ಚುನಾವಣೆ ಘೋಷಣೆಗೂ ಮೊದಲೇ ಡಿ.ಕೆ ಬ್ರದರ್ಸ್ ಅಕ್ರಮ! – ಹೆಚ್‌.ಡಿ ಕುಮಾರಸ್ವಾಮಿ ಗಂಭೀರ ಆರೋಪ

ಚುನಾವಣೆ ಘೋಷಣೆಗೂ ಮೊದಲೇ ಡಿ.ಕೆ ಬ್ರದರ್ಸ್ ಅಕ್ರಮ! – ಹೆಚ್‌.ಡಿ ಕುಮಾರಸ್ವಾಮಿ ಗಂಭೀರ ಆರೋಪ

ಲೋಕಸಭೆ ಚುನಾವಣೆ ಬರುತ್ತಿದ್ದಂತೆ ರಾಜಕೀಯ ನಾಯಕರು ಆರೋಪ ಪ್ರತ್ಯಾರೋಪ ಮಾಡುತ್ತಲೇ ಇದ್ದಾರೆ. ಇದೀಗ ಮಾಜಿ ಸಿಎಂ ಹೆಚ್‌. ಡಿ ಕುಮಾರಸ್ವಾಮಿ ಅವರು ಡಿಸಿಎಂ ಡಿಕೆ. ಶಿವಕುಮಾರ್‌ ಹಾಗೂ ಸಂಸದ ಡಿ.ಕೆ ಸುರೇಶ್‌ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಡಿ.ಕೆ ಬ್ರದರ್ಸ್ ಅಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಹೆಚ್‌ಡಿಕೆ, ಡಿ.ಕೆ ಬ್ರದರ್ಸ್ ವಿರುದ್ಧ ಮತ್ತೆ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ್ದಾರೆ. ಡಿ.ಕೆ ಶಿವಕುಮಾರ್ ಅವರಿಗೆ ಅಸಹನೆ ಶುರುವಾಗಿದೆ. ಲೋಕಸಭಾ ಚುನಾವಣೆಯ ದಿನಾಂಕ ಇನ್ನೂ ಘೋಷಣೆಯೇ ಆಗಿಲ್ಲ. ಆಗಲೇ ಗಿಫ್ಟ್‌ಗಳ ಹಂಚಿಕೆ ಆರಂಭಿಸಿದ್ದಾರೆ. ಅಭಿವೃದ್ಧಿ ಮಾಡಿದ್ರೆ ಯಾಕೆ ಗಿಫ್ಟ್ ಹಂಚುತ್ತಿದ್ದರು. ಅವರು ಕೊಳ್ಳೆ ಹೊಡೆದಿರುವ ಹಣದಲ್ಲೇ ಇದೆಲ್ಲಾ ಮಾಡುತ್ತಿದ್ದಾರೆ. ಬಾಕ್ಸ್‌ಗಳಲ್ಲಿ ಫೋಟೊಗಳನ್ನ ಹಾಕಿಕೊಂಡು ಚೈನಾದಿಂದ ಕುಕ್ಕರು, ಮಿಕ್ಸಿ ಹಂಚಲು ಮುಂದಾಗಿದ್ದಾರೆ ಎಂದು ಹೆಚ್‌ಡಿಕೆ ಕಿಡಿಕಾರಿದ್ದಾರೆ.

ಇದನ್ನೂ ಓದಿ: 916 ಗೋಲ್ಡ್ ನಲ್ಲಿ  ಕಂಚು!! -ಹಾಲ್ ಮಾರ್ಕ್ ಚಿನ್ನ  ಹೀಗೂ ಇರುತ್ತಾ?

ಇನ್ನು, ಕಲ್ಲು ಒಡೆಯುತ್ತೀವೋ ಕಸ ಎತ್ತುತ್ತಿವೋ ಅನ್ನೋ ಡಿ.ಕೆ ಸುರೇಶ್ ಅವರ ಹೇಳಿಕೆಗೆ ಕೂಡ ಕುಮಾರಸ್ವಾಮಿ ಅವರು ಟಾಂಗ್ ಕೊಟ್ಟಿದ್ದಾರೆ. ನನ್ನ ಜೀವನವೇ ಬೇರೆ, ಅವರ ಜೀವನವೇ ಬೇರೆ. ದೊಡ್ಡಆಲಹಳ್ಳಿಯಲ್ಲಿ ಜನರಿಗೆ ಯಾವ ರೀಲ್ ತೋರಿಸಿ ಬಂದ್ರಿ ಅನ್ನೋದು ಗೊತ್ತು. ಲೂಟಿ ಮಾಡಿ ಬೆಳೆದಿದ್ದೀರಿ. ನಾನು ಜನರ ಜೀವನ ಸರಿ ಮಾಡೋ ರೀಲ್​ಗಳನ್ನ ತೋರಿಸಿಕೊಂಡು ಬಂದಿದ್ದೀನಿ. ಕಲ್ಲು ಒಡೆದು, ಕುಟುಂಬಗಳಿಗೆ ಬೆದರಿಕೆ ಹಾಕಿದೋರು? ಅವ್ರಂತೆ ಕುಟುಂಬಗಳನ್ನ ಬೀದಿಗೆ ತಳ್ಳಿ ದುಡ್ಡು ಮಾಡಿದವನಲ್ಲ. ನಾನು ಓದುವಾಗಲೇ 3 ಲಾರಿಗಳನ್ನ ಹೊಂದಿದ್ದೆ. ಅವರ ಹಾಗೆ ನಾನು ಸಾಕಷ್ಟು ಕುಟುಂಬಗಳನ್ನ ಬೀದಿಗೆ ತಳ್ಳಿ ಅದರಲ್ಲಿ ದುಡ್ಡು ಮಾಡಿದವನಲ್ಲ. ಕಲ್ಲುಹೊಡೆದು ನೂರಾರು ಕುಟುಂಬಗಳಿಗೆ ಬೆದರಿಕೆ ಹಾಕಿದವರು ಯಾರು ಎಂದು ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

Shwetha M