ಮತ್ತೆ ಮೂರು ದಿನ ಪ್ರತಿಭಟನೆ ಮುಂದೂಡಿದ ರೈತರು

ಮತ್ತೆ ಮೂರು ದಿನ ಪ್ರತಿಭಟನೆ ಮುಂದೂಡಿದ ರೈತರು

ಅನ್ನದಾತರು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ನಡೆಸುತ್ತಿದ್ದ ಪ್ರತಿಭಟನೆಯನ್ನು ಶುಭ್​ಕರಣ್​​ ಸಿಂಗ್  ಸಾವಿನ ಬಳಿಕ ಫೆ. 29 ರವರೆಗೆ ಮುಂದೂಡಲಾಗುವುದು ಎಂದು ರೈತ ಮುಖಂಡರು ಹೇಳಿದ್ದರು. ಇದೀಗ ಈ ಪ್ರತಿಭಟನೆಯನ್ನು ಮತ್ತೆ ಮುಂದೂಡಲಾಗಿದೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆಯಲ್ಲಿ ನಿಗೂಢ ಸ್ಪೋಟ – ಹಲವರಿಗೆ ಗಾಯ

ಈ ವರ್ಷದ ಆರಂಭದಲ್ಲಿ ರೈತರು ತಮ್ಮ ಬೇಡಿಕೆಗಳೊಂದಿಗೆ ದೆಹಲಿಗೆ ಪಾದಯಾತ್ರೆ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಫೆಬ್ರವರಿ 20ರಂದು ರೈತ ಮುಖಂಡರು ಎರಡು ದಿನಗಳ ಕಾಲ ವಿರಾಮ ನೀಡಿದ್ದರು. ಫೆಬ್ರವರಿ 23ರಂದು ಮುಂದಿನ ಕಾರ್ಯತಂತ್ರವನ್ನು ರಚಿಸಲಾಗುವುದು ಎಂದಿದ್ದರು. ಮಧ್ಯದಲ್ಲಿ ಪಾದಯಾತ್ರೆಯಲ್ಲಿದ್ದ ಶುಭ್​ಕರಣ್​ ಎಂಬುವವರ ಮೇಲೆ ಗುಂಡಿನ ದಾಳಿ ನಡೆದಿತ್ತು. ಅದರಲ್ಲಿ ಅವರು ಸಾವನ್ನಪ್ಪಿದ್ದರು. ಅದಾದ ಬಳಿಕ ಫೆ. 29 ರವರೆಗೆ ಪ್ರತಿಭಟನೆಯನ್ನು ಮುಂದೂಡಲಾಗಿತ್ತು. ಇದೀಗ ಮತ್ತೆ ಪ್ರತಿಭಟನೆಯನ್ನು ಮುಂದೂಡಲಾಗಿದೆ. ಮಾರ್ಚ್​ 3 ರಂದು ಶುಭ್​ಕರಣ್​ ಅವರ ಆತ್ಮಕ್ಕೆ ಶಾಂತಿ ಕೋರಿ ಅಂತಿಮ ನಮನ ಸಲ್ಲಿಸಲಾಗುವುದು. ಅದರ ಬಳಿಕವಷ್ಟೇ ಪ್ರತಿಭಟನೆ ಕುರಿತು ನಿರ್ಧಾರಕ್ಕೆ ಬರಲಾಗುವುದು ಎಂದು ರೈತರು ತಿಳಿಸಿದ್ದಾರೆ.

ರೈತರೊಂದಿಗೆ ಮಾತುಕತೆಗೆ ಸಿದ್ಧ ರೈತರ ಬೇಡಿಕೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹಾಗೂ ರೈತ ಮುಖಂಡರ ನಡುವೆ ನಾಲ್ಕು ಬಾರಿ ಮಾತುಕತೆ ನಡೆದಿದೆ. ಆದ್ರೆ ಈ ಮಾತಕತೆಗೆ ಇನ್ನೂ ಪರಿಹಾರ ದೊರೆತಿಲ್ಲ. ಐದನೇ ಸುತ್ತಿನ ಮಾತುಕತೆಗೆ ಕೇಂದ್ರ ಸರ್ಕಾರ ಸಿದ್ಧವಾಗಿದೆ. ಧರಣಿ ನಿರತ ರೈತರೊಂದಿಗೆ ಮಾತುಕತೆಗೆ ಸರ್ಕಾರ ಸಿದ್ಧವಿದೆ ಎಂದು ಕೃಷಿ ಸಚಿವ ಅರ್ಜುನ್ ಮುಂಡಾ ಹೇಳಿದ್ದಾರೆ.

ಯುನೈಟೆಡ್ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾದ ಎರಡೂ ವೇದಿಕೆಗಳಿಂದ 6 ಸದಸ್ಯರ ಸಮನ್ವಯ ಸಮಿತಿಯನ್ನು ರಚಿಸಲಾಗುವುದು. ಸಮಿತಿಯ ಹೆಸರುಗಳನ್ನು ನಿರ್ಧರಿಸಲಾಗಿದೆ.ಎರಡೂ ಸಮಿತಿಗಳು ಶುಕ್ರವಾರ ಸಭೆ ಸೇರಲಿವೆ. ಸಮನ್ವಯ ಸಮಿತಿ ಸಂಪರ್ಕಿಸಿದ್ದು, ಚರ್ಚೆ ನಡೆದಿದೆ ಎಂದು ಕಿಸಾನ್ ಸಂಘರ್ಷ ಸಮಿತಿಯ ರಾಜ್ಯ ಮುಖಂಡ ಸತ್ನಾಮ್ ಸಿಂಗ್ ಪನ್ನು ತಿಳಿಸಿದ್ದಾರೆ.

Shwetha M