ಬಿಗ್ ಬಾಸ್ ಎಷ್ಟು ಮುಖ್ಯವೋ.. ನನ್ನ ಉದ್ಯಮ ಕೂಡ ಅಷ್ಟೇ ಮುಖ್ಯ! –  ಅಸಲಿ ಕಾರಣ ಬಿಚ್ಚಿಟ್ಟ ಗೋಲ್ಡ್​ ಸುರೇಶ್

ಬಿಗ್ ಬಾಸ್ ಎಷ್ಟು ಮುಖ್ಯವೋ.. ನನ್ನ ಉದ್ಯಮ ಕೂಡ ಅಷ್ಟೇ ಮುಖ್ಯ! –  ಅಸಲಿ ಕಾರಣ ಬಿಚ್ಚಿಟ್ಟ ಗೋಲ್ಡ್​ ಸುರೇಶ್

ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಗೋಲ್ಡ್‌ ಸುರೇಶ್‌ ಕುಟುಂಬದಲ್ಲಿ ತುರ್ತು ಪರಿಸ್ಥಿತಿ ಉಂಟಾಗಿದೆ. ಈ ಕೂಡಲೇ ನೀವು ಹೊರಡಬೇಕು ಎಂದು ಬಿಗ್‌ ಬಾಸ್‌ ಅನೌನ್ಸ್‌ ಮಾಡಿದ್ರು.  ಬಿಗ್‌ ಬಾಸ್‌ ನಿಂದ ಸುರೇಶ್‌  ಹೊರ ಬರಲು ಕಾರಣ ಏನು ಅನ್ನೋದು ಸಾಕಷ್ಟು ಚರ್ಚೆ ನಡೆಯಿತು. ಆರಂಭದಲ್ಲಿ ಅವರ ತಂದೆ ನಿಧನ ಹೊಂದಿದ್ದಾರೆ ಎನ್ನಲಾಗಿತ್ತು. ಆ ಬಳಿಕ ಅದು ಸುಳ್ಳು ಎನ್ನುವ ವಿಚಾರ ತಿಳಿಯಿತು. ಆ ಬಳಿಕ ಬಂದಿದ್ದೇ ಸಾಲಬಾಧೆ ವಿಚಾರ. ಅವರು ಸಾಲ ಮಾಡಿಕೊಂಡಿದ್ದಕ್ಕೆ ಹೊರ ಬಂದರು ಎಂದು ಹೇಳಲಾಯಿತು. ಈಗ ಕಲರ್ಸ್ ಕನ್ನಡ ಇನ್​ಸ್ಟಾಗ್ರಾಮ್​ನಲ್ಲಿ ಲೈವ್​​ನಲ್ಲಿ ಬಂದ ಸುರೇಶ್ ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಸಂಸತ್‌ ಭವನ ಆವರಣದಲ್ಲಿ ದೊಡ್ಡ ಹೈಡ್ರಾಮಾ –  ಬಿಜೆಪಿ ಸಂಸದನನ್ನು ತಳ್ಳದ್ರಾ ರಾಹುಲ್‌ ಗಾಂಧಿ?

ಹೊರ ಬಂದ ವಿಚಾರಕ್ಕೆ ಸ್ಪಷ್ಟನೆ ನೀಡಿರುವ ಗೋಲ್ಡ್‌ ಸುರೇಶ್, ನಾನು ಹೊರಗೆ ಬಿಸಿನೆಸ್ ಹ್ಯಾಂಡಲ್ ಮಾಡ್ತಾ ಇದ್ದೆ. ಅದನ್ನು ನಾನೇ ನೋಡಿಕೊಳ್ಳುತ್ತಾ ಇದ್ದೆ. ನಾನು ಬಿಗ್ ಬಾಸ್​ಗೆ ಹೋಗುವಾಗ ಅದನ್ನು ಪತ್ನಿಗೆ ವಹಿಸಿ ಬಂದಿದ್ದೆ. ಆದರೆ, ಅದನ್ನು ಹ್ಯಾಂಡಲ್ ಮಾಡೋಕೆ ಅವರಿಗೆ ಆಗಿಲ್ಲ. ಒತ್ತಡ ಜಾಸ್ತಿ ಆಯ್ತು. ಎಲ್ಲಿ ನಿರ್ಧಾರ ತಗೊಳ್ಳುವಾಗ ಎಡವುತ್ತೇನೋ ಎನ್ನುವ ಭಯ ಇತ್ತು. ಹೀಗಾಗಿ ನಾನು ಹೊರ ಬಂದೆ. ನಾನು ಹೊರಗೆ ಪತ್ನಿಗೆ ಸಹಾಯ ಮಾಡಬೇಕಿತ್ತು. ಈಗ ಯಾವುದೇ ತೊಂದರೆಗಳಿಲ್ಲ. ಉದ್ಯಮವೂ ಸರಿಹಾದಿ​ಗೆ ಬಂದಿದೆ‌  ಎಂದು ಗೋಲ್ಡ್‌ ಸುರೇಶ್ ಹೇಳಿದ್ದಾರೆ.

ಬಿಗ್ ಬಾಸ್ ಮನೆ ಎಷ್ಟು ಮುಖ್ಯವೋ ಹೊರಗಿರುವ ಉದ್ಯಮ ಕೂಡ ಅಷ್ಟೇ ಮುಖ್ಯ ಎಂದು ಅವರು ಹೇಳಿದ್ದಾರೆ.‌ ನನಗೆ ಉದ್ಯಮ ಕೂಡ ಮುಖ್ಯ. ನನ್ನ ನಂಬಿರುವ ಸುಮಾರು ಕುಟುಂಬದವರಿಗೆ ನಾನು ಸಹಾಯ ಮಾಡಬೇಕಿತ್ತು ಎಂದಿದ್ದಾರೆ ಸುರೇಶ್.

ಹೊರಗೆ ಹರಿದಾಡುತ್ತಿರುವ ವದಂತಿ ಬಗ್ಗೆ ಮಾತನಾಡಿರುವ ಅವರು, ‘ಸಾಕಷ್ಟು ಸುದ್ದಿ ಹರಿದಾಡುತ್ತಿದೆ. ಸುದ್ದಿ ಮಾಡುವವರು ಮಾಡಲಿ. ನಾನು ಏನು ಎಂಬುದು ಎಲ್ಲರಿಗೂ ಗೊತ್ತಿದೆ. ನನ್ನ ಆಪ್ತರಿಗೆ ನನ್ನ ಬಗ್ಗೆ ಗೊತ್ತಿದೆ. ನನಗೆ ಅಷ್ಟು ಸಾಕು. ಕಾಲಿನ ಗಾಯದಿಂದ ತುಂಬಾ ವೀಕ್ ಆಗಿ ಬಂದಿದ್ದೇನೆ. ಆರೋಗ್ಯದ ಸಮಸ್ಯೆ ಕಾಡ್ತಾ ಇತ್ತು. ಆರೋಗ್ಯ ಸುಧಾರಿಸುತ್ತಿದೆ. ಎಲ್ಲರೂ ತುಂಬಾನೇ ಸಪೋರ್ಟ್ ಮಾಡಿದ್ದೀರಾ. ಎಲ್ಲರಿಗೂ ಥ್ಯಾಂಕ್ಸ್. ಮತ್ತೆ ಅವಕಾಶ ಸಿಕ್ಕರೆ ಹೋಗುತ್ತೇನೆ. ನಿರಾಸೆ ಆಗಿದ್ರೆ ಕ್ಷಮಿಸಿ  ಎಂದಿದ್ದಾರೆ ಸುರೇಶ್.

Shwetha M