ಆನೆಯ ಮದ ಇಳಿಸಿದ ಕಿಚ್ಚ ಸುದೀಪ್ – ಎಲಿಮಿನೇಷನ್ ಪ್ರಕ್ರಿಯೆಯಲ್ಲೂ ಕೊನೇ ತನಕ ಆತಂಕದಲ್ಲೇ ಇದ್ದ ವಿನಯ್..!

ಆನೆಯ ಮದ ಇಳಿಸಿದ ಕಿಚ್ಚ ಸುದೀಪ್ – ಎಲಿಮಿನೇಷನ್ ಪ್ರಕ್ರಿಯೆಯಲ್ಲೂ ಕೊನೇ ತನಕ ಆತಂಕದಲ್ಲೇ ಇದ್ದ ವಿನಯ್..!

ಬಿಗ್ ಬಾಸ್ ಮನೆಯಲ್ಲಿ ಸಾಕಷ್ಟು ಸದ್ದು ಮಾಡಿದ್ದವರು ವಿನಯ್ ಗೌಡ. ಅಲ್ಲದೇ, ಅವರು ನಾಮಿನೇಟ್ ಕೂಡ ಆಗಿದ್ದರು. ಹಾಗಾಗಿ, ಅವರ ಮೇಲೆ ಎಲಿಮಿನೇಷನ್ ತೂಗುಗತ್ತಿ ನೇತಾಡುತ್ತಿತ್ತು. ಆದರೆ, ನಾನು ಆನೆಯ ಥರಾ ಎಂದು ಸ್ವಲ್ಪ ಮದವೇರಿದ ಆನೆಯ ರೀತಿಯೇ ನಡೆದುಕೊಂಡಿದ್ದಾರೆ. ಈ ಬಾರಿಯ ವಾರದ ಕಥೆ ಕಿಚ್ಚನ ಜೊತೆಯಲ್ಲಿ ಆನೆಯ ಮದ ಇಳಿಸುವ ಕೆಲಸ ನಡೆದಿದೆ. ಜೊತೆಗೆ ಎಲಿಮಿನೇಷನ್ ಪ್ರಕ್ರಿಯೆ ಕೂಡ ಭಾರಿ ವಿಭಿನ್ನವಾಗಿತ್ತು. ಇದರಲ್ಲೂ ಕೂಡಾ ವಿನಯ್ ಗೌಡಗೆ ಇನ್ನಷ್ಟು ಟೆನ್ಷನ್ ಕೊಟ್ಟ ಬಿಗ್‌ಬಾಸ್ ದುರಂಹಕಾರವನ್ನು ಸಹಿಸಲ್ಲ ಎಂಬ ರೀತಿ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಬಳೆ, ಮಹಿಳೆ ಬಗ್ಗೆ ಮಾತಲ್ಲಿ ಎಲ್ಲೆ ಮೀರುತ್ತಿದ್ದಾರೆ ವಿನಯ್ ಗೌಡ..! – ಬಿಗ್‌ಬಾಸ್ ಫ್ಯಾಮಿಲಿ ಶೋ ಅಲ್ವಾ? ನಮ್ರತಾ ಬಾಯಿಗೂ ಬೇಕಿದೆಯಾ ಬೀಗ?

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರಲ್ಲಿ ಡಾಮಿನೇಟ್‌ ಆಗಿ ವರ್ತಿಸುತ್ತಿದ್ದಾರೆ ಎಂದು ಹೇಳಲಾಗುತ್ತಿರುವ ವಿನಯ್‌ ಅವರು, ಮಹಿಳೆಯರ ಬಳೆ ಬಗ್ಗೆ ಹಗುರವಾಗಿ ಮಾತನಾಡಿದ್ದಕ್ಕೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲಿಯೇ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್‌ನಲ್ಲಿ ಪಂಚಾಯಿತಿಗೆ ಬಂದ ಕಿಚ್ಚ ಸುದೀಪ್‌ ವಿನಯ್‌ಗೆ ಖಡಕ್ ಆಗಿಯೇ ವಾರ್ನಿಂಗ್ ಮಾಡಿದ್ದಾರೆ. ಅಷ್ಟೇ ಅಲ್ಲ ಮಾತಿನ ಮೇಲೆ ನಿಗಾ ಇರಲಿ ಎಂದು ವಿನಯ್‌ಗೆ ಕಿಚ್ಚ ಸುದೀಪ್ ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲ ಬಳೆಗಳ ರಾಜ, ಬಳೆಗಳ ಬಗ್ಗೆ ಹಗುರವಾಗಿ ಮಾತನಾಡಿದ ವಿನಯ್‌ಗೆ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.

ಬಳೆ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಂದು ವಿನಯ್ ಗೌಡ ಅವರನ್ನ ಕಿಚ್ಚ ಸುದೀಪ್ ಪ್ರಶ್ನಿಸಿದರು. ತನಿಷಾ ಹಾಗೂ ಸಂಗೀತಾ ಜೊತೆಗೆ ಕಾರ್ತಿಕ್ ಇರ್ತಾನೆ ಅಂತ ಹಾಗೆ ಹೇಳಿದೆ ಎಂದರು ವಿನಯ್. ಅದಕ್ಕೆ, ತನಿಷಾ ಮತ್ತು ಸಂಗೀತಾಗೆ ‘ಮೀಸೆಯರ ರಾಣಿ’ ಅಂತ ಹೇಳಬಹುದಿತ್ತು ಎಂದು ವಿನಯ್ ಗೌಡಗೆ ತಮ್ಮದೇ ಶೈಲಿಯಲ್ಲಿ ಕಿಚ್ಚ ಸುದೀಪ್ ತಿರುಗೇಟು ನೀಡಿದರು. ವಿನಯ್‌ಗೌಡ ಕ್ಷಮೆ ಕೇಳಿದರು. ಇದಾದ ನಂತರ ಶುರುವಾಗಿದ್ದೇ ಎಲಿಮಿನೇಷನ್ ಆತಂಕ. ಈ ಬಾರಿ ಎಲಿಮಿನೇಷನ್ ವಿಚಾರದಲ್ಲೂ ವಿನಯ್‌ಗೌಡಗೆ ಬಿಗ್‌ಬಾಸ್ ಸಿಕ್ಕಾಪಟ್ಟೆ ಟೆನ್ಷನ್ ನೀಡಿದೆ. ಕೊನೇ ಕ್ಷಣದವರೆಗೂ ಸಾಕಷ್ಟು ಕ್ಯೂರಿಯಸಿಟಿ ಹುಟ್ಟುಹಾಕಿ, ಸ್ಪರ್ಧಿಗಳಿಗೆ ಫುಲ್ ಟೆನ್ಷನ್ ನೀಡಿ, ಎಲಿಮಿನೇಟ್ ಮಾಡಲಾಗಿದೆ. ಅದರಲ್ಲೂ ವಿನಯ್ ಗೌಡ ಅವರ ಪರಿಸ್ಥಿತಿ ಇನ್ನೇನು ಹೊರಗೆ ಹೋಗಿಯೇ ಬಿಟ್ಟರು ಎಂಬಂತ್ತಿತ್ತು. ಕೊನೆಯದಾಗಿ ಉಳಿದ ವಿನಯ್ ಗೌಡ ಮತ್ತು ರಕ್ಷಕ್ ನಡುವೆ ಯಾರು ಉಳಿಯುತ್ತಾರೆ ಎಂಬ ಆತಂಕ ಕೊನೆವರೆಗೂ ಇತ್ತು. ವಾರಪೂರ್ತಿ ಮದವೇರಿದ ಆನೆ ಥರಾ ಆಡುತ್ತಿದ್ದ ವಿನಯ್ ಫುಲ್ ತಣ್ಣಗಾಗಿಬಿಟ್ಟಿದ್ದರು. ಬಿಗ್ ಬಾಸ್ ಮನೆಯ ಆನೆ ಎನ್ನುತ್ತಿದ್ದ ವಿನಯ್‌ ಗೆ ಇಂಥ ಪರಿಸ್ಥಿತಿ ಬರಲಿದೆ ಎಂದು ಯಾರೂ ಊಹಿಸಿರಲಿಲ್ಲ. ಕೊನೇದಾಗಿ ಉಳಿದ ರಕ್ಷಕ್ ಮತ್ತು ವಿನಯ್ ಗೌಡ ಅವರನ್ನು ಆಕ್ಟಿವಿಟಿ ರೂಮ್‌ಗೆ ಕರೆಸಿಕೊಂಡು, ಇಬ್ಬರನ್ನು ಕತ್ತಲಿನಲ್ಲಿ ನಿಲ್ಲಿಸಲಾಯಿತು. ಇಬ್ಬರ ಮೇಲೂ ಲೈಟ್ ಬ್ಲಿಂಕ್ ಆಗುತ್ತಲೇ ಇತ್ತು. ಕೊನೆಗೆ ಯಾರ ಮೇಲೆ ಲೈಟ್ ಇರಲಿದೆಯೋ, ಅವರು ಉಳಿದುಕೊಂಡಂತೆ. ಯಾರ ಮೇಲೆ ಇರುವುದಿಲ್ಲವೋ, ಅವರು ಮನೆಯಿಂದ ಆಚೆ ಹೋದಂತೆ ಲೆಕ್ಕ. ಕೊನೇ ಕ್ಷಣದಲ್ಲಿ ವಿನಯ್ ಗೌಡ ಸೇಫ್ ಆದರು. ನಂತರ ಮಾತನಾಡಿದ ವಿನಯ್ ಗೌಡ, ನನ್ನಿಂದ ಏನಾದ್ರೂ ತಪ್ಪಾಗಿದ್ರೆ, ದಯವಿಟ್ಟು ನನ್ನನು ಕ್ಷಮಿಸಿ. ನಾನು ಹೇಳಿದ ಯಾವುದೇ ಮಾತುಗಳು, ಯಾರನ್ನೂ ಹರ್ಟ್ ಮಾಡುವುದಕ್ಕಾಗಿ ಮಾತನಾಡಿಲ್ಲ. ವಿಶೇಷವಾಗಿ ಎಲ್ಲ ಮಹಿಳೆಯರಿಗೆ ನಾನು ತುಂಬ ಗೌರವ ಕೊಡ್ತಿನಿ. ನನ್ನ ಹೆಂಡತಿಯೇ ನನ್ನ ದೊಡ್ಡ ಶಕ್ತಿ ಎಂದು ನಂಬಿರುವವನು ನಾನು. ಇವತ್ತು ನಾನು ಏನೇ ಆಗಿದ್ದರೂ, ಅದು ಅವಳಿಂದ. ಇಂಥ ನನ್ನ ಮನಸ್ಸಿನಲ್ಲಿ ಯಾವುದೇ ಹೆಣ್ಣು ಮಗುವಿನ ಮೇಲೂ ಅಗೌರವ ಇಲ್ಲ ಅಥವಾ ಕೆಟ್ಟದಾಗಿ ನಾನು ಯಾವತ್ತೂ ಮಾತನಾಡುವುದಿಲ್ಲ. ನನ್ನ ನಂಬಿ ಸಾಕಷ್ಟು ಜನರು ನನಗೆ ವೋಟ್ ಮಾಡಿದ್ದೀರಿ. ಎಲ್ಲರಿಗೂ ಥ್ಯಾಂಕ್ಯೂ.. ಈ ತಪ್ಪು ನಾನು ಬಿಗ್ ಬಾಸ್ ಮನೆಯಲ್ಲಿರುವವರೆಗೂ ಅಥವಾ ನನ್ನ ಜೀವಂತ ಇರುವವರೆಗೂ ಮತ್ತೆಂದೂ ನಡೆಯುವುದಿಲ್ಲ ಎಂದು ನಾನು ಪ್ರಾಮೀಸ್ ಮಾಡುತ್ತೇನೆ. ಎಲ್ಲರಿಗೂ ಥ್ಯಾಂಕ್ಸ್.. ಸುದೀಪ್ ಸರ್ ನಿಮಗೂ ಧನ್ಯವಾದಗಳು..’ ಎಂದು ವಿನಯ್ ಗೌಡ ಹೇಳಿದರು. ಕೊನೆಗೂ ವಿನಯ್‌ಗೌಡ ಬಾಯಲ್ಲಿ ಇಷ್ಟು ದಿನ ದರ್ಪದ, ದುರಂಹಕಾರದ ಮಾತುಗಳೇ ಕೇಳಿ ಬರುತ್ತಿದ್ದವು. ಯಾವಾಗ ವೀಕೆಂಡ್ ಎಪಿಸೋಡ್‌ನಲ್ಲಿ ಕಿಚ್ಚನ ಕ್ಲಾಸ್, ಎಲಿಮಿನೇಟ್ ಆಗುವ ಆತಂಕ ಕಂಡುಬಂತೋ ವೀಕ್ಷಕರು ಕೂಡಾ ಆನೆಯ ಮದ ಇನ್ನಾದರೂ ಇಳಿಯಿತಲ್ಲಾ ಅಂತಾ ಸಮಾಧಾನ ಪಟ್ಟಿದ್ದಾರೆ.

Sulekha