನಾನೇ ಆತನ ಜೀವ ತೆಗೆಯುವೆ – ಬಾಲಕಿ ಮೇಲೆರಗಿದ ಅತ್ಯಾಚಾರ ಆರೋಪಿ ತಂದೆಯ ಆಕ್ರೋಶದ ನುಡಿ

ಮಗನನ್ನ ಗುಂಡಿಟ್ಟು ಕೊಲ್ಲಿ.. ಇಲ್ಲದಿದ್ದರೆ ನಾನೇ ಆತನ ಜೀವ ತೆಗೆಯುವೆ – ಬಾಲಕಿ ಮೇಲೆರಗಿದ ಅತ್ಯಾಚಾರ ಆರೋಪಿ ತಂದೆಯ ಆಕ್ರೋಶದ ನುಡಿ

ಮಧ್ಯಪ್ರದೇಶದ ಉಜ್ಜಯನಿಯಲ್ಲಿ ಇಡೀ ದೇಶವೇ ತಲೆ ತಗ್ಗಿಸುವಂಥ ಘೋರ ಘಟನೆ ನಡೆದಿದೆ. 12 ವರ್ಷದ ಬಾಲಕಿಯ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ದೈಹಿಕ ಹಿಂಸೆ ಅನುಭವಿಸಿದ ಬಳಿಕ ಬಾಲಕಿ ಅರೆಬೆತ್ತಲೆಯಾಗಿ ರಕ್ತಸಿಕ್ತ ದೇಹದೊಂದಿಗೆ ನಡೆದುಬರುತ್ತಿದ್ದು, ತಾನು ಬರುವ ಮಾರ್ಗದಲ್ಲಿದ್ದ ಪ್ರತಿ ಮನೆಯ ಬಾಗಿಲಿಗೂ ಹೋಗಿ ಸಹಾಯಕ್ಕೆ ಅಂಗಲಾಚಿದ್ದಾಳೆ. ಈ ವೇಳೆ ಮನೆಯ ಮುಂದೆ ನಿಂತಿದ್ದ ವ್ಯಕ್ತಿಗಳು ಆಕೆಯನ್ನು ನೋಡುತ್ತಿದ್ದರೆ, ಹೊರತು, ಮಾನವೀಯತೆ ಮೆರೆದು ಕನಿಷ್ಠ ಸಹಾಯ ಮಾಡುವ ಗೋಜಿಗೂ ಹೋಗಲಿಲ್ಲ. ಇನ್ನು ಬಾಲಕಿಯು ರಸ್ತೆ ಬೀದಿಯಲ್ಲಿ ನಡೆದುಕೊಂಡು ಹೋಗುವ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಇದನ್ನೂ ಓದಿ : ಮಗಳ ಮದುವೆಗಾಗಿ ದುಡಿದ ಹಣ ಬ್ಯಾಂಕ್‌ ಲಾಕರ್‌ನಲ್ಲಿಟ್ಟ ತಾಯಿ.. 18 ಲಕ್ಷ ರೂ. ಗೆದ್ದಲು ಪಾಲು!

ಇದೀಗ ಉಜ್ಜೈನಿಯಲ್ಲಿ (Ujjain) ನಡೆದ ಬಾಲಕಿಯ ಅತ್ಯಾಚಾರ ಕೇಸ್‌ಗೆ ಇಡೀ ದೇಶವೇ ಬೆಚ್ಚಿಬಿದ್ದಿದೆ. ಪುಟ್ಟ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದ ಆರೋಪಿ ಆಟೋ ಚಾಲಕನನ್ನು (auto driver) ಈಗಾಗಲೇ ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ. ಆತನನ್ನು ಗಲ್ಲಿಗೇರಿಸಬೇಕು (hanging) ಎಂಬ ಆಗ್ರಹ ದೇಶಾದ್ಯಂತ ಕೇಳಿ ಬರುತ್ತಿದೆ. ಈ  ನಡುವೆಯೇ ಆರೋಪಿ ಭರತ್ ಸೋನಿ (Bharat Soni) ತಂದೆ ಪ್ರತಿಕ್ರಿಯೆ ನೀಡಿದ್ದಾರೆ. ಆತ ನನ್ನ ಮಗನೇ ಅಲ್ಲ, ಆತ ಮಾಡಿದ ಘೋರ ಕೃತ್ಯಕ್ಕೆ ಮರಣ ದಂಡನೆ (death penalty) ನೀಡಬೇಕು. ಇಲ್ಲವಾದರೇ ನಾನೇ ಆತನನ್ನು ಕೊಲ್ಲಲೂ ಹಿಂಜರಿಯುವುದಿಲ್ಲ ಎಂದು ಹೇಳಿದ್ದಾರೆ.

ಮಗನ ಕೃತ್ಯದ ಬಗ್ಗೆ ಭರತ್ ಸೋನಿ ತಂದೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಯಾರೇ ಆಗಿರಲಿ ಇಂತಹ ಕೆಲಸ ಮಾಡಬಾರದು. ಆತನಿಗೆ ಕಠಿಣ ಶಿಕ್ಷೆಯಾಗಲೇಬೇಕು. ಇಂತಹ ಘೋರ ಅಪರಾಧಗಳನ್ನು ಮಾಡುವವರನ್ನು ಗುಂಡು ಹೊಡೆದು ಸಾಯಿಸಬೇಕು. ಆತನ ಅಮಾನವೀಯ ಕೆಲಸದಿಂದಾಗಿ ನಾನು ಹಾಗೂ ನನ್ನ ಕುಟುಂಬ ಯಾವತ್ತಿಗೂ ಅವಮಾನದಿಂದ ಹೊರಕ್ಕೆ ಬರಲು ಸಾಧ್ಯವೇ ಇಲ್ಲ. ಆ ಹುಡುಗಿ ನನ್ನ ಮಗಳ ಸಮಾನಳು. ಅವನ ಜಾಗದಲ್ಲಿ ನಾನಿದ್ದಿದ್ದರೆ ನನ್ನ ತಪ್ಪನ್ನು ಒಪ್ಪಿಕೊಂಡು ಸಾಯುತ್ತಿದ್ದೆ ಅಂತ ಹೇಳಿಕೆ ನೀಡಿದ್ದಾರೆ. ಹಾಗೂ ಆತನನ್ನು ಗಲ್ಲಿಗೆ ಏರಿಸಿ ಅಂತ ಆರೋಪಿಯ ತಂದೆ ಆಗ್ರಹಿಸಿದ್ದಾರೆ. ಇಂತಹ ಘೋರ ಅಪರಾಧಗಳನ್ನು ಮಾಡುವವರು ಬದುಕಲು ಅರ್ಹರಲ್ಲ. ಆತ ನನ್ನ ಮಗನೇ ಆಗಿರಲಿ ಅಥವಾ ಯಾರೇ ಆಗಿರಲಿ. ಇಂತಹ ಅಪರಾಧವನ್ನು ಮಾಡುವವರನ್ನು ಗಲ್ಲಿಗೇರಿಸಬೇಕು ಅಥವಾ ಗುಂಡು ಹಾರಿಸಿ ಸಾಯಿಸಬೇಕು ಅಂತ ಅವರು ಆಗ್ರಹಿಸಿದ್ದಾರೆ. ಸೆಪ್ಟೆಂಬರ್ 25 ರಂದು ಉಜ್ಜೈನಿಯ ಮಹಾಕಾಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿಗಳು 13 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದರು.

Shantha Kumari