ಮದುವೆಗೂ ಮುನ್ನ ಸ್ಮೈಲ್ ಹೆಚ್ಚಿಸೋ ಗೀಳು! – ಶಸ್ತ್ರಚಿಕಿತ್ಸೆಗೆ ಒಳಗಾದ ಯುವಕ ಮಸಣ ಸೇರಿದ!

ಮದುವೆಗೂ ಮುನ್ನ ಸ್ಮೈಲ್ ಹೆಚ್ಚಿಸೋ ಗೀಳು! – ಶಸ್ತ್ರಚಿಕಿತ್ಸೆಗೆ ಒಳಗಾದ ಯುವಕ ಮಸಣ ಸೇರಿದ!

ಈಗಿನ ಕಾಲದಲ್ಲಿ ಅಂದವಾಗಿ ಕಾಣಬೇಕು ಅಂತಾ ಯುವಕ ಯುವತಿಯರು ಬಯಸುತ್ತಾರೆ. ಹೀಗಾಗಿ ಕೆಲ ಸರ್ಜರಿಗೆ ಒಳಗಾಗುತ್ತಾರೆ. ಇದೀಗ ಇಲ್ಲೊಬ್ಬ ಯುವಕ ಮದುವೆಯಲ್ಲಿ ಅಂದವಾಗಿ ಕಾಣಬೇಕೆಂದು ಸರ್ಜರಿ ಮಾಡಿಸಿಕೊಳ್ಳಲು ಹೋಗಿ ಮಸಣ ಸೇರಿದ್ದಾನೆ.

ಈ ಘಟನೆ ತೆಲಂಗಾಣದಲ್ಲಿ ನಡೆದಿದೆ. ಲಕ್ಷ್ಮಿನಾರಾಯಣ್ ವಿಂಜಮ್ ಎಂಬ ಯುವಕ ಮದುವೆಯಲ್ಲಿ ಅಂದಕಾಣಬೇಕು, ಮದುವೆ ವೇಳೆ ಮುಖದಲ್ಲಿ ನಗು ಹೆಚ್ಚಳ ಮಾಡಿಕೊಳ್ಳಬೇಕೆಂದು ಸ್ಮೈಲ್ ಡಿಸೈನಿಂಗ್ ಸರ್ಜರಿಗೆ ಒಳಗಾಗಿದ್ದಾನೆ. ಹೀಗಾಗಿ ಹೈದರಾಬಾದ್‌ ನಗರದ ಜ್ಯುಬಿಲಿ ಹಿಲ್ಸ್‌ನ FMS ಇಂಟರ್ ನ್ಯಾಷನಲ್ ಡೆಂಟಲ್ ಕ್ಲಿನಿಕ್‌ನಲ್ಲಿ ಸ್ಮೈಲ್ ಡಿಸೈನಿಂಗ್‌ ಸರ್ಜರಿಗೆ ಒಳಗಾಗಿದ್ದಾರೆ. ಸರ್ಜರಿ ವೇಳೆ ಲಕ್ಷ್ಮಿ ನಾರಾಯಣ್ ಪ್ರಜ್ಞೆ ಕಳೆದುಕೊಂಡಿದ್ದಾರೆ. ಡೆಂಟಲ್ ಕ್ಲಿನಿಕ್‌ನವರು ಲಕ್ಷ್ಮಿನಾರಾಯಣ್ ತಂದೆ ರಾಮುಲುಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಐಪಿಎಲ್ ಸಾರ್ವಕಾಲಿಕ ಶ್ರೇಷ್ಠ ಟೀಮ್‌ನಲ್ಲಿ ರೋಹಿತ್ ಶರ್ಮಾ ಇಲ್ಲ – ಅಭಿಮಾನಿಗಳಿಗೆ ಬೇಡವಾದರಾ ಹಿಟ್‌ಮ್ಯಾನ್‌

ಪ್ರಜ್ಞೆ ಕಳೆದುಕೊಂಡ ಮೇಲೆ ಲಕ್ಷ್ಮೀ ನಾರಾಯಣ್ ಅವರನ್ನ ಸಮೀಪದ ಮತ್ತೊಂದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದರೆ ಆಸ್ಪತ್ರೆಗೆ ತರುವಷ್ಟರಲ್ಲಿ ಲಕ್ಷ್ಮಿನಾರಾಯಣ್ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಅನಸ್ತೇಸಿಯಾ ಓವರ್ ಡೋಸ್‌ನಿಂದಲೇ ಲಕ್ಷ್ಮಿನಾರಾಯಣ್ ಪ್ರಾಣ ಬಿಟ್ಟಿದ್ದಾನೆ ಎಂದ ಮೃತನ ತಂದೆ ಆರೋಪ ಮಾಡಿದ್ದಾರೆ. ವೈದ್ಯರ ನಿರ್ಲಕ್ಷ್ಯದಿಂದ ತಮ್ಮ ಮಗ ಸಾವನ್ನಪ್ಪಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಮದುವೆಗೂ ಮುನ್ನ ಲಕ್ಷ್ಮಿ ನಾರಾಯಣ್ ಅವರು ಸ್ಮೈಲ್ ಡಿಸೈನಿಂಗ್ ಸರ್ಜರಿಗೆ ಪ್ಲಾನ್ ಮಾಡಿದ್ದಾರೆ. ತನ್ನ ಸ್ಮೈಲ್ ಡಿಸೈನಿಂಗ್ ಸರ್ಜರಿ ಬಗ್ಗೆ ತಂದೆಗೆ ಮಾಹಿತಿ ನೀಡಿರಲಿಲ್ಲ. ಸ್ಮೈಲ್ ಹೆಚ್ಚಿಸಿಕೊಳ್ಳುವ ಹುಚ್ಚಿನಿಂದ ಈಗ ಸಾವನ್ನಪ್ಪಿದ್ದಾರೆ. ಡೆಂಟಲ್ ಕ್ಲಿನಿಕ್ ವಿರುದ್ಧ ಜ್ಯುಬಿಲಿ ಹಿಲ್ಸ್ ಪೊಲೀಸರು ಕೇಸ್ ದಾಖಲಿಸಿದ್ದು, ಆರೋಪದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

Shwetha M