ಹನುಮಂತು V/s ನಿವೇದಿತಾ ಗೌಡ.. ನಿವಿ ಉಗುರು.. ಮಾತಲ್ಲೇ ತಿವಿದ ಹನುಮ!
ಅನುಗೆ ಜವಾರಿ ಹುಲಿ ಹಿಂಗೆ ಹೇಳೋದಾ?

ಬಿಗ್ ಬಾಸ್ ಮಾಜಿ ಸ್ಪರ್ಧಿ ನಿವೇದಿತಾ ಗೌಡ.. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ.. ಸದಾ ಹಾಟ್ ಹಾಟ್ ಫೋಟೋ, ವಿಡಿಯೋ ಹಂಚಿಕೊಂಡು ನೆಟ್ಟಿಗರ ನಿದ್ದೆಗೆಡಿಸುತ್ತಿದ್ದಾರೆ.. ಇದೀಗ ಮತ್ತೆ ನಿವಿ ಕಿರುತೆರೆಗೆ ಎಂಟ್ರಿಕೊಟ್ಟಿದ್ದಾರೆ.. ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋನಲ್ಲಿ ನಿವೇದಿತಾ ಭಾಗವಹಿಸುತ್ತಿದ್ದು, ಮೊದಲ ವಾರದಲ್ಲೇ ಭಾರಿ ಸದ್ದು ಮಾಡಿದ್ದಾರೆ. ನಿವೇದಿತಾಗೆ ಹಳ್ಳಿ ಹೈದ ಹನುಮಂತ ಸರಿಯಾಗೇ ಟಕ್ಕರ್ ಕೊಟ್ಟಿದ್ದಾರೆ.. ಹನುಮಂತನ ಮಾತಿಗೆ ಅನುಪಮಾ ಕೂಡ ಶಾಕ್ ಆಗಿದ್ದಾರೆ. ಅಷ್ಟೇ ಅಲ್ಲಇದೀಗ ನಿವೇದಿತಾ ಉಗುರಿನ ವಿಚಾರಕ್ಕೆ ಟ್ರೋಲ್ ಗೆ ಆಹಾರ ಆಗಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ನಿವೇದಿತಾ ಟ್ರೋಲ್ ಗೆ ಆಹಾರ ಆಗಿದ್ದು ಯಾಕೆ ಅನ್ನೋ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: 2014ರಿಂದ ಕರ್ನಾಟಕದಲ್ಲಿ 1,652 ಕಿಮೀ ಹೊಸ ರೈಲು ಹಳಿ ನಿರ್ಮಾಣ
ಯಾರ್ ಎಷ್ಟೇ ಟ್ರೋಲ್ ಮಾಡ್ಲಿ.. ಕೆಟ್ಟದಾಗಿ ಕಾಮೆಂಟ್ ಮಾಡ್ಲಿ.. ನಾನಿರೋದೇ ಹೀಗೇ ಅನ್ನೋ ಮನೋಭಾವ ನಿವೇದಿತಾ ಗೌಡ ಅವರದ್ದು.. ಸೋಶಿಯಲ್ ಮೀಡಿಯಾ ಸ್ಟಾರ್ ಈಗ ರಿಯಾಲಿಟಿ ಶೋ ಸ್ಟಾರ್ ಆಗಿದ್ದಾರೆ. ಒಂದಾದ ಮೇಲೊಂದು ರಿಯಾಲಿಟಿ ಶೋನಲ್ಲಿ ಭಾಗವಿಸುತ್ತಿದ್ದಾರೆ. ಇದೀಗ ನಿವೇದಿತಾ ಗೌಡ ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದಾರೆ. ಆರಂಭದಿಂದಲೇ ತನ್ನ ಮಾತು, ಸ್ಟೈಲ್ ನಿಂದ ಹೈಲೈಟ್ ಆಗಿದ್ದಾರೆ. ಆದ್ರೆ ನಮ್ಮ ಜವಾರಿ ಹೈದ ಮಾತಲ್ಲೇ ನಿವೇದಿತಾಳನ್ನ ತಿವಿದಿದ್ದಾರೆ.
ಸರಿಗಮಪ ಖ್ಯಾತಿಯ ಹನುಮಂತ ಬಿಗ್ ಬಾಸ್ ಗೆ ಹೋಗಿದ್ದೇ ಹೋಗಿದ್ದು, ತಮ್ಮ ಸರಳತೆ, ಆಟದಿಂದ ವೀಕ್ಷಕರ ಮನ ಗೆದ್ದಿದ್ರು.. ಉತ್ತರ ಕರ್ನಾಟಕದ ಭಾಷೆಯಲ್ಲೇ ಮಾತಾಡ್ತಿದ್ದ ಹನುಮಂತ, ಸೈಲೆಂಟ್ ಆಗಿದ್ರು, ವೈಲೆಂಟ್ ಆಗೇ ಠಕ್ಕರ್ ಕೊಟ್ಟಿದ್ರು.. ಇರೋದನ್ನ ಇರೋ ತರ ಹೇಳ್ತಿದ್ದ ಹನುಮಂತನ ಯಾರು ದ್ವೇಷ ಮಾಡ್ತಿರ್ಲಿಲ್ಲ.. ಇದು ಕೂಡ ಆತನಿಗೆ ಪ್ಲಸ್ ಆಗಿತ್ತು. ಬಿಗ್ ಬಾಸ್ ಗೆದ್ದ ಹನುಮಂತ ಈಗ ‘ಬಾಯ್ಸ್ vs ಗರ್ಲ್ಸ್’ಶೋಗೆ ಬಂದಿದ್ದಾರೆ.. ನಿವೇದಿತಾ ಗೌಡಗೆ ಹನುಮಂತ ಖಡಕ್ ಉತ್ತರ ನೀಡಿದ್ದಾರೆ.
ಬಾಯ್ಸ್ ವರ್ಸಸ್ ಗರ್ಲ್ಸ್ ಶೋನ ಮೊದಲ ವಾರ ನಿವೇದಿತಾ ಗೌಡಳ ಎರಡರಿಂದ ಮೂರು ಇಂಚಿನ ಉಗುರು ಸಾಕಷ್ಟು ಗಮನ ಸೆಳೆಯಿತು. ಈ ಉಗುರಿನ ಬಗ್ಗೆ ಶೋನ ನಿರೂಪಕಿ ಅನುಪಮಾ ಗೌಡ ಇದರ ಗುಣಗಾನ ಮಾಡಿದ್ರು. ಇದ್ರಿಂದ ಖುಷಿ ಆದ ನಿವೇದಿತಾ, ನಾನು ಇದೇ ಉಗುರಲ್ಲಿ ಹಣ್ಣನ್ನು ಕಟ್ ಮಾಡುತ್ತೇನೆ, ಮುದ್ದೆಯನ್ನು ಕಟ್ ಮಾಡಿ ತಿನ್ನುತ್ತೇನೆ ಎಂದೆಲ್ಲ ಹೇಳಿದರು. ಅಲ್ಲದೆ, ಇದು ಸಂಪೂರ್ಣ ನ್ಯಾಚುರಲ್ ಉಗುರು ಎಂದು ಹೇಳಿದರು. ಇದನ್ನು ಕೇಳಿ ಹನುಮಂತ ಶಾಕ್ ಆಗಿದ್ದಾರೆ.. ಅಷ್ಟೇ ಅಲ್ಲ ನಿವೇದಿತಾಗೆ ಸರಿಯಾಗೆ ಠಕ್ಕರ್ ಕೊಟ್ಟಿದ್ದಾರೆ.
ಹೌದು, ನಿವೇದಿತಾ ಉಗುರಿನ ಸ್ಟೋರಿ ಕೇಳಿ ಅನುಪಮಾ ಶಾಕ್ ಆಗಿದ್ದಾರೆ. ಬಳಿಕ ಹನುಮಂತು ಬಳಿ ಇದ್ರ ಬಗ್ಗೆ ಮಾತನಾಡಿಸೋಣ ಎಂದು ಅನುಪಮಾ ಹೇಳಿದರು. ‘ಏನನ್ನಿಸುತ್ತಿದೆ ಹನುಮಂತು ಅವರೇ’ ಎಂದು ಅನುಪಮಾ ಕೇಳಿದರು. ‘ಅದು ಉಗುರಷ್ಟೇ. ನಾನು ಬಿಟ್ಟರೂ ಬರುತ್ತದೆ. ಕೆರೆದುಕೊಳ್ಳೋಕೆ ಒಂದೇ ಒಂದು ಉಗುರು ಬಿಟ್ಟುಕೊಂಡಿದ್ದೇನೆ ಎಂದರು. ಈ ಮೂಲಕ ಹನುಮಂತು ಎಲ್ಲರ ಬಾಯಿಯನ್ನು ಮುಚ್ಚಿಸಿದರು. ಇದೀಗ ಟ್ರೋಲ್ ಪೇಜ್ ಗಳು ಈ ವಿಡಿಯೋ ಇಟ್ಕೊಂಡು ಟ್ರೋಲ್ ಮಾಡ್ತಿದ್ದಾರೆ.. ನಿವೇದಿತಾಗೆ ಬುದ್ದಿ ಕಲಿಸಲು ಹನುಮಂತನೇ ಸರಿ.. ಇದೆಲ್ಲಾ ಆಕೆಗೆ ಬೇಕಿತ್ತಾ.. ಉಗುರು ಬಿಡೋದು ಓಕೆ.. ಅದನ್ನ ಊರಿಡೀ ಹೇಳ್ಕೊಂಡು ಬರೋದು ಯಾಕೆ ಅಂತಾ ವೀಕ್ಷಕರು ಕಾಮೆಂಟ್ ಮಾಡಿದ್ದಾರೆ.