ಶ್ವೇತಾಳ ಸೊಕ್ಕು ಮುರಿಯುತ್ತಾನಾ ಮೌರ್ಯ? – ನಕ್ಷತ್ರಳಿಗೆ ಇಷ್ಟೆಲ್ಲಾ ತೊಂದರೆಯಾದರೂ ತಂದೆ ಚಂದ್ರಶೇಖರ್ ಎಲ್ಲಿದ್ದಾರೆ?

ಶ್ವೇತಾಳ ಸೊಕ್ಕು ಮುರಿಯುತ್ತಾನಾ ಮೌರ್ಯ? – ನಕ್ಷತ್ರಳಿಗೆ ಇಷ್ಟೆಲ್ಲಾ ತೊಂದರೆಯಾದರೂ ತಂದೆ ಚಂದ್ರಶೇಖರ್ ಎಲ್ಲಿದ್ದಾರೆ?

ಕಲರ್ಸ್ ಕನ್ನಡವಾಹಿನಿಯ ಜನಪ್ರಿಯ ಧಾರಾವಾಹಿ ‘ಲಕ್ಷಣ’ ಮತ್ತೊಂದು ತಿರುವು ಪಡೆದುಕೊಂಡಿದೆ. ದುರಂಹಕಾರಿ ಶ್ವೇತಾಳ ಸೊಕ್ಕು ಮುರಿಯಲು ಗಂಡ ಮೌರ್ಯ ಹಠ ತೊಟ್ಟಿದ್ದಾನೆ. ಈಗಾಗಲೇ ಶ್ವೇತಾ ಮೋಸದಿಂದ ಶಕುಂತಲಾ ದೇವಿಯ ಆಸ್ತಿಯನ್ನು ಲಪಟಾಯಿಸಿದ್ದಾಳೆ. ಶಕುಂತಲಾ ದೇವಿಯ ಅಷ್ಟೂ ಆಸ್ತಿಯನ್ನು ಮೋಸದಿಂದ ಶ್ವೇತಾ ತನ್ನ ಹೆಸರಿಗೆ ವರ್ಗಾಯಿಸಿಕೊಂಡಿದ್ದಾಳೆ. ಶ್ವೇತಾ ಇಷ್ಟೆಲ್ಲಾ ಕುತಂತ್ರ ಮಾಡಿದ್ದರೂ, ಮೌರ್ಯ ಅದ್ಯಾಕೆ ಸುಮ್ಮನಿದ್ದಾನೆ ಅಂತ ವೀಕ್ಷಕರು ಕೂಡಾ ಪ್ರಶ್ನಿಸುತ್ತಿದ್ದರು. ಇದೀಗ ಮೌರ್ಯನ ಅಸಲಿ ಆಟ ಶುರುವಾಗಿದೆ.

ಇದನ್ನೂ ಓದಿ: ನಕ್ಷತ್ರಾ – ಶ್ವೇತಾ ಸವಾಲ್‌ಗೆ ಪ್ರತಿ ಸವಾಲ್ – ಗೆಲ್ಲುವುದು ದುಷ್ಟರ ದುರಹಂಕಾರವೋ? ಒಳ್ಳೆಯವರ ಸ್ವಾಭಿಮಾನವೋ?

ಶ್ವೇತಾಗೆ ಬುದ್ಧಿ ಕಲಿಸುವ ಸಲುವಾಗಿ ಮೆಂಟಲ್ ಟಾರ್ಚರ್ ಕೊಡಲು ಮೌರ್ಯ ಆರಂಭಿಸಿದ್ದಾನೆ. ಇತ್ತ ಕೋಟ್ಯಂತರ ರೂಪಾಯಿಯ ಡೀಲ್ ಫೈನಲ್ ಮಾಡಲು ಆಫೀಸ್‌ಗೆ ಶ್ವೇತಾ ಕಾರಿನಲ್ಲಿ ಹೊರಟಿದ್ದಾಳೆ. ಶ್ವೇತಾಗೆ ಗೊತ್ತಿಲ್ಲದೆ ಡ್ರೈವರ್ ಸೀಟ್‌ನಲ್ಲಿ ಮೌರ್ಯ ಕೂತಿದ್ದಾನೆ. ಶ್ವೇತಾಳನ್ನ ಆಫೀಸ್‌ಗೆ ಕರೆದುಕೊಂಡು ಹೋಗದೆ ನಿರ್ಜನ ಪ್ರದೇಶಕ್ಕೆ ಕರೆತರುತ್ತಾನೆ. ಕಾರಿನ ಎಲ್ಲಾ ಟೈರ್ ಪಂಕ್ಚರ್ ಮಾಡುತ್ತಾನೆ. ಹೀಗೆಲ್ಲಾ ಮಾಡ್ತಿರೋದು ಮೌರ್ಯನೇ ಅಂತ ಶ್ವೇತಾಗೆ ಕಡೆಗೂ ಅನುಮಾನ ಬರುತ್ತದೆ. ಮೌರ್ಯ ಅಂತಾ ಕರೆಯುತ್ತಾ ಕಾರಿನಿಂದ ಕೆಳಗಿಳಿಯುತ್ತಾಳೆ. ನೋಡಿದರೇ ಶ್ವೇತಾಳ ಗೆಸ್ ಸರಿಯಾಗಿತ್ತು. ಮೌರ್ಯನೇ ಶ್ವೇತಾಳನ್ನು ನಿರ್ಜನ ಪ್ರದೇಶದಲ್ಲಿ ತಂದು ನಿಲ್ಲಿಸಿದ್ದಾನೆ.

ಇತ್ತ ಶಕುಂತಲಾದೇವಿಯ ನಾಲ್ಕು ಗಂಡು ಮಕ್ಕಳು ಕೆಲಸ ಹುಡುಕಲು ಪರದಾಡುತ್ತಿರುತ್ತಾರೆ. ಸೀರಿಯಲ್ ನಾಯಕ ಭೂಪತಿ ಕೂಡಾ ಇಂಟರ್ವ್ಯೂ ಅಟೆಂಡ್ ಮಾಡುತ್ತಾನೆ. ಇನ್ನೇನು ಕೆಲಸ ಸಿಕ್ತು ಅನ್ನೋವಾಗಲೇ ಭೂಪತಿಗೆ ಸಿಕ್ಕ ಕೆಲಸವೂ ಕೈ ತಪ್ಪಿಹೋಗುತ್ತದೆ. ಕಂಪನಿಯ ಎಂಡಿ ವಿರುದ್ಧವೇ ಭೂಪತಿ ತಿರುಗಿಬೀಳುತ್ತಾನೆ. ಮತ್ತೊಂದೆಡೆ ಶಕುಂತಲಾ ದೇವಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ತನ್ನ ಕುಟುಂಬಕ್ಕೆ ಒದಗಿದ ಇಂಥಾ ಪರಿಸ್ಥಿತಿಯಲ್ಲಿ ನಕ್ಷತ್ರ ಏನು ಮಾಡುತ್ತಾಳೆ ಅನ್ನೋದೇ ಮುಂದಿನ ಕುತೂಹಲ. ಇದರ ಜೊತೆಗೆ ನಕ್ಷತ್ರಾ ತಂದೆ ಚಂದ್ರಶೇಖರ್ ಎಲ್ಲಿ ಹೋಗಿದ್ದಾರೆ. ಮಗಳ ಕುಟುಂಬಕ್ಕೆ  ಇಷ್ಟೆಲ್ಲಾ ತೊಂದರೆಯಾದರೂ ಚಂದ್ರಶೇಖರ್ ಯಾಕೆ ಸಹಾಯಕ್ಕೆ ಬಂದಿಲ್ಲ ಎಂಬ ಚರ್ಚೆ ಈಗಾಗಲೇ ವೀಕ್ಷಕರು ಮಾಡುತ್ತಿದ್ದಾರೆ.

ಲಕ್ಷಣ ಧಾರಾವಾಹಿಯಲ್ಲಿ ಮೌರ್ಯ ಆಗಿ ಅಭಿಷೇಕ್ ಶ್ರೀಕಾಂತ್, ಶ್ವೇತಾ ಆಗಿ ಸುಕೃತಾ ನಾಗ್, ಶಕುಂತಲಾ ದೇವಿ ಆಗಿ ಸುಧಾ ಬೆಳವಾಡಿ, ನಕ್ಷತ್ರ ಆಗಿ ವಿಜಯಲಕ್ಷ್ಮೀ, ಭೂಪತಿ ಆಗಿ ಜಗನ್ನಾಥ್ ಚಂದ್ರಶೇಖರ್ ನಟಿಸುತ್ತಿದ್ದಾರೆ.

suddiyaana