ಆಸ್ತಿ ಮಾರಾಟಕ್ಕೆ ಒತ್ತಾಯಿಸಿ ಕಾರು ಚಾಲಕನ ಕಿಡ್ನಾಪ್ ಮಾಡಿದ್ರಾ ಭವಾನಿ ರೇವಣ್ಣ! – ದೊಡ್ಡಗೌಡರ ಸೊಸೆ, ಮೊಮ್ಮಗನ ಮೇಲೆ ಗಂಭೀರ ಆರೋಪ!

ಆಸ್ತಿ ಮಾರಾಟಕ್ಕೆ ಒತ್ತಾಯಿಸಿ ಕಾರು ಚಾಲಕನ ಕಿಡ್ನಾಪ್ ಮಾಡಿದ್ರಾ ಭವಾನಿ ರೇವಣ್ಣ! – ದೊಡ್ಡಗೌಡರ ಸೊಸೆ, ಮೊಮ್ಮಗನ ಮೇಲೆ ಗಂಭೀರ ಆರೋಪ!

ಮಾಜಿ ಜಿಲ್ಲಾ ಪಂಚಾಯತಿ ಸದಸ್ಯೆ ಭವಾನಿ ರೇವಣ್ಣ ಹಾಗೂ ಸಂಸದ ಪ್ರಜ್ವಲ್‌ ರೇವಣ್ಣ ಅವರ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ಆಸ್ತಿ ಮಾರಾಟ ಮಾಡುವಂತೆ ಒತ್ತಾಯಿಸಿ ಮಾಜಿ ಚಾಲಕನನ್ನು ಕಿಡ್ನ್ಯಾಪ್‌ ಮಾಡಿ ಚಿತ್ರಹಿಂಸೆ ನೀಡಿದ ಆರೋಪ ಎದುರಿಸುತ್ತಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: 10 ವರ್ಷದಿಂದ ಹೆಣ್ಣು ಹುಡುಕುತ್ತಿದ್ರೂ ಸಿಗುತ್ತಿಲ್ಲ – ನಮ್ಮ ಮಕ್ಕಳಿಗೆ ವಧು ಕೊಡಿಸಿ ಎಂದು ಜಿಲ್ಲಾಧಿಕಾರಿ ಮತ್ತು ಶಾಸಕರಿಗೆ ಪತ್ರ ಬರೆದ ರೈತ

ಏನಿದು ಪ್ರಕರಣ?

ಕಾರ್ತಿಕ್ ದಶಕಗಳ ಕಾಲ ಪ್ರಜ್ವಲ್ ರೇವಣ್ಣ ಅವರ ಕಾರು ಚಾಲಕನಾಗಿದ್ದರು. ಹೊಳೆನರಸೀಪುರ ತಾಲೂಕಿನಲ್ಲಿರುವ 13 ಎಕರೆ ಭೂಮಿಯನ್ನು ಮಾರಾಟ ಮಾಡುವಂತೆ ಒತ್ತಾಯಿಸಿ ತನ್ನನ್ನು ಹಾಗೂ ತನ್ನ ಪತ್ನಿಯನ್ನು ಕಿಡ್ನಾಪ್ ಮಾಡಿ ಚಿತ್ರಹಿಂಸೆ ನೀಡಿದ್ದಾರೆ ಎಂದು ಕಾರ್ತಿಕ್, ಪ್ರಜ್ವಲ್ ರೇವಣ್ಣ ಹಾಗೂ ಭವಾನಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಕಾರ್ತಿಕ್‌ ದೂರು ನೀಡಿದ್ದಾರೆ. ತನಗೆ ನ್ಯಾಯ ನೀಡುವಂತೆ ಕಾರ್ತಿಕ್ ದಕ್ಷಿಣ ವಲಯ ಐಜಿಪಿಗೆ ದೂರು ನೀಡಿದ್ದಾರೆ.

2023 ರ ಮಾರ್ಚ್ 12 ರಂದು ಕಿಡ್ನ್ಯಾಪ್ ಮಾಡಿದ್ದರು. ಈ ಬಗ್ಗೆ ಕಾರ್ತಿಕ್ ದಾಖಲೆಗಳ ಸಹಿತ ಐಜಿಪಿಗೆ ದೂರು ನೀಡಿದ್ದಾರೆ. ಬಲವಂತವಾಗಿ ಕರೆದೊಯ್ದು ನನ್ನ 13 ಎಕರೆ ಭೂಮಿಯನ್ನು ಬೇರೆಯವರ ಹೆಸರಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

Shwetha M