ಕರ್ನಾಟಕದಲ್ಲಿ ನಾನು ಬರ್ತೀನಿ, ಸಿಎಂ ಆಗ್ತೀನಿ – ಶಾಸಕ ಬಸನಗೌಡ ಪಾಟೀಲ್ ಸ್ಫೋಟಕ ಹೇಳಿಕೆ

ಕರ್ನಾಟಕದಲ್ಲಿ ನಾನು ಬರ್ತೀನಿ, ಸಿಎಂ ಆಗ್ತೀನಿ – ಶಾಸಕ ಬಸನಗೌಡ ಪಾಟೀಲ್ ಸ್ಫೋಟಕ ಹೇಳಿಕೆ

ಯಾರಾದ್ರೂ ಮುಖ್ಯಮಂತ್ರಿ ಆಗ್ತೀನಿ ಅಂತಾ ಅಂಗಿ ಹೊಲಿಸಿಕೊಂಡು ಕುಂತಾರ ಕುಳಿತುಕೊಳ್ಳಲಿ.. ಕರ್ನಾಟಕದಲ್ಲಿ ನಾನು ಬರ್ತೀನಿ, ಸಿಎಂ ಆಗ್ತೀನಿ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಬಾಂಬ್‌ ಸಿಡಿಸಿದ್ದಾರೆ.

ಯಾದಗಿರಿಯಲ್ಲಿ ಮಾತನಾಡಿದ ಯತ್ನಾಳ್‌, ಈ ಬಾರಿ ನಡೆಯೋದು ಮೋದಿ ಚುನಾವಣೆ, ಯಡಿಯೂರಪ್ಪ, ವಿಜಯೇಂದ್ರಗೆ ಸಂಬಂಧಪಡೋದಿಲ್ಲ. ನೀವ್ಯಾರು ಹೆದರೋಕೆ ಹೋಗ್ಬೇಡಿ. ಕರ್ನಾಟಕದಲ್ಲಿ ಮುಂದಿನ ಸಲ ನಾನೂ ಬರ್ತೀನಿ, ನಾನೇ ಸಿಎಂ ಆಗ್ತಿನಿ ಎಂದು ವಿಜಯೇಂದ್ರ ಹಾಗೂ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: ಮೆಣಸಿನಕಾಯಿ ದರ ಭಾರಿ ಇಳಿಕೆ  – APMCಗೆ ಬೆಂಕಿ ಇಟ್ಟ ಕಿಡಿಗೇಡಿಗಳು, 47 ಮಂದಿ ಪೊಲೀಸ್‌ ವಶಕ್ಕೆ!

ಕರ್ನಾಟಕದಲ್ಲಿ ವಿಜಯೇಂದ್ರನನ್ನು ನೋಡಿ ವೋಟ್‌ ಹಾಕೋದಿಲ್ಲ. ಏಕೆಂದರೆ ಇದು ಮೋದಿ ಚುನಾವಣೆ, ವಿಜಯೇಂದ್ರನನ್ನ ತೆಗೆದುಕೊಂಡು ಏನು ಮಾಡೋದು. ವಿಜಯೇಂದ್ರ ಪಾರ್ಟಿ ಅಧ್ಯಕ್ಷ ಆಗಿರಲಿ, ಸುಡುಗಾಡಾದ್ರೂ ಆಗಿರಲಿ. ರಾಜ್ಯದಲ್ಲಿ ಈ ಸಲ ಬಿಜೆಪಿ 28 ಸ್ಥಾನ ಗೆದ್ದೇ ಗೆಲ್ಲುತ್ತೆ. ಇದಕ್ಕೆ ವಿಜಯೇಂದ್ರ ಸಂಬಂಧಪಡಲ್ಲ ಎಂದು ಕಿಡಿ ಕಾರಿದ್ದಾರೆ.

ಮುಂದುವರಿದು, ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದಾಗ ಯಾವಾಗ ಬಿಜೆಪಿಗೆ ರಾಜ್ಯದಲ್ಲಿ 120 ಸ್ಥಾನಗಳು ಬಂದಿವೆ ಹೇಳಿ? ಯಡಿಯೂರಪ್ಪ ಅವರದ್ದು ಅಷ್ಟು ತೂಕ ಇದ್ದಿದ್ದರೆ, 130 ಸ್ಥಾನ ಬರಬೇಕಿತ್ತು ಎಂದು ಲೇವಡಿ ಮಾಡಿದ್ದಾರೆ.

Shwetha M