ಸರ್ಕಾರಿ ಹಣ ಸಂಸದನ ಮಗನ ಮದುವೆಗೆ ಬಳಕೆ – ತೆಲಂಗಾಣ ಬಿಜೆಪಿ ಸಂಸದನ ವಿರುದ್ಧ ವಿಪಕ್ಷಗಳು ಗರಂ

ಸರ್ಕಾರಿ ಹಣ ಸಂಸದನ ಮಗನ ಮದುವೆಗೆ ಬಳಕೆ –  ತೆಲಂಗಾಣ ಬಿಜೆಪಿ ಸಂಸದನ ವಿರುದ್ಧ ವಿಪಕ್ಷಗಳು ಗರಂ

ಕ್ಷೇತ್ರದ ಅಭಿವೃದ್ಧಿಗೆಂದು ರಿಲೀಸ್ ಆಗಿದ್ದ ಫಂಡ್, ಬಿಜೆಪಿ ಸಂಸದರ ಪುತ್ರನ ಮದುವೆಗೆ ಬಳಕೆಯಾಗಿದೆ. ಇನ್ನೂ ನಾಚಿಕೆಗೇಡಿನ ಸಂಗತಿ ಅಂದರೆ, ತಮ್ಮ ಘನಂದಾರಿ ಕೆಲಸವನ್ನು ಖುದ್ದು ಸಂಸದರೇ ಹೇಳಿಕೊಂಡಿದ್ದಾರೆ. ತೆಲಂಗಾಣ ಬಿಜೆಪಿ ಸಂಸದ ಸೋಯಂ ಬಾಪು ರಾವ್ ಈ ರೀತಿ ಸರ್ಕಾರದ ದುಡ್ಡನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಆದಿಲಾಬಾದ್‌ನಲ್ಲಿ ಬಿಜೆಪಿ ಪ್ರತಿನಿಧಿಗಳೊಂದಿಗೆ ನಡೆದ ಸಭೆಯಲ್ಲಿ ಸಂಸದರೇ ಈ ವಿಚಾರವನ್ನು ಬಾಯ್ಬಿಟ್ಟಿದ್ದಾರೆ.

ಇದನ್ನೂ ಓದಿ: ಬಸ್ ಸಾಮರ್ಥ್ಯಕ್ಕಿಂತ ದುಪ್ಪಟ್ಟು ಮಹಿಳೆಯರ ಪ್ರಯಾಣ – ಹೀಗೆ ಆದರೆ ಹೊಸ ನಿಯಮ ಜಾರಿ ಎಂದು ಸಾರಿಗೆ ಸಚಿವರ ಎಚ್ಚರಿಕೆ..!

ಕೇಂದ್ರದಿಂದ ಸಂಸದರ​ ನಿಧಿಗೆ ಎರಡನೇ ಬಾರಿಗೆ ಬಂದಿರುವ 2.5 ಕೋಟಿ ರೂಪಾಯಿ ಹಣದಲ್ಲಿ ಎಂಪಿಟಿಸಿ ಮತ್ತು ಕೌನ್ಸಿಲರ್‌ಗಳಿಗೆ ಒಂದಷ್ಟು ಹಣ ನೀಡಿದ್ದೇವೆ.. ಹಾಗೇ ಆ ಜಾಗದಲ್ಲಿ ನನಗೆ ಮನೆ ಇಲ್ಲದ ಕಾರಣ ಸ್ವಲ್ಪ ಹಣವನ್ನು ಮನೆ ನಿರ್ಮಾಣಕ್ಕೆ ಮತ್ತು ಸ್ವಲ್ಪ ಹಣವನ್ನು ನನ್ನ ಮಗನ ಮದುವೆಗೆ ಬಳಸಿದ್ದೇನೆ.. ಇದು ಸತ್ಯ. ಆದರೆ ನಾನು LADSನ ಒಂದು ಭಾಗವನ್ನು ಮಾತ್ರ ಬಳಸಿದ್ದೇನೆ. ಈ ಹಿಂದಿನ ಅನೇಕ ಸಂಸದರು ತಮ್ಮ ಸ್ವಂತ ಕೆಲಸಗಳಿಗೆ ಎಲ್ಲಾ ಹಣವನ್ನು ಬಳಸಿದ್ದರು ಎಂದು ತಮ್ಮ ಬೆನ್ನನ್ನ ತಾವೇ ತಟ್ಟಿಕೊಂಡಿದ್ದಾರೆ.. ಸದ್ಯ ಸಂಸದರ ಹೇಳಿಕೆ ವೈರಲ್ ಆಗಿದ್ದು, ವಿಪಕ್ಷಗಳು ಟೀಕಾಪ್ರಹಾರ ನಡೆಸುತ್ತಿದೆ.. ಸಂಸದರ ರಾಜೀನಾಮೆಗೂ ಆಗ್ರಹಿಸಿವೆ.. ಆದರೆ ಎಂಪಿಲ್ಯಾಡ್‌ನಲ್ಲಿ ಹಣ ಬಳಕೆಗೆ ಇರುವ ಮಾನದಂಡಗಳನ್ನು ಇಲ್ಲಿ ಸಂಸದರು ಉಲ್ಲೞಂಘನೆ ಮಾಡಿರುವುದು ಸ್ಪಷ್ಟವಾಗಿದೆ..

suddiyaana