ಗಿಣಿರಾಮ ಮಹಾ ಮುಕ್ತಾಯ – ಆಯಿ ಸಾಹೇಬರ ಅಂತ್ಯದೊಂದಿಗೆ ಧಾರಾವಾಹಿ ಕೊನೆಗೊಳ್ಳುತ್ತಾ?

ಗಿಣಿರಾಮ ಮಹಾ ಮುಕ್ತಾಯ – ಆಯಿ ಸಾಹೇಬರ ಅಂತ್ಯದೊಂದಿಗೆ ಧಾರಾವಾಹಿ ಕೊನೆಗೊಳ್ಳುತ್ತಾ?

ಕಲರ್ಸ್ ಕನ್ನಡ ವಾಹಿನಿಯ ಮತ್ತೊಂದು ಧಾರಾವಾಹಿ ಮುಕ್ತಾಯದ ಹಂತಕ್ಕೆ ಬಂದಿದೆ. ಉತ್ತರ ಕರ್ನಾಟಕ ಭಾಷೆಯ ಸೊಗಡಿನಲ್ಲಿ ಮೂಡಿಬರುತ್ತಿದ್ದ ಗಿಣಿರಾಮ ಧಾರಾವಾಹಿ ತನ್ನದೇ ಆದ ಪ್ರೇಕ್ಷಕ ವರ್ಗವನ್ನು ಹೊಂದಿತ್ತು. ಆಯಿಸಾಹೇಬರ ಗತ್ತು, ಶಿವರಾಮನ ಖದರ್, ಮಹತಿಯ ಬುದ್ದಿವಂತಿಕೆ ವೀಕ್ಷಕರಿಗೂ ಇಷ್ಟವಾಗಿತ್ತು. ಅಭಿಮಾನಿಗಳ ಹೃದಯ ಗೆದ್ದಿರುವ ಗಿಣಿರಾಮ ಧಾರಾವಾಹಿ ಈ ವಾರವೇ ಕೊನೆಯಾಗಲಿದೆ. ಸದ್ಯದಲ್ಲೇ ಗಿಣಿರಾಮ ಧಾರಾವಾಹಿ ಮುಕ್ತಾಯವಾಗಲಿದೆ ಎಂಬ ಸುದ್ದಿ ಅನೇಕ ದಿನಗಳಿಂದ ಕೇಳಿಬರುತ್ತಲೇ ಇತ್ತು. ಈಗ ಸ್ವತಃ ವಾಹಿನಿಯೇ ಗಿಣಿರಾಮ ಮಹಾ ಮುಕ್ತಾಯ ಎಂಬ ಪ್ರೋಮೋ ಬಿಡುಗಡೆ ಮಾಡುವ ಮೂಲಕ ಈ ಸುದ್ದಿಯನ್ನು ಅಧಿಕೃತಗೊಳಿಸಿದೆ.

ಇದನ್ನೂ ಓದಿ:  ಎಣ್ಣೆ ಮತ್ತಲ್ಲಿ ಶ್ರೇಷ್ಠಾ ಕೊರಳಿಗೆ ತಾಳಿ ಕಟ್ಟಿದನಾ ತಾಂಡವ್? – ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಮಹತ್ವದ ತಿರುವು  

ಧಾರಾವಾಹಿಯ ಪ್ರೋಮೋ ಕೂಡಾ ಸಹಜವಾಗಿಯೇ ಗಿಣಿರಾಮ ಸೀರಿಯಲ್ ಪ್ರಿಯರಿಗೆ ಯಾಕೋ ಬೇಸರ ಮೂಡಿಸಿದೆ. ಸಾಮಾನ್ಯವಾಗಿ ಸಿನಿಮಾ ಆಗಲಿ, ಧಾರಾವಾಹಿಯಾಗಲಿ ಕ್ಲೈಮ್ಯಾಕ್ಸ್ ಸುಖಾಂತ್ಯ ಕಾಣಬೇಕು ಅನ್ನೋ ಆಸೆ ಪ್ರೇಕ್ಷಕರಿಗೆ ಇರುತ್ತೆ. ಆದರೆ, ಪ್ರೋಮೋ ನೋಡಿದರೆ ಆಯಿ ಸಾಹೇಬ ಸಾವಿನ ಮೂಲಕ ಧಾರಾವಾಹಿ ಎಂಡ್ ಆಗಲಿದೆ. ಇನ್ನು ಧಾರಾವಾಹಿ ವಿಷಯಕ್ಕೆ ಬರುವುದಾದರೆ, ಆಯಿ ಸಾಹೇಬರಿಗೆ ಮಹತಿಯೇ ತನ್ನ ಮಗಳು ಎಂಬ ವಿಚಾರ ಗೊತ್ತಾಗಿದೆ. ಮಹತಿ ಬಾಯಿಂದ ಅವ್ವಾ ಅಂತಾ ಹೇಳಿಸಿಕೊಳ್ಳುವ ಆಸೆ ಆಯಿ ಸಾಹೇಬರದ್ದು. ಒಂದು ಬಾರಿಯಾದರೂ ಅವ್ವಾ ಅಂತಾ ಕರೀ ಮಗಳೇ ಅಂತಾ ಮಹತಿ ಬಳಿ ಆಯಿ ಸಾಹೇಬ ಮನವಿ ಮಾಡುತ್ತಾರೆ. ಇದೇ ಹೊತ್ತಲ್ಲಿ ಮಹತಿಯನ್ನು ರೌಡಿಗಳು ಎತ್ತಾಕಿಕೊಂಡು ಹೋಗಿದ್ದಾರೆ. ಪತ್ನಿಯನ್ನು ಕಾಪಾಡಲು ಬಂದ  ಶಿವರಾಮ್ ಕೂಡ ರೌಡಿಗಳಿಂದ ತೊಂದರೆಗೆ ಸಿಲುಕಿದ್ದಾನೆ. ಕಾದಾಟದ ನಡುವೆ ರಣಧೀರ ಗುಂಡು ಹಾರಿಸುತ್ತಾನೆ. ಆ ಗುಂಡೇಟು ಮಹತಿಗಾ.. ಇಲ್ಲಾ.. ಆಯಿ ಸಾಹೇಬರಿಗಾ ಅನ್ನೋ ಕುತೂಹಲ ಹೆಚ್ಚಾಗಿದೆ.

ಶಿವರಾಮ ಪಾತ್ರದಲ್ಲಿ ರಿತ್ವಿಕ್ ಮಾತಾಡ್ ಕಾಣಿಸಿಕೊಂಡಿದ್ದಾರೆ. ಮಹತಿಯಾಗಿ ನಯನಾ ಮಿಂಚಿದ್ದಾರೆ.

suddiyaana