ಹೆತ್ತವರ ಬಳಿ ಹೋದರೆ ಹೇಸಿಗೆ ಆಗ್ತೀಯಾ ಎಂದು ಗುರೂಜಿ ಹೇಳಿದ ಮಾತು ಕಾಡಿತಾ ? – ಡ್ರೋನ್ ಆಸ್ಪತ್ರೆಗೆ ಸೇರಲು ಅಸಲಿ ಕಾರಣ ಇದೇನಾ?

ಹೆತ್ತವರ ಬಳಿ ಹೋದರೆ ಹೇಸಿಗೆ ಆಗ್ತೀಯಾ ಎಂದು ಗುರೂಜಿ ಹೇಳಿದ ಮಾತು ಕಾಡಿತಾ ?  – ಡ್ರೋನ್ ಆಸ್ಪತ್ರೆಗೆ ಸೇರಲು ಅಸಲಿ ಕಾರಣ ಇದೇನಾ?

ಕನ್ನಡದ ಬಿಗ್​ಬಾಸ್ ರಿಯಾಲಿಟಿ ಶೋ ಶುರುವಾದಾಗಿನಿಂದ್ಲೂ ಮನರಂಜನೆಗಿಂತ ಬರೀ ವಿವಾದಗಳಿಂದ್ಲೇ ಸುದ್ದಿಯಾಗ್ತಿದೆ. ದಿನಬೆಳಗಾದ್ರೆ ಯಾವ ಸ್ಪರ್ಧಿಗಳು ಜಗಳ ಮಾಡಿಕೊಳ್ತಾರೋ, ಯಾವ ಟಾಸ್ಕ್​ನಲ್ಲಿ ಯಾರಿಗೆ ಏನಾಗುತ್ತೋ ಅಂತಾ ಪ್ರೇಕ್ಷಕರು ಬೈದುಕೊಂಡೇ ಶೋ ನೋಡ್ತಾರೆ. ರಾಕ್ಷಸರು ಗಂಧರ್ವರು ಟಾಸ್ಕ್​ನಲ್ಲಂತೂ ಸಂಗೀತಾ ಶೃಂಗೇರಿ ಹಾಗೂ ಡ್ರೋನ್ ಪ್ರತಾಪ್ ಕಣ್ಣಿಗೆ ಡಿಟರ್ಜೆಂಟ್ ಪೌಡರ್ ಹಾಕಲಾಗಿತ್ತು. ಇದ್ರಿಂದ ಇಬ್ಬರು ಕೂಡ ಆಸ್ಪತ್ರೆ ಸೇರಿ ವಾರಗಟ್ಟಲೆ ನರಕ ಅನುಭವಿಸಿದ್ರು. ಇದೀಗ ಮತ್ತೊಬ್ಬ ಸ್ಪರ್ಧಿ ಡ್ರೋನ್ ಪ್ರತಾಪ್ ಆಸ್ಪತ್ರೆ ಪಾಲಾಗಿದ್ದಾರೆ. ಫುಡ್​ ಪಾಯ್ಸನ್​ನಿಂದ ಆಸ್ಪತ್ರೆ ಸೇರಿದ್ದು ಆತ್ಮಹತ್ಯೆ ಯತ್ನ ಎಂಬ ಸುದ್ದಿಯೂ ಹರಿದಾಡ್ತಿದೆ. ಹಾಗಾದ್ರೆ ಫುಡ್ ಪಾಯ್ಸನ್ ಆಯ್ತಾ..? ಅಥವಾ ಆತ್ಮಹತ್ಯೆ ಯತ್ನನಾ..? ಡ್ರೋನ್ ಪೋಷಕರು ಆಸ್ಪತ್ರೆಗೆ ಬಂದಿದ್ದೇಕೆ..? ವೈದ್ಯರು ಹೇಳಿದ್ದೇನು..? ಇದೆಲ್ಲದರ ವಿವರವಾದ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಡ್ರೋನ್ ಪ್ರತಾಪ್ ಅಸ್ಪಸ್ಥ- ಬಿಗ್‌ಬಾಸ್ ಮನೆಯಿಂದ ತಕ್ಷಣವೇ ಆಸ್ಪತ್ರೆಗೆ ಶಿಫ್ಟ್

ಬಿಗ್ ಬಾಸ್ ಶೋ 14ನೇ ವಾರಕ್ಕೆ ಕಾಲಿಟ್ಟಿದ್ದು, ಕೇವಲ 9 ಮಂದಿ ಮಾತ್ರ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದಾರೆ. 9 ಜನರ ಪೈಕಿ ಡ್ರೋನ್ ಪ್ರತಾಪ್ ಟಾಪ್ 5ನಲ್ಲಿ ಬರುವ ಸಾಧ್ಯತೆ ಹೆಚ್ಚಿದೆ. ಡ್ರೋನ್ ಪ್ರತಾಪ್​ಗೆ ಹೆಚ್ಚಿನ ಅಭಿಮಾನಿಗಳಿದ್ದು, ಹೆಚ್ಚೆಚ್ಚು ವೋಟ್ ಬರ್ತಿದೆ. ಆದ್ರೀಗ ಅದೇ ಪ್ರತಾಪ್ ಆಸ್ಪತ್ರೆ ಪಾಲಾಗಿದ್ದು, ಆತ್ಮಹತ್ಯೆ ಯತ್ನ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿದೆ. ಘಟನೆ ಬಗ್ಗೆ ಕಲರ್ಸ್ ಕನ್ನಡ ವಾಹಿನಿ ಸ್ಪಷ್ಟನೆ ಕೂಡ ನೀಡಿದೆ.

ಡ್ರೋನ್ ಗೆ ಫುಡ್ ಪಾಯ್ಸನ್!

ಬಿಗ್ ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ಆರೋಗ್ಯದಲ್ಲಿ ಏರು ಪೇರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ತೀವ್ರ ಅಸ್ವಸ್ಥರಾಗಿದ್ದ ಪ್ರತಾಪ್​ರನ್ನ ಬೆಂಗಳೂರನ ಶ್ರೀ ಸಂಜೀವಿನಿ ಆಸ್ಪತ್ರೆಗೆ ದಾಖಲಾಗಿಸಿತ್ತು. ಪ್ರತಾಪ್​ಗೆ ಚಿಕಿತ್ಸೆ ನೀಡಿದ ವೈದ್ಯರು ಏನಾಯ್ತು ಅನ್ನೋ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಪ್ರತಾಪ್​ ಬಂದಾಗ ಅವರಿಗೆ ವಾಂತಿ ಮತ್ತು ಬೇಧಿ ಆಗಿತ್ತು. ಅವರಿಗೆ ಫುಡ್ ಪಾಯ್ಸನ್ ಆಗಿತ್ತು, ಪ್ರತಾಪ್​ ಅಥವಾ ಬಿಗ್​ಬಾಸ್ ಕಡೆಯವರಾಗಲಿ ಅವರು ಕ್ಯಾಲ್ಶಿಯಮ್ ಮಾತ್ರೆ ತೆಗೆದುಕೊಂಡಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಿಲ್ಲ. ಸರಿಯಾಗಿ ಊಟ ಮಾಡದೇ ಇರುವುದರಿಂದ ಹೀಗಾಗಿದೆ ಎಂದಿದ್ದಾರೆ. ಹಾಗೂ ಆಸ್ಪತ್ರೆಯಲ್ಲಿ ಡ್ರೋನ್ ಪ್ರತಾಪ್​ಗೆ ಹಲವು ಪರೀಕ್ಷೆಗಳನ್ನು ವೈದ್ಯರು ಮಾಡಿದ್ದಾರೆ. ರಕ್ತ, ಮೂತ್ರ ಪರೀಕ್ಷೆ, ಹೃದಯ ಪರೀಕ್ಷೆ, ಫೋಟೊ ಥೆರಪಿ ಸೇರಿದಂತೆ ಹಲವು ಪರೀಕ್ಷೆಗಳನ್ನು ಮಾಡಲಾಗಿದೆ. ಡ್ರೋನ್ ಪ್ರತಾಪ್​ಗೆ ಆಸ್ಪತ್ರೆಯಲ್ಲಿ ಮಾಡಲಾಗಿರುವ ಪರೀಕ್ಷೆಗಳು, ಅವರಿಗೆ ಕಾಣಸಿಕೊಂಡಿದ್ದ ರೋಗಲಕ್ಷಣ, ಆಸ್ಪತ್ರೆಯಲ್ಲಿ ನೀಡಲಾಗಿರುವ ಚಿಕಿತ್ಸೆ ವೈದ್ಯರ ಭೇಟಿ ಇನ್ನಿತರೆ ಮಾಹಿತಿಗಳು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿವೆ. ಬುಧವಾರ ಮಧ್ಯಾಹ್ನದ ವೇಳೆಗೆ ಡ್ರೋನ್ ಪ್ರತಾಪ್ ಆಸ್ಪತ್ರೆಗೆ ದಾಖಲಾಗಿದ್ದು, ಗುರುವಾರ ಮಧ್ಯಾಹ್ನ 1 ಗಂಟೆಗೆ ಡಿಸ್ಚಾರ್ಜ್ ಮಾಡಲಾಗಿದೆ.

ಡ್ರೋನ್ ಪ್ರತಾಪ್ ಆಸ್ಪತ್ರೆಗೆ ದಾಖಲಾಗ್ತಿದ್ದಂತೆ ಏನೇನೋ ವದಂತಿಗಳು ಸಹ ಹರಡಿದ್ದವು. ಕ್ಯಾಲ್ಶಿಯಂ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿಗಳೂ ಹರಿದಾಡಿವೆ. ಈ ವಿಚಾರ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ಕುಂಬಳಗೋಡು ಪೊಲೀಸ್ ಠಾಣಾ ಅಧಿಕಾರಿ ಶಿವಾರೆಡ್ಡಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಪ್ರತಾಪ್ ಗೆ ಚಿಕಿತ್ಸೆ ಕೊಟ್ಟ ವೈದ್ಯರ ಜೊತೆ ಚರ್ಚೆ ಮಾಡಿ, ಆರೋಗ್ಯದ ಬಗ್ಗೆ ಮಾಹಿತಿ ತೆಗೆದುಕೊಂಡಿದ್ದಾರೆ.

ಕಾಡಿತಾ ಗುರೂಜಿ ಭವಿಷ್ಯ? 

ಡ್ರೋನ್ ಪ್ರತಾಪ್ ವೈಯಕ್ತಿಕವಾಗಿ ಸಾಕಷ್ಟು ನೊಂದಿದ್ದಾರೆ. ಡ್ರೋನ್ ವಿಚಾರವಾಗಿ ಜನರ ಟೀಕೆಗೆ ಗುರಿಯಾಗಿದ್ದ ಪ್ರತಾಪ್​ಗೆ ಬಿಗ್​ಬಾಸ್ ವೇದಿಕೆ ವರವಾಗಿ ಸಿಕ್ಕಿತ್ತು. 2 ವಾರಗಳ ಹಿಂದಷ್ಟೇ ನಡೆದ ಫ್ಯಾಮಿಲಿ ರೌಂಡ್​ನಲ್ಲಿ ಪ್ರತಾಪ್​ ಅವರ ತಂದೆ ತಾಯಿ ಬಿಗ್ ಬಾಸ್ ಮನೆಗೆ ಬಂದಿದ್ದರು. ಕಳೆದ ಮೂರು ವರ್ಷಗಳ ಬಳಿಕ ಡ್ರೋನ್ ಮತ್ತು ಪೋಷಕರು ಮುಖಾಮುಖಿ ಭೇಟಿಯಾಗಿ ಮಾತನಾಡಿದ್ರು. ಅವ್ರ ನೋವು, ಖುಷಿ, ಕಣ್ಣೀರು ಪ್ರೇಕ್ಷಕರ ಕಣ್ಣಲ್ಲೂ ನೀರು ತರಿಸಿತ್ತು. ಇದಾದ ಬಳಿಕ ಬಿಗ್​ಬಾಸ್ ನಿಂದ ಹೊರ ಬಂದ ಬಳಿಕ ಮನೆಗೆ ಬರುವಂತೆ ಆತನ ಪೋಷಕರು ಹೇಳಿದ್ದರು. ಆದ್ರೆ ಹೊಸ ವರ್ಷದ ದಿನ ಬಿಗ್​ಬಾಸ್ ಮನೆಗೆ ಬಂದಿದ್ದ ವಿದ್ಯಾಶಂಕರಾನಂದ ಸರಸ್ವತಿ ಸ್ವಾಮೀಜಿ ಡ್ರೋನ್​ ಪ್ರತಾಪ್​ ಸಂಕಟ ಪಡುವಂತಹ ಭವಿಷ್ಯ ಹೇಳಿದ್ದರು. ನೀನು ಕುಟುಂಬದಿಂದ ದೂರವೇ ಇರಬೇಕಾಗುತ್ತದೆ. ಕುಟುಂಬದ ಜೀವನ ಅಷ್ಟು ಸರಿ ಇಲ್ಲ. ದೂರ ಇದ್ದು ದೂಪವಾಗ್ತೀಯೋ ಹತ್ತಿರ ಹೋಗಿ ಹೇಸಿಗೆ ಆಗ್ತೀಯೋ ನಿನಗೆ ಬಿಟ್ಟಿದ್ದು ಎಂದು ಸ್ವಾಮೀಜಿ ನೇರವಾಗಿ ಹೇಳಿದರು. ಅವರ ಮಾತುಗಳನ್ನು ಕೇಳಿ ಪ್ರತಾಪ್ ಕಣ್ಣುಗಳಲ್ಲಿ ಕಣ್ಣೀರು ತುಂಬಿ ಹರಿದಿತ್ತು. ಅದಾದ ಬಳಿಕ ಡ್ರೋನ್ ಮತ್ತಷ್ಟು ಕುಗ್ಗಿ ಹೋಗಿದ್ದರು.

ಅಷ್ಟೇ ಅಲ್ಲದೆ ಡ್ರೋನ್​ಗೆ ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್​ಗಳಲ್ಲೂ ಕೂಡ ಚಾನ್ಸ್ ಸಿಗ್ತಿರಲಿಲ್ಲ. ಸ್ವಿಮ್ಮಿಂಗ್ ಪೂಲ್​ನಲ್ಲಿ ಬಾಲ್ ಎತ್ತುವ ಟಾಸ್ಕ್​ನಲ್ಲಿ ಕ್ಯಾಪ್ಟನ್ ತನಿಷಾ ಪ್ರತಾಪ್​ರನ್ನ ಆಟದಿಂದ ಹೊರಗಿಟ್ಟಿದ್ದರು. ಇನ್ನು ಗುರುವಾರದ ಸಂಚಿಕೆಯಲ್ಲಿ ಸಂಗೀತಾ ಮತ್ತು ನಮ್ರತಾ ಕೂಡ ಹಾಗೇ ಮಾಡಿದ್ದರು. ಡ್ರೋನ್ ಪ್ರತಾಪ್ ಪ್ಯಾನಿಕ್ ಆಗ್ತಾರೆ ಎಂದಿದ್ದರು. ಈ ಎಲ್ಲಾ ವಿಚಾರಗಳಿಂದ ಡ್ರೋನ್ ಪ್ರತಾಪ್ ಸಾಕಷ್ಟು ನೊಂದಿದ್ದರು ಎನ್ನಲಾಗಿದೆ.

ಸದ್ಯ ಡ್ರೋನ್ ಪ್ರತಾಪ್ ಆರೋಗ್ಯ ಹದಗೆಡಲು ಮನೆಯ ಇನ್ನಿತರ ಸದಸ್ಯರೇ ಕಾರಣ ಎಂಬ ಸುದ್ದಿ ಹರಿದಾಡ್ತಿದೆ. ಆದರೆ ಬಿಗ್‌ಬಾಸ್‌ ಮೂಲಗಳು ಇದನ್ನು ನಿರಾಕರಿಸಿವೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಪ್ರತಾಪ್ ತಂದೆ ಮರಿಮಾದಯ್ಯ, ಮಗನಿಗೆ ಫುಡ್ ಪಾಯಿಸನ್ ಆಗಿದೆ. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಶ್ರಾಂತಿ ಬಳಿಕ ಮತ್ತೆ ಡಿಸ್ಚಾರ್ಜ್ ಮಾಡಿದ್ದು ಬಿಗ್​ಬಾಸ್​ಗೆ ಹೋಗ್ತಾರೆ ಎಂದಿದ್ದಾರೆ. ಸದ್ಯ ಬಿಗ್​ಬಾಸ್​ ಮನೆಯಲ್ಲಿ ಸಂಗೀತಾ ಶೃಂಗೇರಿ, ಡ್ರೋನ್​ ಪ್ರತಾಪ್​, ಕಾರ್ತಿಕ್​, ವರ್ತೂರ್​ ಸಂತೋಷ್​, ತುಕಾಲಿ ಸಂತೋಷ್​, ನಮ್ರತಾ, ವಿನಯ್​ ಗೌಡ, ತನಿಷಾ ಮತ್ತು ಮೈಕಲ್​ ಉಳಿದುಕೊಂಡಿದ್ದಾರೆ.

Sulekha