ರೆಬಲ್‌ ನಾಯಕಿ ಸುಮಲತಾ ನಡೆ ಇನ್ನೂ ನಿಗೂಢ – ಕುಮಾರಸ್ವಾಮಿ ಭೇಟಿಗೆ ಡಿಕೆಶಿ ಟೀಕೆ

ರೆಬಲ್‌ ನಾಯಕಿ ಸುಮಲತಾ ನಡೆ ಇನ್ನೂ ನಿಗೂಢ – ಕುಮಾರಸ್ವಾಮಿ ಭೇಟಿಗೆ ಡಿಕೆಶಿ ಟೀಕೆ

ಕಳೆದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಅಖಾಡ ಭಾರಿ ಸದ್ದು ಮಾಡಿತ್ತು. ಈ ಬಾರಿಯೂ ಹೆಚ್​​ಡಿ ಕುಮಾರಸ್ವಾಮಿ ಸ್ಪರ್ಧೆಯಿಂದ ಮತ್ತೆ ಕಾವೇರಿದೆ. ಹಾಲಿ ಸಂಸದೆ ಸುಮಲತಾ ನಡೆ ಇನ್ನೂ ನಿಗೂಢವಾಗಿದೆ. ಏಪ್ರಿಲ್ 3ಕ್ಕೆ ನಿರ್ಧಾರ ತಿಳಿಸುವುದಾಗಿ ಸುಮಲತಾ ಹೇಳಿರುವುದು ಮಂಡ್ಯ ಯುದ್ಧಕ್ಕೆ ಹೊಸ ಆಯಾಮ ಕೊಟ್ಟಿದೆ. ಈ ಮಧ್ಯೆ ಸುಮಲತಾ ಮನವೊಲಿಕೆಗೆ ಖುದ್ದು ಕುಮಾರಸ್ವಾಮಿಯೇ ಅಖಾಡಕ್ಕಿಳಿದಿದ್ದಾರೆ.

ಇದನ್ನೂ ಓದಿ: ‘ನಾಯಿ’ ಎಂದಿದ್ಯಾರಿಗೆ ಸಿಧು?, ಮುಂಬೈನಲ್ಲೂ ಹಾರ್ದಿಕ್ ಟ್ರೋಲ್? – ಮುಂಬೈ ಇಂಡಿಯನ್ಸ್ ಒಳಗಿನ ರಹಸ್ಯ ಬಿಚ್ಚಿಟ್ಟಿದ್ಯಾರು?

ಹೆಚ್​ಡಿಕೆ, ಸುಮಲತಾರನ್ನು ಭೇಟಿಯಾಗಿದ್ದಾರೆ. ಸುಮಲತಾ ಅವರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಏಪ್ರಿಲ್ 4ರಂದು ನಾಮಪತ್ರ ಸಲ್ಲಿಸುತ್ತಿದ್ದೇನೆ. ಸಹಕಾರ ಕೊಡಿ ಅಂತಾ ಮನವಿ ಮಾಡಿದ್ದಾರೆ. ನಂತರ ಮಾತನಾಡಿದ ಅವ್ರು, ಸುಮಲತಾ ನನ್ನ ವೈರಿ ಅಲ್ಲ ಎಂದು ಹೇಳಿದ್ದಾರೆ.

ಸುಮಲತಾ ನನ್ನ ವೈರಿ ಅಲ್ಲ ಎಂಬ ಕುಮಾರಸ್ವಾಮಿ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ಗರಂ ಆಗಿದ್ದಾರೆ. ನಾನೇನು ವೈರಿಯಾ, ವಿಷ ಹಾಕಿದ್ನಾ ಎಂದು ತಿರುಗೇಟು ನೀಡಿದ್ದಾರೆ. ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಹೆಚ್​​ಡಿಕೆ, ಡಿಕೆಶಿಯಷ್ಟು ಹಿತೈಷಿ ಯಾರೂ ಇಲ್ಲ ಎಂದು ತಿರುಗೇಟು ನೀಡಿದ್ದಾರೆ. ಅತ್ತ ಸಂಸದೆ ಸಮಲತಾ ಕೂಡ ನಾವೇನಾದರೂ ವಿಷ ಹಾಕಿದ್ದೆವಾ ಎಂದು ಗುಡುಗಿದ್ದಾರೆ.

Shwetha M