ದೇವರೇ.. ನಾನು ಪ್ರಪಂಚದಲ್ಲೇ ಸರ್ವಾಂಗ ಸುಂದರನಾಗಬೇಕು..! – ದೇವಿ ಮುಂದೆ ಭಕ್ತನ ಹೀಗೊಂದು ಬೇಡಿಕೆ

ದೇವರೇ.. ನಾನು ಪ್ರಪಂಚದಲ್ಲೇ ಸರ್ವಾಂಗ ಸುಂದರನಾಗಬೇಕು..! – ದೇವಿ ಮುಂದೆ ಭಕ್ತನ ಹೀಗೊಂದು ಬೇಡಿಕೆ

ಯಾವುದಾದರೂ ಕಷ್ಟ ಬಂದಾಗ ಅದನ್ನು ಪರಿಹರಿಸು ಎಂದು ದೇವರ ಮೊರೆಹೋಗುತ್ತೇವೆ. ಎಕ್ಸಾಂ ವೇಳೆ ದೇವರೇ.. ಪಾಸ್‌ ಮಾಡು, ಪರೀಕ್ಷೆ ಸುಲಭ ಇರಲಿ ಅಂತಾ ಬೇಡಿಕೊಳ್ಳುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ನಾನು ಪ್ರಪಂಚದಲ್ಲೇ ಸರ್ವಾಂಗ ಸುಂದರನಾಗಬೇಕು..! ಅಂತಾ ದೇವರಿಗೆ ಪತ್ರಬರೆದಿದ್ದಾನೆ.

ಇದನ್ನೂ ಓದಿ: ದೇವೀರಮ್ಮನ ದೇಗುಲಕ್ಕೆ ಬರುವ ಭಕ್ತರಿಗೆ ಡ್ರೆಸ್ ಕೋಡ್ – ಪ್ರೀ ವೆಡ್ಡಿಂಗ್ ಶೂಟ್, ರೀಲ್ಸ್‌ಗೂ ನಿಷೇಧ

ಹೌದು.. ಈ ಘಟನೆ ನಡೆದಿದ್ದು, ಕಳಸದ ಕಳಸೇಶ್ವರ ಸ್ವಾಮಿ ದೇವಸ್ಥಾನದಲ್ಲಿ. ಅನಾಮಿಕ ಭಕ್ತನೊಬ್ಬ ಪತ್ರ ಬರೆದು ದೇವಿಯ ಕಾಣಿಕೆ ಹುಂಡಿಗೆ ಹಾಕಿದ್ದಾನೆ. ಇದು ಭಾರಿ ವೈರಲ್‌ ಆಗಿದೆ.  “ತಾಯಿ…. ನಾನು ಪ್ರಪಂಚದಲ್ಲೇ ಸರ್ವಾಂಗ ಸುಂದರನಾಗಬೇಕು…! ನನ್ನ ಸೌಂದರ್ಯದ ಹೊಣೆ ನಿಮ್ಮ ಜವಾಬ್ದಾರಿ ಎಂದು ಪತ್ರ ಬರೆದಿದ್ದಾನೆ. ದೇವಸ್ಥಾನದ ಕಾಣಿಕೆ ಹುಂಡಿಯ ಹಣವನ್ನು ಅಧಿಕಾರಿಗಳು ಲೆಕ್ಕ ಮಾಡುವ ವೇಳೆ ಈ ಪತ್ರ ಪತ್ತೆಯಾಗಿದೆ.

ರಕ್ಷಿತ್ ಕೆ.ಆರ್ ಎಂಬಾತ ಗಿರಿಜಾ ದೇವಿಗೆ ಈ ಪತ್ರ ಬರೆದಿದ್ದು,  ನಾನು ಖ್ಯಾತ ನಟ, ಫ್ಯಾಷನ್ ಮಾಡೆಲ್ ಆಗಬೇಕು..! ಸರ್ವ ಸುಂದರಿಯಾದ ಗಿರಿಜಾದೇವಿಯಿಂದ ಆಶೀರ್ವಾದ ಬಯಸುತ್ತೇನೆ. ನನ್ನ ಕನಸನ್ನ ನನಸು ಮಾಡುವ ಜವಾಬ್ದಾರಿ ನಿಮ್ಮದು. ಈ ನಿನ್ನ ಭಕ್ತನ ಬೇಡಿಕೆ, ಪ್ರಾರ್ಥನೆಯನ್ನ ಈಡೇರಿಸು ತಾಯಿ  ಎಂದು ಬರೆದಿದ್ದಾನೆ. ಸದ್ಯ ಭಕ್ತ, ದೇವಿಯ ಮುಂದೆ ಇಟ್ಟಿರುವ ಬೇಡಿಕೆ ಪತ್ರ ಭಾರಿ ವೈರಲ್‌ ಆಗಿದೆ.

suddiyaana