ಬಿಗ್‌ಬಾಸ್ ಮನೆಯಲ್ಲಿ ಹೆಂಡತಿಯಿಂದ ಒದೆ ತಿಂದ ತುಕಾಲಿ ಸಂತೋಷ್ – ಸ್ಪರ್ಧಿಗಳಿಗೆ ಸಿಕ್ತು ಅಮ್ಮಂದಿರ ಅಪ್ಪುಗೆ

ಬಿಗ್‌ಬಾಸ್ ಮನೆಯಲ್ಲಿ ಹೆಂಡತಿಯಿಂದ ಒದೆ ತಿಂದ ತುಕಾಲಿ ಸಂತೋಷ್ – ಸ್ಪರ್ಧಿಗಳಿಗೆ ಸಿಕ್ತು ಅಮ್ಮಂದಿರ ಅಪ್ಪುಗೆ

ಬಿಗ್‌ಬಾಸ್ ಮನೆಯಲ್ಲಿ ಫ್ಯಾಮಿಲಿ ವೀಕ್ ಸಂಭ್ರಮ. ಸುಮಾರು 80 ದಿನಗಳ ಕಾಲ ಕುಟುಂಬವನ್ನು ಬಿಟ್ಟು ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ಕುಟುಂಬದವರನ್ನು ಭೇಟಿ ಮಾಡುವ ಅವಕಾಶ ಒದಗಿಸಲಾಗಿದೆ. ಸ್ಪರ್ಧಿಗಳ ಅಮ್ಮಂದಿರು ಬಿಗ್ ಬಾಸ್ ಮನೆಯೊಳಗೆ ಬಂದಿದ್ದಾರೆ. ಇದರ ಮಧ್ಯೆ ತುಕಾಲಿ ಸಂತುಗೆ ಮುದ್ದಿನ ಹೆಂಡತಿಯ ಕೈಯಿಂದ ಒದೆ ಬಿದ್ದಿದೆ.

ಇದನ್ನೂ ಓದಿ: ಗೋಲ್ಡನ್ ಸ್ಟಾರ್ ಗಣೇಶ್ ಟೀಮ್ ಕೆಸಿಸಿ ಚಾಂಪಿಯನ್ – ಶಿವರಾಜ್ ಕುಮಾರ್ ಟೀಮ್ ರನ್ನರ್‌ ಅಪ್

ಬಿಗ್‌ಬಾಸ್ ಸ್ಪರ್ಧಿಗಳಿಗೆ ಈ ವಾರ ಸಖತ್ ಸರ್‌ಪ್ರೈಸ್ ನೀಡಿದ್ದಾರೆ.  ವರ್ತೂರು ಸಂತೋಷ್ ಅವರ ತಾಯಿ ದೊಡ್ಮನೆಗೆ ಬಂದಿದ್ದಾರೆ. ಮಗನ ಜೊತೆ ಸಂತಸದಲ್ಲಿ ಮಾತನಾಡಿದ ತಾಯಿ, ಸ್ಪರ್ಧಿಗಳಿಗೂ ಕೆಲ ಕಿವಿಮಾತು ಹೇಳಿದ್ದಾರೆ. ಇನ್ನು ನಮ್ರತಾ ಖುಷಿಗಂತೂ ಪಾರವೇ ಇರಲಿಲ್ಲ. ನಮ್ರತಾ ತಾಯಿ ಕೂಡಾ ದೊಡ್ಮನೆ ಒಳಗೆ ಆಗಮಿಸಿದ್ದಾರೆ. ಈ ಭಾವನಾತ್ಮಕ ಕ್ಷಣಗಳ ಜೊತೆಯಲ್ಲಿ ತುಕಾಲಿ ಸಂತೋಷ್ ಅವರ ಪತ್ನಿ ಎಂಟ್ರಿಕೊಟ್ಟಿದ್ದು, ಸ್ಪರ್ಧಿಗಳ ಮುಖದಲ್ಲಿ ನಗು ತರಿಸಿದ್ದಾರೆ.

ತುಕಾಲಿ ಸಂತು ನನ್ ಹೆಂಡ್ತಿನ ಮಾತ್ರ ಮನೆಯೊಳಗೆ ಕಳಿಸಬೇಡಿ ಬಿಗ್‌ಬಾಸ್ ಎಂದು ತಮಾಷೆಗಾಗಿ ಕೇಳಿಕೊಂಡಿದ್ದರು. ಇದೇ ವಿಚಾರ ಇಟ್ಟುಕೊಂಡು ಅವರ ಪತ್ನಿ ಕ್ಲಾಸ್ ತೆಗೆದುಕೊಂಡಿದ್ದಾರೆ. ‘ನನ್ನ ಪತ್ನಿ ಊರಲ್ಲಿ ಎಮ್ಮೆ ಕಾಯುತ್ತಿದ್ದಳು’ ಎಂದರು ಸಂತೋಷ್. ಇದಕ್ಕೂ ಅವರ ಪತ್ನಿ ತಿರುಗೇಟು ಕೊಟ್ಟಿದ್ದಾರೆ. ‘ಇವನೇನು ಮೈಸೂರಿನಲ್ಲಿ ಅರ್ಜುನನ ಕಾಯ್ತಾ ಇದ್ನಾ’ ಎಂದಿದ್ದಾರೆ. ಈ ಪ್ರೋಮೋ ಗಮನ ಸೆಳೆದಿದೆ. ಸಂತು ಪತ್ನಿ ಮಾನಸ ಮನೆಯೊಳಗೆ ಬರುತ್ತಿದ್ದಂತೆ ಗಂಡನಿಗೆ ಸರಿಯಾಗಿಯೇ ಒದೆ ನೀಡಿದ್ದಾರೆ. ಓಡಿಸಿಕೊಂಡು ಹೊಡೆದಿದ್ದಾರೆ. ಗಂಡ ಹೆಂಡತಿಯ ಮುದ್ದಾದ ಜಗಳ ಕಂಡು ಮನೆಮಂದಿಯೆಲ್ಲಾ ಬಿದ್ದು ಬಿದ್ದು ನಕ್ಕಿದ್ದಾರೆ.

ಡ್ರೋನ್ ಪ್ರತಾಪ್ ಮನೆಯವರ ಜೊತೆ ಮಾತನಾಡದೇ ವರ್ಷಗಳೇ ಕಳೆದಿದೆ. ಹೀಗಾಗಿ ಮನೆಯೊಳಗೆ ಪ್ರತಾಪ್ ಕುಟುಂಬದಲ್ಲಿ ಯಾರು ಬರುತ್ತಾರೆ ಎಂಬ ಕುತೂಹಲವೂ ಹೆಚ್ಚಾಗಿದೆ.

Sulekha