ಗುಂಟೂರು ಖಾರಂ ಸಿನಿಮಾ ನೋಡಿದರೆ ನಿದ್ದೆ ಬರುತ್ತದೆ – ಟಾಲಿವುಡ್ ಪ್ರಿನ್ಸ್ ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ನಿರಾಶೆ

ಗುಂಟೂರು ಖಾರಂ ಸಿನಿಮಾ ನೋಡಿದರೆ ನಿದ್ದೆ ಬರುತ್ತದೆ – ಟಾಲಿವುಡ್ ಪ್ರಿನ್ಸ್ ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ನಿರಾಶೆ

ತೆಲುಗು ನಟ ಮಹೇಶ್ ಬಾಬು ಹಾಗೂ ಕನ್ನಡದ ಬ್ಯೂಟಿ ಶ್ರೀಲೀಲಾ ಅಭಿನಯದ ಗುಂಟೂರು ಖಾರಂ ಚಿತ್ರ ಶುಕ್ರವಾರ ತೆರೆ ಕಂಡಿದೆ. ಆದ್ರೆ ಸಿನಿಮಾ ರಿಲೀಸ್ ಆದ ಮೊದಲ ದಿನವೇ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಿನಿಮಾ ನೋಡಿದ ಅನೇಕರು ಸೋಶಿಯಲ್ ಮೀಡಿಯಾದಲ್ಲಿ ರೆಸ್ಪಾಂಡ್ ಮಾಡ್ತಿದ್ದಾರೆ. ಅನೇಕರಿಗೆ ಈ ಚಿತ್ರ ಇಷ್ಟ ಆಗಿಲ್ಲ. ಕೆಲವರಿಗೆ ಸಿನಿಮಾ ನೋಡಿ ನಿದ್ದೆ ಬಂದಿದೆಯಂತೆ.

ಇದನ್ನೂ ಓದಿ: ಬಿಗ್ ಬಜೆಟ್ ಸಿನಿಮಾಗೆ ರೆಡಿಯಾದ ಹೊಂಬಾಳೆ ಬ್ಯಾನರ್ – ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಿನಿಮಾಗೆ ಬಂಡವಾಳ

ಟಾಲಿವುಡ್ ಪ್ರಿನ್ಸ್ ಮಹೇಶ್‌ಬಾಬು ಅಭಿಮಾನಿಗಳು ಈ ಚಿತ್ರದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದರು. ಸಂಕ್ರಾಂತಿಗೆ ಅಭಿಮಾನಿಗಳಿಗೆ ಸಿಹಿ ಪೊಂಗಲ್ ತಿನಿಸಲು ಗುಂಟೂರು ಖಾರಂ ಸಿನಿಮಾ ತೆರೆಗೆ ಅಪ್ಪಳಿಸಿತ್ತು. ಆದರೆ, ಸಿನಿಮಾ ನೋಡಿದ ಫ್ಯಾನ್ಸ್ ಥಿಯೇಟರ್‌ನಲ್ಲೇ ನಿದ್ದೆ ಹೋಗಿದ್ದಾರೆ. ಸಿನಿಮಾದಲ್ಲಿ ಖಾರವೂ ಇರಲಿಲ್ಲ. ಬರೀ ಸಪ್ಪೆ ಸಪ್ಪೆ ಅಂತಿದ್ದಾರೆ ಫ್ಯಾನ್ಸ್.

10 ವರ್ಷಗಳ ಬಳಿಕ ಮಹೇಶ್‌ ಬಾಬುಗೆ ತ್ರಿವಿಕ್ರಮ್, ಗುಂಟೂರು ಖಾರಂ ಸಿನಿಮಾ ಮೂಲಕ ನಿರ್ದೇಶನ ಮಾಡಿದ್ದರು. ಈ ಸಿನಿಮಾದಲ್ಲಿ ಕನ್ನಡತಿ ಶ್ರೀಲೀಲಾ ಮಹೇಶ್‌ಬಾಬು ಅವರನ್ನೇ ಸುಸ್ತು ಹೊಡೆಸುವಷ್ಟು ಕುಣಿದಿದ್ದರು. ರಮ್ಯಾ ಕೃಷ್ಣ, ಜಗಪತಿ ಬಾಬು, ಪ್ರಕಾಶ್ ರಾಜ್‌ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ. ಹಲವು ಕಾರಣಗಳಿಂದ ಕುತೂಹಲ ಕೆರಳಿಸಿದ್ದ ‘ಗುಂಟೂರು ಖಾರಂ’ ಸಿನಿಮಾ ಯಾಕೋ ಸದ್ದು ಮಾಡುವ ಲಕ್ಷಣ ಕಾಣುತ್ತಿಲ್ಲ.

ಅಭಿಮಾನಿಗಳು ಹಾಗೂ ಸಿನಿಪ್ರಿಯರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯವನ್ನ ಹೊರಹಾಕುತ್ತಿದ್ದಾರೆ. ‘ಮಹೇಶ್​ ಬಾಬುಗಾಗಿ ಮಾತ್ರ ನೋಡಬೇಕಾದ ಸಿನಿಮಾ ಗುಂಟೂರು ಖಾರಂ. ಅವರ ಕರಿಯರ್​ನ ಬೆಸ್ಟ್ ಪರ್ಫಾರ್ಮೆನ್ಸ್ ಇದು. ತ್ರಿವಿಕ್ರಂ ಮ್ಯಾಜಿಕ್ ಮಿಸ್ ಆಗಿದೆ. ಥಮನ್ ಅವರ ಬಿಜಿಎಂ ಮ್ಯಾಜಿಕ್ ಮಾಡಿಲ್ಲ’ ಎಂದು ಅಭಿಮಾನಿ ಓರ್ವ ಬರೆದುಕೊಂಡಿದ್ದಾನೆ. ‘ಇಡೀ ಗುಂಪನ್ನು ಸೈಲೆಂಟ್ ಮಾಡುವ ತಾಕತ್ತು ಚಿತ್ರಕ್ಕಿದೆ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರು ‘ಅದೇ ಹಳೆಯ ಕಥೆ’ ಎಂದು ಅಭಿಪ್ರಾಯ ಹೊರಹಾಕಿದ್ದಾರೆ.

 

Sulekha