‘ಹುಮ್ಮಸ್ಸಿನಲ್ಲಿ ನನಗೂ ಫ್ರೀ, ನಿನಗೂ ಫ್ರೀ ಎಂದಿದ್ದಾರೆ’ – ಶಾಸಕ ಶಿವಲಿಂಗೇಗೌಡ

‘ಹುಮ್ಮಸ್ಸಿನಲ್ಲಿ ನನಗೂ ಫ್ರೀ, ನಿನಗೂ ಫ್ರೀ ಎಂದಿದ್ದಾರೆ’ – ಶಾಸಕ ಶಿವಲಿಂಗೇಗೌಡ

ಹುಮ್ಮಸ್ಸಿನಲ್ಲಿ ನನಗೂ ಫ್ರೀ, ನಿನಗೂ ಫ್ರೀ ಎಂದು ಹೇಳಿದ್ದಾರೆ. ಬಿಪಿಎಲ್ ಕಾರ್ಡ್‌ ಹೊಂದಿರುವವರಿಗೆ ಮಾತ್ರ ಗ್ಯಾರಂಟಿ ಯೋಜನೆಗಳು ಎಂದು ವಿಧಾನಸೌಧದಲ್ಲಿ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ. ರಾಜ್ಯದ ಎಲ್ಲರಿಗೂ ಉಚಿತ ಕೊಡಲು ಆಗಲ್ಲ. ಬಿಪಿಎಲ್ ಕಾರ್ಡ್ ದಾರರಿಗೆ ಮಾತ್ರ ಗ್ಯಾರಂಟಿ ಯೋಜನೆಗಳು. ಮಧ್ಯಮ ವರ್ಗಕ್ಕೆ ಅನುಕೂಲವಾಗುವಂತೆ ಗ್ಯಾರಂಟಿಗಳನ್ನ ಜಾರಿಗೆ ತಂದಿರುವುದು ಎಂದು ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ.

ಇದನ್ನೂ ಓದಿ:  ಸಿದ್ದು ಭೇಟಿಗೆ ವರುಣಾ ಕ್ಷೇತ್ರದ ಜನರಿಗೆ ಮುಕ್ತ ಅವಕಾಶ – ಐಡಿ ಚೆಕ್ ಮಾಡಿ ಬಿಡಲು ಪೊಲೀಸರಿಗೆ ಸೂಚನೆ!

ಈ ಗ್ಯಾರಂಟಿಗಳು ಬಡವರಿಗೋಸ್ಕರ ಇರುವುದು. ಮಾಜಿ ಸಚಿವ ಆರ್. ಅಶೋಕ್ ಬಿಲ್ ಕಟ್ಟಲ್ಲ ಅಂದ್ರೆ, ಬಿಡೋರು ಯಾರು ಎಂದು ಶಿವಲಿಂಗೇಗೌಡ ಹೇಳಿದ್ದಾರೆ. ಇನ್ನು ಸಚಿವ ಸ್ಥಾನ ಸಿಗದ ಬಗ್ಗೆಯೂ ಶಿವಲಿಂಗೇಗೌಡ ಬೇಸರ ಹೊರ ಹಾಕಿದ್ದಾರೆ. ನಾನು ಮಿನಿಸ್ಟರ್ ಆಗಬೇಕಿತ್ತು. ಎಲ್ಲಾ ಹಣೆ ಬರಹ ಎಂದಿದ್ದಾರೆ. ಈ ಮೂಲಕ ಪರೋಕ್ಷವಾಗಿಯೇ ಶಿವಲಿಂಗೇಗೌಡ  ಅಸಮಾಧಾನ ವ್ಯಕ್ತಪಡಿಸಿದ್ದಾರೆ.

suddiyaana