ಗಣೇಶನ ನೈವೇದ್ಯದ ಲಡ್ಡು ಪ್ರಸಾದ ಬರೋಬ್ಬರಿ 32 ಸಾವಿರ ರೂಪಾಯಿಗೆ ಹರಾಜು!

ಗಣೇಶನ ನೈವೇದ್ಯದ ಲಡ್ಡು ಪ್ರಸಾದ ಬರೋಬ್ಬರಿ 32 ಸಾವಿರ ರೂಪಾಯಿಗೆ ಹರಾಜು!

ದೇಶದಲ್ಲೆಡೆ ಗಣೇಶ ಚತುರ್ಥಿಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗಿದೆ. ಈ ವೇಳೆ ಗಣಪತಿಗೆ ನೈವೇದ್ಯ ರೂಪದಲ್ಲಿ ವಿವಿಧ ಬಗೆಯ ತಿಂಡಿಗಳನ್ನು ಅರ್ಪಿಸಲಾಗುತ್ತದೆ. ಇದೀಗ ಗಣಪತಿಗೆ ಅರ್ಪಿಸಿದ್ದ ಲಡ್ಡು ಪ್ರಸಾದವೊಂದು ಭಾರಿ ಬೆಲೆಗೆ ಹಾರಾಜು ಆಗಿದೆ.

ಗಣೇಶನ ಹಬ್ಬದ ಪ್ರಯುಕ್ತ ಪ್ರಯುಕ್ತ ಪಾವಗಡ ನಗರದ ಕಲ್ಮನ್ ಚೆರುವು ಪ್ರದೇಶದಲ್ಲಿ ಪ್ರತಿಷ್ಠಾಪಿಸಲಾದ ಗಣೇಶನ ದೇವಸ್ಥಾನದ ಬಳಿ ಗುರುವಾರ ಸಂಜೆ ವಿಶೇಷ ಲಡ್ಡು ಪ್ರಸಾದ ಹರಾಜು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಲಡ್ಡು ಬರೋಬ್ಬರಿ 32,700 ಮಾರಾಟವಾಗಿದೆ. ಸ್ಥಳೀಯ ನಿವಾಸಿಗಳಾದ ಗೋಪಾಲಪ್ಪ ಎಂಬುವರಿಗೆ ಲಡ್ಡು ಲಭಿಸಿದೆ. 32,700 ರೂಪಾಯಿ ಹಣವನ್ನು ನೀಡಿ  ಗೋಪಾಲಪ್ಪ ಲಡ್ಡನ್ನು ಖರೀದಿಸಿದ್ದಾರೆ. ‌

ಇದನ್ನೂ ಓದಿ: ಡ್ರೈವರ್‌ ಇಲ್ಲದೇ ಓಡುತ್ತೆ ನಮ್ಮ ಮೆಟ್ರೋ! – ಹೊಸ ಸೇವೆ ಶೀಘ್ರದಲ್ಲೇ ಆರಂಭ!

ಪ್ರತಿ ವರ್ಷ ಗಣೇಶನ ನೈವೇದ್ಯಕ್ಕಾಗಿ ತಯಾರಿಸಲಾಗುವ ಲಡ್ಡನ್ನು ಹಜಾರು ಹಾಕುವುದು ವಾಡಿಕೆ. ಗಣೇಶನ ಪ್ರತಿಷ್ಟಾಪನೆ ದಿನ ಈ ಲಡ್ಡು ತಯಾರಿಸಿ ಗಣೇಶನಿಗೆ ನೈವೇದ್ಯಕ್ಕೆ ಇಡಲಾಗುತ್ತದೆ.‌ ಪ್ರತಿದಿನ ಗಣೇಶ ಹಾಗೂ ನೈವೇದ್ಯಕ್ಕೆ ಪೂಜೆ ಸಲ್ಲಿಸಿಕೊಂಡು ಬಂದು, ಗಣೇಶನ ವಿಸರ್ಜನೆಯ ದಿನ ಈ ಲಡ್ಡನ್ನು ಹರಾಜು ಹಾಕಲಾಗುತ್ತದೆ.‌ ಗಣೇಶನ‌ ಪೂಜೆಯಲ್ಲಿ ಪಾಲ್ಗೊಳ್ಳುವ ಕಲ್ಮನ್ ಚೆರುವು ಪ್ರದೇಶದ ಜನರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ಲಡ್ಡಿನ ದರವನ್ನು ಕೂಗುತ್ತಾರೆ. ಗಣೇಶ‌ನ ಲಡ್ಡನ್ನು ಪಡೆಯಲು ಪೈಪೋಟಿ ಮೇಲೆ ಹರಾಜು ಕೂಗಲಾಗುತ್ತದೆ. ಗುರುವಾರ ಕೂಡ ಲಡ್ಡು ಪ್ರಸಾದವನ್ನು ಹರಾಜಿಗೆ ಇಡಲಾಗಿತ್ತು. ಮಧ್ಯರಾತ್ರಿ ಸುಮಾರು 2 ಗಂಟೆವರೆಗೂ ಹರಾಜು ಪ್ರಕ್ರಿಯೆ ನಡೆದಿದೆ.‌ ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಮೊತ್ತಕ್ಕೆ ಗಣೇಶನ ನೈವೇದ್ಯದ ಲಡ್ಡು ಹರಾಜಾಗಿದೆ.‌ ಇನ್ನು ಇದರಲ್ಲಿ ಜಯಗಳಿಸಿದ ಗೋಪಾಲಪ್ಪ ಅವರನ್ನು ಗಣೇಶ ಕಮಿಟಿ ವತಿಯಿಂದ ಸನ್ಮಾನಿಸಿದ್ದಾರೆ.

Shwetha M