ಮದುವೆ ವೇಳೆಯೇ ಹೃದಯಾಘಾತದಿಂದ ಮದುಮಗಳು ಬಲಿ – ತಂಗಿಗೇ ತಾಳಿ ಕಟ್ಟಿದ ಮದುಮಗ!

ಮದುವೆ ವೇಳೆಯೇ ಹೃದಯಾಘಾತದಿಂದ ಮದುಮಗಳು ಬಲಿ – ತಂಗಿಗೇ ತಾಳಿ ಕಟ್ಟಿದ ಮದುಮಗ!

ಮದುವೆ ಅಂದಮೇಲೆ ಸಂಭ್ರಮ ಕೇಳಬೇಕಾ. ಆದ್ರೆ ಇಲ್ಲಿ ಸಂಭ್ರಮದ ಹೊತ್ತಲ್ಲೇ ಸೂತಕ ಆವರಿಸಿದೆ. ಮದುಮಗಳು ಸಾವಿನ ಮನೆ ಸೇರಿದ್ದಾಳೆ. ವಧುವೊಬ್ಬಳು (Bride) ಮದುವೆ (Wedding) ದಿನವೇ ಹೃದಯಘಾತದಿಂದ ಮೃತಪಟ್ಟ ಘಟನೆ ಗುಜರಾತಿನ (Gujarat) ಸುಭಾಷ್‍ನಗರದ ಭಾವನಗರದಲ್ಲಿ ನಡೆದಿದೆ. ಭಾವನಗರದ ಭಗವಾನೇಶ್ವರ ಮಹಾದೇವ ದೇವಸ್ಥಾನದ ಮುಂಭಾಗದಲ್ಲಿ ಈ ಅಹಿತಕರ ಘಟನೆ ನಡೆದಿದೆ. ಜಿನಾಭಾಯಿ ರಾಥೋಡ್ ಎಂಬವರ ಪುತ್ರಿ ಹೇತಾಲ್ ಹಾಗೂ ನಾರಿ ಗ್ರಾಮದ ರಾಣಾಭಾಯ್ ಬೂತಭಾಯ್ ಅಲ್ಗೋಟಾರ್ ಅವರ ಮಗ ವಿಶಾಲ್ ಅವರಿಬ್ಬರಿಗೂ ಮದುವೆ ನಡೆಯುತ್ತಿತ್ತು.

ಇದನ್ನೂ ಓದಿ : ಅಕ್ವೇರಿಯಂನಲ್ಲಿದ್ದ ಮೀನು ಮೃತಪಟ್ಟಿದ್ದಕ್ಕೆ ಬಾಲಕ ಆತ್ಮಹತ್ಯೆ – ಮನೆಯ ಮಹಡಿ ಮೇಲೆ ಕಂಡಿದ್ದು ಭಯಾನಕ! 

ಕುಟುಂಬಸ್ಥರೆಲ್ಲಾ ಸೇರಿ ಮದುವೆಯ ವಿಧಿವಿಧಾನಗಳನ್ನು ನಡೆಸುತ್ತಿದ್ದಾಗ ಹೇತಾಲ್ ತಲೆ ಸುತ್ತಿ ಬಿದ್ದಿದ್ದಾಳೆ. ತಕ್ಷಣ ಆಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿ ಹೇತಾಲ್ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಹೇತಾಲ್‍ನ ಸಾವಿನಿಂದ ಕುಟುಂಬ ಶೋಕದಲ್ಲಿದ್ದರೂ ಮದುವೆಯ ಆಚರಣೆಯನ್ನು ಮುಂದುವರಿಸಲು ನಿರ್ಧರಿಸಿದ್ದಾರೆ. ಇದರಿಂದಾಗಿ ಹೇತಾಲ್‍ನ ತಂಗಿಗೆ ವರ ವಿಶಾಲ್ ತಾಳಿ ಕಟ್ಟಿದ್ದಾನೆ. ಸಮಾರಂಭ ಮುಗಿಯುವವರೆಗೂ ಹೇತಾಲ್ ಅವರ ಮೃತದೇಹವನ್ನು ಕೋಲ್ಡ್ ಸ್ಟೋರೇಜ್‍ನಲ್ಲಿ ಇಡಲಾಗಿತ್ತು ಎಂದು ವರದಿಯಾಗಿದೆ.

ಭಾವನಗರ ನಗರದ ಕಾರ್ಪೊರೇಟರ್ ಮತ್ತು ಮಾಲ್ಧಾರಿ ಸಮಾಜದ ಮುಖಂಡ ಲಕ್ಷ್ಮಣಭಾಯ್ ರಾಥೋಡ್ ಮಾತನಾಡಿ, ಘಟನೆ ಅತ್ಯಂತ ದುಃಖಕರವಾಗಿದೆ. ಮಗಳ ಸಾವಿನಿಂದ ಕುಟುಂಬವು ಆಘಾತಕ್ಕೊಳಗಾಗಿದ್ದರೂ, ವರ ಮತ್ತು ಅವರ ಕುಟುಂಬವನ್ನು ಬರಿಗೈಯಲ್ಲಿ ಕಳುಹಿಸದೆ ಮಾದರಿಯಾಗಿದ್ದಾರೆ ಎಂದರು.

suddiyaana