ಗುತ್ತಿಗೆದಾರರ ಯೂಟರ್ನ್ ಬಗ್ಗೆ ಹೊಸ ಬಾಂಬ್ ಸಿಡಿಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ

ಗುತ್ತಿಗೆದಾರರ ಯೂಟರ್ನ್ ಬಗ್ಗೆ ಹೊಸ ಬಾಂಬ್ ಸಿಡಿಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ

ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿರುವ 15% ಕಮಿಷನ್ ಆರೋಪ ಈಗ ಹೊಸ ತಿರುವ ಪಡೆದಿದೆ. ಆರೋಪ ಮಾಡಿ ಯೂಟರ್ನ್ ಹೊಡೆದ ಗುತ್ತಿಗೆದಾರರ (Contractors) ವಿರುದ್ಧ ಇದೀಗ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಹೊಸ ಬಾಂಬ್ ಸಿಡಿಸಿದ್ದಾರೆ. ರಾತ್ರೋ ರಾತ್ರಿ ಮಾಜಿ ಶಾಸಕರೊಬ್ಬರ ಮಧ್ಯಸ್ಥಿಕಯಲ್ಲಿ ಸಂಧಾನ ಮಾಡಿದ್ದಾರೆ ಎಂದು ಹೆಚ್‍ಡಿಕೆ ಹೊಸ ಆರೋಪ ಮಾಡಿದ್ದಾರೆ.

ಇದನ್ನೂ ಓದಿ : ನಮ್ಮ ಮೆಟ್ರೋ ಸಂಚಾರದಲ್ಲಿ ಭಾರಿ ವ್ಯತ್ಯಯ! – ಈ ದಿನದಂದು ನೇರಳೆ ಮಾರ್ಗದಲ್ಲಿ ಮೆಟ್ರೋ ಸೇವೆ ಇರಲ್ಲ!

ಹೆಚ್.ಡಿ ಕುಮಾರಸ್ವಾಮಿ ಹೇಳಿಕೆಯಿಂದ ಹಲವು ಪ್ರಶ್ನೆಗಳು ಮೂಡಿವೆ. ಅಂದು ಆರೋಪ ಮಾಡಿ ಇಂದು ಉಲ್ಟಾ ಹೊಡೆದಿದ್ದು ಕಂಟ್ರಾಕ್ಟರ್ಸ್ ಯಾಕೆ..?, ಗುತ್ತಿಗೆದಾರರ ನಡುವೆ ರಾತ್ರೋ ರಾತ್ರಿ ಸಂಧಾನ ಮಾಡಿದ್ದು ಯಾರು ಎಂದು ಪ್ರಶ್ನಿಸಿದ್ದಾರೆ. ಆದರೆ ಕುಮಾರಸ್ವಾಮಿ ಹಾಕಿದ ಸಂಧಾನದ ಬಾಂಬ್ ನಿಜವೋ? ಸುಳ್ಳೋ ಎಂಬುದು ಇನ್ನಷ್ಟೇ ಬೆಳಕಿಗೆ ಬರಬೇಕಿದೆ.

ಜೊತೆಗೆ ರಾತ್ರೋರಾತ್ರಿ ಸಂಧಾನ ಮಾಡಿದ ಮಾಜಿ ಶಾಸಕ ಯಾರು?, ಆ ಮಾಜಿ ಶಾಸಕ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಆಪ್ತರಾ?, ಗುತ್ತಿಗೆದಾರರಿಗೆ ಬಿಲ್ ಬಾಕಿ ಭರವಸೆ ಕೊಟ್ಟು ಸಂಧಾನ ಮಾಡಿದ್ರಾ?, ಆರೋಪ ವಾಪಸ್ ಪಡೆಯದೇ ಇದ್ದರೆ ಬಿಲ್ ಬಿಡುಗಡೆ ಮಾಡೊಲ್ಲ ಅಂತ ಬೆದರಿಕೆ ಹಾಕಿದ್ರಾ?, ಆ ಶಾಸಕನ ಬೆದರಿಕೆಗೆ ಯೂಟರ್ನ್ ಗೆ ಗುತ್ತಿಗೆದಾರರು ಉಲ್ಟಾ ಹೊಡೆದ್ರಾ ಎಂಬೆಲ್ಲ ಪ್ರಶ್ನೆ ಎದ್ದಿದೆ.

suddiyaana